Delhi pollution: ಶಾಲೆಗಳಿಗೆ ರಜೆ, ವರ್ಕ್ ಫ್ರಂ ಹೋಂ ವಿಸ್ತರಣೆ

By Kannadaprabha NewsFirst Published Nov 22, 2021, 8:00 AM IST
Highlights
  • ದೆಹಲಿಯಲ್ಲಿ ವಾಯು ಗುಣಮಟ್ಟಸುಧಾರಿಸದ ಕಾರಣ ಮುಂದಿನ ಆದೇಶದವರೆಗೂ ಶಾಲಾ ಕಾಲೇಜುಗಳನ್ನು ಬಂದ್‌ 
  • ನ.26ರವರೆಗೆ ದಿಲ್ಲಿ ಸರ್ಕಾರಿ ನೌಕರರಿಗೆ ವರ್ಕ್ ಫ್ರಂ ಹೋಮ್‌ ಮುಂದುವರಿಸುವಂತೆ ಸರ್ಕಾರ ಆದೇಶ

ನವದೆಹಲಿ (ನ.22): ದೆಹಲಿಯಲ್ಲಿ (Delhi) ವಾಯು ಗುಣಮಟ್ಟ (Air Pollution) ಸುಧಾರಿಸದ ಕಾರಣ ಮುಂದಿನ ಆದೇಶದವರೆಗೂ ಶಾಲಾ ಕಾಲೇಜುಗಳನ್ನು (School Colleges) ಬಂದ್‌ ಮಾಡುವಂತೆ ಹಾಗೂ ನ.26ರವರೆಗೆ ದಿಲ್ಲಿ ಸರ್ಕಾರಿ ನೌಕರರಿಗೆ (Govt employees) ವರ್ಕ್ ಫ್ರಂ ಹೋಮ್‌ (Work From Home) ಮುಂದುವರಿಸುವಂತೆ ಸರ್ಕಾರ ಆದೇಶಿಸಿದೆ. ಭೌತಿಕ ತರಗತಿಗಳಿಗೆ ಮಾತ್ರ ನಿರ್ಬಂಧ ವಿಧಿಸಲಾಗಿದೆ. ಆನ್ಲೈನ್‌ (Online) ತರಗತಿಗಳು ಹಾಗೂ ಬೋರ್ಡ್‌ ಪರೀಕ್ಷೆ (Board Exam) ನಡೆಯಲಿದೆ. ಈ ನಡುವೆ, ದಿಲ್ಲಿಗೆ ಹೊರಭಾಗಗಳಿಂದ ಟ್ರಕ್‌ ಪ್ರವೇಶವನ್ನು ನ.26ರವರೆಗೆ ವಿಸ್ತರಿಸಲಾಗಿದೆ. 

ಇನ್ನು ಮಾಲಿನ್ಯ (Pollution) ಅತ್ಯಧಿಕ ಇದ್ದರು ಕಟ್ಟಡ ನಿರ್ಮಾಣ ಚಟುವಟಿಕೆಗೆ ಅನುಮತಿಸಲಾಗಿದೆ. ಭಾನುವಾರ ಇಲ್ಲಿ ವಾಯು ಗುಣಮಟ್ಟ 382 ಅಂಕ (ಅತಿ ಕಳಪೆ) ಇತ್ತು ಎಂದು ಹವಾಮಾನ ಇಲಾಖೆ (Weather Department) ಸೂಚನೆ ನೀಡಿದೆ. 

ಮಾಲಿನ್ಯ ನಿಯಂತ್ರಿಸಲು ಸುಪ್ರೀಂ ಗಡುವು : 

 ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ (Air Pollution In Delhi) ದಿನೇದಿನೇ ಹೆಚ್ಚುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌ (Supreme Court), ಕೂಡಲೇ ಕೇಂದ್ರ ಸರ್ಕಾರ ಈ ಬಗ್ಗೆ ತುರ್ತು ಸಭೆ ನಡೆಸಿ, ಮಂಗಳವಾರ ಸಂಜೆಯೊಳಗೆ ನಿರ್ಧಾರ ತಿಳಿಸುವಂತೆ ಗಡುವು ವಿಧಿಸಿ ಆದೇಶಿಸಿದೆ. ಅಲ್ಲದೆ ಕೇಂದ್ರ ಹಾಗೂ ದೆಹಲಿ ಸರ್ಕಾರಗಳು (Union ANd Delhi Govt) ರಾಷ್ಟ್ರ ರಾಜಧಾನಿ ಪ್ರದೇಶ (ಎನ್‌ಸಿಆರ್‌)ದಲ್ಲಿ ಕೆಲ ಕಾಲ ಎಲ್ಲಾ ನೌಕರರಿಗೆ ವರ್ಕ್ ಫ್ರಂ ಹೋಂ (Work From Home) ಜಾರಿಗೊಳಿಸಲು ಪರಿಶೀಲನೆ ನಡೆಸುವಂತೆಯೂ ಸೂಚಿಸಿದೆ.

ಇದೇ ವೇಳೆ, ಇಷ್ಟುದಿನ ದೆಹಲಿ ಸುತ್ತಮುತ್ತಲಿನ ರಾಜ್ಯಗಳ ರೈತರು ತಮ್ಮ ಹೊಲದಲ್ಲಿ ಹುಲ್ಲು ಸುಡುವುದನ್ನೇ ದೆಹಲಿಯ ವಾಯುಮಾಲಿನ್ಯಕ್ಕೆ ಕಾರಣ ಎಂಬಂತೆ ‘ಗದ್ದಲ ಎಬ್ಬಿಸುತ್ತಿದ್ದ’ ಸರ್ಕಾರಗಳನ್ನು ತರಾಟೆ ತೆಗೆದುಕೊಂಡಿರುವ ನ್ಯಾಯಪೀಠ, ಬೆಳೆ ತ್ಯಾಜ್ಯ ಸುಡುವಿಕೆಯಿಂದ ಶೇ.4ರಿಂದ 10ರಷ್ಟುಮಾತ್ರ ಮಾಲಿನ್ಯ (Pollution) ಆಗುತ್ತಿದೆ. ರಾಜಧಾನಿಯ ಮಾಲಿನ್ಯಕ್ಕೆ ಮುಖ್ಯವಾದ ಮೂರು ಕಾರಣಗಳೆಂದರೆ ನಿರ್ಮಾಣ ಚಟುವಟಿಕೆಯ ಧೂಳು, ಉದ್ದಿಮೆಗಳು ಹಾಗೂ ವಾಹನಗಳು ಎಂದು ಹೇಳಿದೆ.

ಈ ಮಧ್ಯೆ, ಸುಪ್ರೀಂಕೋರ್ಟ್‌ನಲ್ಲಿ ಅಫಿಡವಿಟ್‌ ಸಲ್ಲಿಸಿರುವ ದೆಹಲಿಯ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಸರ್ಕಾರ, ‘ಅಗತ್ಯಬಿದ್ದರೆ ದೆಹಲಿಯಲ್ಲಿ ಸಂಪೂರ್ಣ ಲಾಕ್‌ಡೌನ್‌ (Lockdown) ಜಾರಿಗೊಳಿಸುವುದಕ್ಕೆ ನಾವು ಸಿದ್ಧರಿದ್ದೇವೆ. ಆದರೆ, ನಾವೊಬ್ಬರೇ ಲಾಕ್‌ಡೌನ್‌ ಜಾರಿಗೊಳಿಸಿದರೆ ಸಾಲದು, ರಾಷ್ಟ್ರ ರಾಜಧಾನಿ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ತಮ್ಮ ಭಾಗಗಳಲ್ಲಿ ಉತ್ತರ ಪ್ರದೇಶ, ಪಂಜಾಬ್‌, ಹರ್ಯಾಣ ಸರ್ಕಾರಗಳೂ ಲಾಕ್‌ಡೌನ್‌ ಘೋಷಿಸಬೇಕು’ ಎಂದು ತಿಳಿಸಿದೆ.

ಕೂಡಲೇ ತುರ್ತು ಸಭೆ ಕರೆಯಿರಿ:

ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಿಸಲು ಕೇಂದ್ರ ಹಾಗೂ ಸಂಬಂಧಪಟ್ಟರಾಜ್ಯ ಸರ್ಕಾರಗಳು ಅನಗತ್ಯ ಚಟುವಟಿಕೆಗಳನ್ನು ಸದ್ಯಕ್ಕೆ ನಿಲ್ಲಿಸುವುದು, ವರ್ಕ್ ಫ್ರಂ ಹೋಮ್‌ ಜಾರಿಗೊಳಿಸುವುದೂ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಮಂಗಳವಾರ ಸಂಜೆಯೊಳಗೆ ತುರ್ತು ಸಭೆ (Emergency Meeting) ನಡೆಸಿ ನಿರ್ಧಾರ ಕೈಗೊಂಡು ನಮಗೆ ತಿಳಿಸಬೇಕು. ಸಭೆಯಲ್ಲಿ ಕೇಂದ್ರ ಸರ್ಕಾರದ ಜೊತೆ ದೆಹಲಿ, ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್‌ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳೂ ಪಾಲ್ಗೊಳ್ಳಬೇಕು ಎಂದು ಸುಪ್ರೀಂಕೋರ್ಟ್‌ ಸೂಚಿಸಿತು.

ರೈತರ ಬಗ್ಗೆ ಅನಗತ್ಯ ಗದ್ದಲ:

ವಿಚಾರಣೆಯ ವೇಳೆ ಕೇಂದ್ರ ಸರ್ಕಾರವು ದೆಹಲಿಯಲ್ಲಿನ ವಾಯುಮಾಲಿನ್ಯಕ್ಕೆ ಸುತ್ತಮುತ್ತಲ ರಾಜ್ಯಗಳ ರೈತರು ಹುಲ್ಲು ಸುಡುವುದು ಕೇವಲ ಶೇ.4ರಿಂದ ಶೇ.10ರಷ್ಟುಮಾತ್ರ ಕಾರಣ ಎಂದು ತಿಳಿಸಿತು. ಅದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರ ಪೀಠ, ಹಾಗಿದ್ದರೆ ಇಷ್ಟುದಿನ ಏಕೆ ರೈತರ ಬಗ್ಗೆ ಅಷ್ಟೊಂದು ಗದ್ದಲ ಎಬ್ಬಿಸುತ್ತಿದ್ದಿರಿ? ವೈಜ್ಞಾನಿಕ ಅಥವಾ ವಾಸ್ತವಿಕ ಆಧಾರವಿಲ್ಲದೆ ಸುಮ್ಮನೆ ವಾದ ಮಾಡುತ್ತಿದ್ದಿರಾ? ಶೇ.75ರಷ್ಟುಮಾಲಿನ್ಯಕ್ಕೆ ಕಾರಣ ಉದ್ದಿಮೆಗಳು, ಧೂಳು ಹಾಗೂ ವಾಹನಗಳು ಎಂದು ಈಗ ಹೇಳುತ್ತಿದ್ದೀರಿ. ಹಾಗಿದ್ದರೆ ಇವುಗಳನ್ನು ನಿಯಂತ್ರಿಸಲು ಕೂಡಲೇ ಕ್ರಮ ಕೈಗೊಳ್ಳಿ ಎಂದು ಹೇಳಿತು.

ಸುಪ್ರೀಂ ಸೂಚನೆಗಳು

-  ತುರ್ತು ಸಭೆ ನಡೆಸಿ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳುವ ಕ್ರಮಗಳನ್ನು ತಿಳಿಸಬೇಕು

- ರೈತರು ಹುಲ್ಲು ಸುಡುತ್ತಾರೆಂದು ಸರ್ಕಾರ ಗದ್ದಲ ಎಬ್ಬಿಸುವುದು ಬಿಟ್ಟು ನಿಜವಾದ ಕಾರಣ ಪರಿಶೀಲಿಸಬೇಕು

- ಮಾಲಿನ್ಯಕ್ಕೆ 3 ಮುಖ್ಯ ಕಾರಣಗಳಾದ ಉದ್ದಿಮೆಗಳು, ಧೂಳು ಹಾಗೂ ವಾಹನಗಳನ್ನು ಸದ್ಯಕ್ಕೆ ನಿಯಂತ್ರಿಸಬೇಕು

- ವಾಹನ ದಟ್ಟಣೆ ಕಡಿಮೆ ಮಾಡಲು ವರ್ಕ್ ಫ್ರಂ ಹೋಂ ಜಾರಿಗೆ ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು

click me!