ಮುಂಬೈ: ಐಪಿಎಲ್ನಲ್ಲಿ ಬ್ರಾಡ್ಕಾಸ್ಟ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬ್ರಿಟನ್ನ ಜಾನ್ ವಿಲಿಯಮ್ ಲಾಂಗ್ಫೋರ್ಡ್(75) ಮುಂಬೈನ ಹೋಟೆಲ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸೋಮವಾರ ಬೆಳಗ್ಗೆ ಹೋಟೆಲ್ನಲ್ಲಿ ಲಾಂಗ್ಫೋರ್ಡ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಹೋಟೆಲ್ನವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರೊಳಗೆ ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಜಾನ್ ಸಾವಿಗೆ ಐಪಿಎಲ್ ಆಡಳಿತ ಮಂಡಳಿ ಸಂತಾಪ ಸೂಚಿಸಿದೆ.

11:11 PM (IST) Apr 01
10:22 PM (IST) Apr 01
ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಸರ್ಕಾರ ಸ್ವಾಧೀನಪಡಿಸಿಕೊಂಡ ಭೂಮಿಗೆ ಭಾರಿ ಮೊತ್ತದ ಪರಿಹಾರ ದೊರೆತಿದೆ. ಇದರಿಂದಾಗಿ, ಭೂಮಿ ನೀಡಿದ ರೈತರೊಬ್ಬರು 15 ಕೋಟಿ ರೂ. ಪರಿಹಾರ ಪಡೆದು ಹೆಲಿಕಾಪ್ಟರ್ ಖರೀದಿಸಿದ ವಿಚಾರ ಈಗ ಭಾರಿ ಸುದ್ದಿಯಾಗುತ್ತಿದೆ.
10:10 PM (IST) Apr 01
ಮಹಾರಾಷ್ಟ್ರದ ಅಕೋಲಾದಲ್ಲಿ, ಸಹಾಯಕ ಪೊಲೀಸ್ ಉಪನಿರೀಕ್ಷಕ ರಾಜೇಶ್ ಜಾಧವ್ ಅವರು ವಶದಲ್ಲಿದ್ದ ಮಹಿಳೆಯ ಮಗಳನ್ನು ಲೈಂಗಿಕ ಸುಖಕ್ಕಾಗಿ ಕಳುಹಿಸುವಂತೆ ಬೇಡಿಕೆಯಿಟ್ಟಿದ್ದಾರೆ. ಈ ಘಟನೆಯ ನಂತರ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.
09:48 PM (IST) Apr 01
ನಟಿ ಟಬು ಬಾಲಿವುಡ್ನಲ್ಲಿ ಹೆಚ್ಚು ಸಕ್ರಿಯರಾಗಿದ್ದರೂ, ತೆಲುಗಿನಲ್ಲಿ ದೊಡ್ಡ ಸ್ಟಾರ್ ಆಗುವ ಅವಕಾಶವನ್ನು ಕಳೆದುಕೊಂಡರು. ಅದ್ರಲ್ಲೂ ಚಿರಂಜೀವಿ ಜೊತೆಗಿನ ಇಂಡಸ್ಟ್ರಿ ಹಿಟ್ ಸಿನಿಮಾವನ್ನು ಮಿಸ್ ಮಾಡಿಕೊಂಡರು.
09:12 PM (IST) Apr 01
ತಮಿಳಿನ ಬ್ಲಾಕ್ಬಸ್ಟರ್ ಹಿಟ್ ಆಗಿದ್ದ ಒಂದು ಸಿನಿಮಾದಲ್ಲಿ ನಟಿಸಿದ್ದು ನಾನು ಮಾಡಿದ ಅತಿದೊಡ್ಡ ತಪ್ಪು ಎಂದು ನಟಿ ನಯನತಾರಾ ಸಂದರ್ಶನವೊಂದರಲ್ಲಿ ಓಪನ್ ಆಗಿ ಹೇಳಿಕೊಂಡಿದ್ದಾರೆ. ಆ ಸಿನಿಮಾ ಯಾವುದು? ಇಲ್ಲಿದೆ ವಿವರ.
08:56 PM (IST) Apr 01
ಡೊನಾಲ್ಡ್ ಟ್ರಂಪ್ ತಮ್ಮ ಹೊಸ ಸೋಶಿಯಲ್ ಮೀಡಿಯಾ ಪೋಸ್ಟ್ನಲ್ಲಿ ಇರಾನ್ ಕದನ ವಿರಾಮಕ್ಕಾಗಿ ಯಾಚಿಸುತ್ತಿದೆ ಎಂದು ಹೇಳಿದ್ದಾರೆ. ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದೊಂದೇ ಕದನ ವಿರಾಮಕ್ಕೆ ಇರುವ ಏಕೈಕ ಷರತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
08:07 PM (IST) Apr 01
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಖಾಸಗಿ ವಾಹನಗಳ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಬೆಲೆಯನ್ನು ಏಪ್ರಿಲ್ 1 ರಿಂದ ₹3,075 ಕ್ಕೆ ಹೆಚ್ಚಿಸಿದೆ. ಈ ಹೊಸ ದರವು, ಹೊಸದಾಗಿ ಪಾಸ್ ಖರೀದಿಸುವವರಿಗೆ ಅಥವಾ ನವೀಕರಿಸುವವರಿಗೆ ಮಾತ್ರ ಅನ್ವಯಿಸುತ್ತದೆ.
07:51 PM (IST) Apr 01
ಈ ಹಿಂದೆ ಅಯೋಧ್ಯೆ ರಾಮ ಮಂದಿರಕ್ಕೂ ಭೇಟಿ ನೀಡಿದ್ದ ಪ್ರಿಯಾಂಕಾ, ಈಗ ಸುವರ್ಣ ಮಂದಿರಕ್ಕೆ ಭೇಟಿ ನೀಡುವ ಮೂಲಕ ತಮ್ಮ ಅಧ್ಯಾತ್ಮಿಕ ಪಯಣವನ್ನು ಮುಂದುವರಿಸಿದ್ದಾರೆ. ಕೇವಲ ಗ್ಲಾಮರ್ ಲೋಕಕ್ಕೆ ಸೀಮಿತವಾಗದೆ, ಪೂಜೆ, ಪುನಸ್ಕಾರ ಮತ್ತು ಜನಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವರು ಇತರರಿಗೆ ಮಾದರಿಯಾಗಿದ್ದಾರೆ.
07:22 PM (IST) Apr 01
ಉತ್ತರ ಪ್ರದೇಶದ ಹಾಪುರ್ನಲ್ಲಿ, ಆಹಾರ ಕಳ್ಳತನದ ಆರೋಪದ ಮೇಲೆ 7 ವರ್ಷದ ಬಾಲಕನನ್ನು ಅಂಗಡಿ ಮಾಲೀಕನೊಬ್ಬ ಐದು ಗಂಟೆಗಳ ಕಾಲ ಡೀಪ್ ಫ್ರೀಜರ್ನಲ್ಲಿ ಕೂಡಿಹಾಕಿದ್ದಾನೆ. ಈ ಅಮಾನವೀಯ ಘಟನೆಯ ವಿಡಿಯೋ ವೈರಲ್ ಆದ ನಂತರ, ಸ್ಥಳೀಯರು ಬಾಲಕನನ್ನು ರಕ್ಷಿಸಿದ್ದಾರೆ.
06:52 PM (IST) Apr 01
Iran Sends Crude Oil to India After 7 Years Amid Middle East War ಯುದ್ಧದ ಉದ್ವಿಗ್ನತೆಯ ನಡುವೆಯೂ, ಇರಾನ್ ಏಳು ವರ್ಷಗಳ ಸುದೀರ್ಘ ವಿರಾಮದ ನಂತರ ಭಾರತಕ್ಕೆ ಕಚ್ಚಾ ತೈಲವನ್ನು ಹೊತ್ತ ಹಡಗನ್ನು ಕಳುಹಿಸಿದೆ. 'ಪಿಂಗ್ ಶುನ್' ಹೆಸರಿನ ಈ ಹಡಗು ಸುಮಾರು 5 ಲಕ್ಷ ಬ್ಯಾರಲ್ ತೈಲವನ್ನು ತರುತ್ತಿದೆ.
06:49 PM (IST) Apr 01
ಧುರಂಧರ್ 2 ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಈ ಸಾಲಿಗೆ ಈಗ ನಟ ವಿಕ್ಕಿ ಕೌಶಲ್ ಕೂಡ ಸೇರಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚಿತ್ರತಂಡವನ್ನು ಮನಸಾರೆ ಹೊಗಳಿದ್ದಾರೆ.
06:39 PM (IST) Apr 01
ಹಿಂದೆ 'ಬಾಹುಬಲಿ' ಸಿನಿಮಾವನ್ನು 'ಬಾಹುಬಲಿ ದಿ ಎಪಿಕ್' ಹೆಸರಿನಲ್ಲಿ ಎರಡೂ ಭಾಗಗಳನ್ನು ಸೇರಿಸಿ ರಿಲೀಸ್ ಮಾಡಲಾಗಿತ್ತು. ಈಗ ರಣವೀರ್ ಅಭಿಮಾನಿಗಳು ಕೂಡ ಅದೇ ರೀತಿಯ ನಿರೀಕ್ಷೆಯಲ್ಲಿದ್ದಾರೆ. ಸದ್ಯಕ್ಕಂತೂ ಹಾಂಕಾಂಗ್ ಸಿನಿಪ್ರಿಯರಿಗೆ ಈ 'ಧುರಂಧರ್ ಮ್ಯಾರಾಥಾನ್' ಮಸ್ತ್ ಮನರಂಜನೆ ನೀಡಲು ಸಜ್ಜಾಗಿದೆ. ಭಾರತದಲ್ಲೂ ಇಂಥದ್ದೊಂದು ಪ್ರದರ್ಶನ ನಡೆಯುತ್ತಾ?
06:21 PM (IST) Apr 01
ಮುಂದಿನ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೇರಲಿದೆ ಎಂದು ಮನೋರಮಾ ನ್ಯೂಸ್ ಸಿ-ವೋಟರ್ ಸಮೀಕ್ಷೆ ಭವಿಷ್ಯ ನುಡಿದಿದೆ. 140 ಸ್ಥಾನಗಳ ಪೈಕಿ ಯುಡಿಎಫ್ 69-81 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದು, ಆಡಳಿತಾರೂಢ ಎಲ್ಡಿಎಫ್ 57-69 ಸ್ಥಾನಗಳಿಗೆ ಸೀಮಿತವಾಗಲಿದೆ.
06:20 PM (IST) Apr 01
06:01 PM (IST) Apr 01
05:28 PM (IST) Apr 01
05:28 PM (IST) Apr 01
ಗ್ರಾಂಡ್ 7 ಸ್ಪೋರ್ಟ್ಸ್ ಮೀಟ್ನ ಅಧ್ಯಕ್ಷತೆ ವಹಿಸಿದ್ದ ಚೆನ್ನೈಸ್ ಅಮಿರ್ತಾ ಗ್ರೂಪ್ನ ಅಧ್ಯಕ್ಷರಾದ ಆರ್.ಬೂಮೀನಾಥನ್ ಅವರು ಮಾತಾಡಿ ದಿನೇಶ್ ಕಾರ್ತಿಕ್ ಈ ದಾಖಲೆಯು ವಿದ್ಯಾರ್ಥಿಗಳಲ್ಲಿ ದೃಢತೆ, ಪರಿಶ್ರಮ ಹಾಗೂ ಆತ್ಮವಿಶ್ವಾಸದ ಮೌಲ್ಯಗಳನ್ನು ಉತ್ತೇಜಿಸಲು ನೆರವಾಗುತ್ತದೆ ಎಂದಿದ್ದಾರೆ. ಏನಿದು ಜರ್ಸಿ ನಂ.19 ಸ್ಪೆಷಾಲಿಟಿ? ನೋಡಿ..
05:12 PM (IST) Apr 01
05:05 PM (IST) Apr 01
04:57 PM (IST) Apr 01
04:46 PM (IST) Apr 01
04:29 PM (IST) Apr 01
ಜಾಗತಿಕ ಯುದ್ಧದ ಭೀತಿಯಿಂದಾಗಿ ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟವು ದಾಖಲೆಯ ಏರಿಕೆ ಕಂಡಿದೆ. ಈ ಮಹತ್ವದ ಬದಲಾವಣೆಯಲ್ಲಿ, ಟಿವಿಎಸ್ ಮತ್ತು ಬಜಾಜ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದ್ದು, ಅಗ್ರಸ್ಥಾನದಲ್ಲಿದ್ದ ಓಲಾ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.
04:27 PM (IST) Apr 01
ಮಹಿಳೆಯೊಬ್ಬಳು ತಾನು ಮಾಡುತ್ತಿರುವ ಕೃತ್ಯವನ್ನು ವೀಡಿಯೋ ಮಾಡುವಂತೆ ಅಂಗಡಿ ಮಾಲೀಕರೊಬ್ಬರಿಗೆ ತಿಳಿಸಿ ಬಳಿಕ ಒಡಿಶಾದ ಹೈಕೋರ್ಟ್ ಮುಂದೆಯೇ ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದಂತಹ ಘಟನೆ ನಡೆದಿದೆ.
04:05 PM (IST) Apr 01
03:35 PM (IST) Apr 01
ಮದುವೆ ಮಾಡಿಸಲಿಲ್ಲ ಎಂಬ ಕಾರಣಕ್ಕೆ ಮಾನಸಿಕ ಅಸ್ವಸ್ಥನಾಗಿದ್ದ ಮಗನೊಬ್ಬ ತನ್ನ ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಜಗಳದ ವೇಳೆ ತಾಯಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಾಯಿ ಸಾವನ್ನಪ್ಪಿದ್ದಾರೆ.
03:03 PM (IST) Apr 01
02:48 PM (IST) Apr 01
newborn baby found in train toilet : ರೈಲಿನ ಶೌಚಾಲಯದಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿದೆ. ಪ್ರಯಾಣಿಕರೊಬ್ಬರು ಮಗುವನ್ನು ಕಂಡು ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ನಂತರ ಮಗುವನ್ನು ರಕ್ಷಿಸಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಈ ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.
02:23 PM (IST) Apr 01
ಟಿ20 ಮಾದರಿಯಿಂದ ತಮ್ಮನ್ನು ಹೊರಗಿಟ್ಟಿರುವುದಕ್ಕೆ ವೇಗಿ ಮೊಹಮ್ಮದ್ ಶಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ವರ್ಷಗಳ ಐಪಿಎಲ್ ಅಂಕಿಅಂಶಗಳನ್ನು ಉಲ್ಲೇಖಿಸಿ, ತಾನು ಅತ್ಯುತ್ತಮ ಪ್ರದರ್ಶನ ನೀಡಿದ್ದರೂ ತನ್ನನ್ನು ಟಿ20 ಬೌಲರ್ ಅಲ್ಲ ಎಂದು ಪರಿಗಣಿಸುವುದನ್ನು ಅವರು ಪ್ರಶ್ನಿಸಿದ್ದಾರೆ. ಸದ್ಯಕ್ಕೆ ನಿವೃತ್ತಿಯಾಗುವ ಯೋಚನೆ ಇಲ್ಲವೆಂದು ಶಮಿ ಸ್ಪಷ್ಟಪಡಿಸಿದ್ದಾರೆ.
02:13 PM (IST) Apr 01
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಹಾರ ಮೂಲದ ಮೌಲ್ವಿ ಅಬ್ದುಲ್ ಸಲೀಂ ಚತುರ್ವೇದಿಯನ್ನು ಯುಪಿ ಎಸ್ಟಿಎಫ್ ಬಂಧಿಸಿದೆ. ತನ್ನ ತಪ್ಪನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆಯಾಚಿಸಿದರೂ, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
01:44 PM (IST) Apr 01
01:28 PM (IST) Apr 01
2024ರಲ್ಲಿ ಬೆಂಗಾಲಿ ನಟಿ ಶ್ರೀಲೇಖಾ ಮಿತ್ರ ಅವರು ರಂಜಿತ್ ವಿರುದ್ಧ ಕಿರುಕುಳದ ಆರೋಪ ಮಾಡಿದ್ದರು. ಆ ವಿವಾದದ ಬೆನ್ನಲ್ಲೇ ರಂಜಿತ್ ಅವರು ಕೇರಳ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಅಂದು ಅವರು ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು. ಈಗ ಮತ್ತೆ ಬಂಧನವಾಗಿದೆ, ಏಕೆ?
01:27 PM (IST) Apr 01
12:47 PM (IST) Apr 01
12:44 PM (IST) Apr 01
12:27 PM (IST) Apr 01
ಏಪ್ರಿಲ್ 1 ರಿಂದ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಹಲವು ಪ್ರಮುಖ ಹೆದ್ದಾರಿಗಳಲ್ಲಿ ಟೋಲ್ ಶುಲ್ಕವನ್ನು ಹೆಚ್ಚಿಸಿದೆ. ಈ ದರ ಏರಿಕೆಯು ಕಾರು, ಬಸ್, ಮತ್ತು ಲಘು ವಾಣಿಜ್ಯ ವಾಹನಗಳ ಮೇಲೆ ಪರಿಣಾಮ ಬೀರಲಿದ್ದು, ಪ್ರಯಾಣಿಕರ ಜೇಬಿಗೆ ಹೊರೆಯಾಗಲಿದೆ.
12:16 PM (IST) Apr 01
ಅಪರೂಪದ, 50 ವರ್ಷದ ಹಳೆಯ ಟಿಫಿನ್ ಸೆಂಟರ್ಗಳಲ್ಲಿ ಮಲ್ಲೇಪಲ್ಲಿಯಲ್ಲಿರುವ ‘ಲಿಂಗಯ್ಯ ಟಿಫಿನ್ ಸೆಂಟರ್ ನಲ್ಲಿ ಇಡ್ಲಿ ಮತ್ತು ವಡೆ ಜೊತೆ ನೀಡಲಾಗುವ ಚಟ್ನಿಗಾಗಿ ಜನರು ಬೆಳಗ್ಗೆಯೇ ಬಂದು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ.
12:06 PM (IST) Apr 01
ನಟ ರಕ್ಷಿತ್ ಶೆಟ್ಟಿ ಒಡೆತನದ ಪರಂವಾಹ್ ಸ್ಟುಡಿಯೋಗೆ ದೆಹಲಿ ಹೈಕೋರ್ಟ್ 25 ಲಕ್ಷ ರೂ. ದಂಡ ವಿಧಿಸಿದೆ. 2012ರ 'ಬ್ಯಾಚುಲರ್ ಪಾರ್ಟಿ' ಸಿನಿಮಾದಲ್ಲಿ MTR ಮ್ಯೂಸಿಕ್ ಸಂಸ್ಥೆಯ ಹಾಡನ್ನು ಅನುಮತಿಯಿಲ್ಲದೆ ಬಳಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ. ಅಸಲಿ ವಿಷ್ಯ ಇಲ್ಲಿದೆ!
11:19 AM (IST) Apr 01
5 ದಶಕಗಳ ಬಳಿಕ, ನಾಸಾದ 'ಆರ್ಟೆಮಿಸ್ 2' ಯೋಜನೆಯಡಿ ನಾಲ್ವರು ಗಗನಯಾನಿಗಳು ಓರಯಾನ್ ನೌಕೆಯಲ್ಲಿ ಚಂದ್ರನತ್ತ ಪ್ರಯಾಣ ಬೆಳೆಸಲು ಸಜ್ಜಾಗಿದ್ದಾರೆ. ಈ 10 ದಿನಗಳ ಯಾನದಲ್ಲಿ ಚಂದ್ರನನ್ನು ಸುತ್ತು ಹಾಕಿ ಬರಲಿದ್ದು, ಭವಿಷ್ಯದಲ್ಲಿ ಚಂದ್ರನ ಮೇಲೆ ಮಾನವರನ್ನು ಇಳಿಸುವ ನಿಟ್ಟಿನಲ್ಲಿ ಓರಿಯನ್ ನೌಕೆಯ ಪರೀಕ್ಷೆ.
10:50 AM (IST) Apr 01
ದೇಶವನ್ನೇ ಬೆಚ್ಚಿಬೀಳಿಸಿದ್ದ ಮೇಘಾಲಯ ಹನಿಮೂನ್ ಕೊಲೆ ಪ್ರಕರಣದಲ್ಲಿ ಸಾವಿಗೀಡಾದ ರಾಜ ರಘುವಂಶಿ ಕುಟುಂಬದಲ್ಲಿ ಇದೀಗ ಸಂತಸ ಮನೆಮಾಡಿದೆ. ರಾಜನ ಅಣ್ಣನಿಗೆ ಗಂಡು ಮಗು ಜನಿಸಿದ್ದು, ಆತನೇ ಮರುಹುಟ್ಟು ಪಡೆದು ಬಂದಿದ್ದಾನೆ ಎಂದು ಕುಟುಂಬಸ್ಥರು ನಂಬಿದ್ದಾರೆ. ದುರಂತ ನಡೆದ ಮನೆಯಲ್ಲಿ ಈಗ ಸಂಭ್ರಮ ಮನೆಮಾಡಿದೆ.
09:53 AM (IST) Apr 01
ತನ್ನ ನಾಯಕರ ಹತ್ಯೆಗೆ ಪ್ರತೀಕಾರವಾಗಿ, ಗಲ್ಫ್ನಲ್ಲಿರುವ ಅಮೆರಿಕದ ಪ್ರಮುಖ ಐಟಿ ಕಂಪನಿಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಎಚ್ಚರಿಸಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕವು ಇರಾನ್ನ ನೀರು ಶುದ್ಧೀಕರಣ ಘಟಕದ ಮೇಲೆ ದಾಳಿ ನಡೆಸಿದೆ.