
ಬೆಂಗಳೂರು (ಜೂನ್ 25): ಇಂದು ಪ್ರಜಾಪ್ರಭುತ್ವದ ಅತ್ಯಂತ ಕರಾಳ ದಿನಕ್ಕೆ (darkest hour of democracy) 47ನೇ ವರ್ಷ. ಪ್ರಧಾನಿ ಮೋದಿ (PM Modi) ಅವರನ್ನು ಸರ್ವಾಧಿಕಾರಿ, ಹಿಟ್ಲರ್ ಎಂದು ಟೀಕೆ ಮಾಡುತ್ತಿದ್ದ ರಾಹುಲ್ ಗಾಂಧಿಗೆ (Rahul Gandhi) ನಿಜವಾದ ಸರ್ವಾಧಿಕಾರ ಹೇಗಿರುತ್ತದೆ ಎನ್ನುವುದನ್ನು ತುರ್ತುಪರಿಸ್ಥಿತಿ (Emergency) ಕುರಿತಾದ ಟ್ವೀಟ್ ಗಳ ಮೂಲಕ ಕಾಲೆಳೆಯಲಾಗಿದೆ.
"ತುರ್ತು ಪರಿಸ್ಥಿತಿ ಎಂದು ಕರೆಯಲ್ಪಡುವ ಸಮಯದಲ್ಲಿ ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಗಮನಾರ್ಹವಾಗಿ ಮೊಟಕುಗೊಳಿಸಿದ ಮತ್ತು ಅಮಾನತುಗೊಳಿಸಿದ ದಿನ ಇಂದು. ನ್ಯಾಯಾಲಯಗಳ ಸಂಪೂರ್ಣ ಒಪ್ಪಿಗೆಯೊಂದಿಗೆ ರಾಹುಲ್ ಗಾಂಧಿಯವರ ಅಜ್ಜಿ ಇಂದಿರಾ ಗಾಂಧಿ (Indira Gandhi) ಇದನ್ನು ಜಾರಿ ಮಾಡಿದ್ದರು. ಇದು ಈಗಲೂ ಭಾರತೀಯ ಪ್ರಜಾಪ್ರಭುತ್ವದ ಅತ್ಯಂತ ಕರಾಳ ಸಮಯವಾಗಿ ಉಳಿದಿದೆ' ಎಂದು ಅಲೋಕ್ ಭಟ್ (Alok Bhat)ಎನ್ನುವವರು ಟ್ವೀಟ್ ಮಾಡಿದ್ದಾರೆ.
ಅಲೋಕ್ ಭಟ್ ಅವರು ನಾಲ್ಕೈದು ಸರಣಿ ಟ್ವೀಟ್ ಗಳನ್ನು ಮಾಡಿದ್ದು, ಎಲ್ಲಾ ಟ್ವೀಟ್ ಗಳಲ್ಲೂ ರಾಹುಲ್ ಗಾಂಧಿಯವ ಅಜ್ಜಿಯ ಸರ್ವಾಧಿಕಾರಿ ವರ್ತನೆಯನ್ನು ಟೀಕಿಸಿದ್ದಾರೆ. "ಪ್ರಜಾಪ್ರಭುತ್ವವನ್ನು ಉಳಿಸುವ ನೆಪದಲ್ಲಿ ತುರ್ತುಪರಿಸ್ಥಿತಿಯನ್ನು ಸರ್ಮಥಿಸಿಕೊಂಡಿದ್ದಲ್ಲದೆ, ವಿರೋಧ ಪಕ್ಷದ ಧ್ವನಿಯನ್ನು ಹತ್ತಿಕ್ಕಿದ್ದು ರಾಹುಲ್ ಗಾಂಧಿಯ ಅಜ್ಜಿ' ಎಂದು ಟ್ವೀಟ್ ಮಾಡಿದ್ದಾರೆ.
47 ವರ್ಷಗಳ ಹಿಂದೆ ಇಂದಿರಾಗಾಂಧಿ ಆಡಳಿತದಲ್ಲಿ ಘೋಷಿಸಲಾದ ತುರ್ತು ಪರಿಸ್ಥಿತಿಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕೂಡ ಶನಿವಾರ ಕಾಂಗ್ರೆಸ್ ವಿರುದ್ಧ ಸಂಪೂರ್ಣ ವಾಗ್ದಾಳಿ ನಡೆಸಿದರು. “1975 ರಲ್ಲಿ ಈ ದಿನ, ಅಧಿಕಾರಕ್ಕಾಗಿ ಕಾಂಗ್ರೆಸ್ ಪ್ರತಿ ಭಾರತದ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಂಡು ತುರ್ತು ಪರಿಸ್ಥಿತಿಯನ್ನು ಹೇರಿತು. ಕಾಂಗ್ರೆಸ್ ಆಡಳಿತವು ಕ್ರೌರ್ಯದ ವಿಷಯದಲ್ಲಿ ಪರಕೀಯರ ಆಳ್ವಿಕೆಯನ್ನೂ ಬಿಟ್ಟುಬಿಟ್ಟಿತು. ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಮತ್ತು ಸರ್ವಾಧಿಕಾರಿ ಮನಸ್ಥಿತಿಯನ್ನು ಸೋಲಿಸಲು ಎಲ್ಲವನ್ನೂ ತ್ಯಾಗ ಮಾಡಿದ ದೇಶಭಕ್ತರಿಗೆ ನಾನು ನನ್ನ ಗೌರವವನ್ನು ಸಲ್ಲಿಸುತ್ತೇನೆ ”ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಇಂದು ತುರ್ತುಸ್ಥಿತಿ ಹೇರಿಕೆಯ ದಿನ, ನಿಜವಾದ ಸರ್ವಾಧಿಕಾರ ಹೇಗಿರುತ್ತೆ ಗೊತ್ತಾ!
ಜೂನ್ 25, 1975 ರ ಮಧ್ಯರಾತ್ರಿಯಲ್ಲಿ ಅಧ್ಯಕ್ಷ ಫಕ್ರುದ್ದೀನ್ ಅಲಿ ಅಹ್ಮದ್ ಸಂವಿಧಾನದ 352 ನೇ ವಿಧಿಯ ಅಡಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಅಲಹಾಬಾದ್ ಉಚ್ಚ ನ್ಯಾಯಾಲಯವು 1971 ರ ಲೋಕಸಭಾ ಚುನಾವಣೆಯ ಗೆಲುವು ಅಸಿಂಧು ಎಂದು ಘೋಷಿಸಿದ ನಂತರ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ತಮ್ಮ ರಾಜೀನಾಮೆಗೆ ಕರೆ ನೀಡುವ ಬೃಹತ್ ಪ್ರತಿಭಟನೆಗಳನ್ನು ಎದುರಿಸಿದ ನಂತರ ತುರ್ತು ಪರಿಸ್ಥಿತಿಯನ್ನು ಹೇರಲಾಯಿತು.
ನೆಹರೂಗೆ ತನ್ನ ಘನತೆಯ ಚಿಂತೆ, ಇದೇ ಕಾರಣಕ್ಕೆ ಗೋವಾಗೆ 15 ವರ್ಷ ಸ್ವಾತಂತ್ರ್ಯ ಸಿಗಲಿಲ್ಲ: ಮೋದಿ
ಇಂದಿರಾ ಗಾಂಧಿ ಸರ್ಕಾರವು ರಾಷ್ಟ್ರೀಯ ಭದ್ರತೆಗೆ ಬೆದರಿಕೆಗಳನ್ನು ಉಲ್ಲೇಖಿಸಿದ್ದಲ್ಲದೆ, ಪಾಕಿಸ್ತಾನದೊಂದಿಗೆ ಮುಕ್ತಾಯಗೊಂಡ ಯುದ್ಧವನ್ನು ಈ ವೇಳೆ ಕಾರಣವನ್ನಾಗಿ ಮಾಡಿಕೊಂಡಿತು. ಸ್ವತಂತ್ರ ಭಾರತದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿಯನ್ನು ಕರಾಳ ಘಟ್ಟವೆಂದು ಪರಿಗಣಿಸಲಾಗಿದೆ. ಈ ಅವಧಿಯನ್ನು ಸೆನ್ಸಾರ್ಶಿಪ್, ಆಗಾಗ್ಗೆ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ರಾಜ್ಯ ಸೆರೆವಾಸಗಳ ವರದಿಗಳಿಂದ ಗುರುತಿಸಲಾಗಿದೆ. 18 ತಿಂಗಳ ನಂತರ ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಳ್ಳಲಾಯಿತು ಮತ್ತು 1977 ರಲ್ಲಿ ಹೊಸ ಚುನಾವಣೆಗಳು ನಡೆದವು. ಇಂದಿರಾ ಗಾಂಧಿ ಮತ್ತು ಅವರ ಪುತ್ರ ಸಂಜಯ್ ಗಾಂಧಿ ಕ್ರಮವಾಗಿ ತಮ್ಮ ಭದ್ರಕೋಟೆಗಳಾದ ರಾಯ್ ಬರೇಲಿ ಮತ್ತು ಅಮೇಥಿಯಿಂದ ಸೋತ ನಂತರ 1947 ರ ನಂತರ ಮೊದಲ ಬಾರಿಗೆ ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿಯಿತು. ಕಳೆದ ವರ್ಷ, ಶಾ ಅವರು ತುರ್ತು ಪರಿಸ್ಥಿತಿಯನ್ನು 'ಕ್ರೂರ ಚಿತ್ರಹಿಂಸೆ' ಮತ್ತು '21 ತಿಂಗಳ ನಿರ್ದಯ ಆಡಳಿತ' ಎಂದು ಕರೆದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ