Geneal News
Aug 6, 2018, 2:21 PM IST
ಇದು ಬೆಂಕಿಯಲ್ಲಿ ಬೆಂದ ಬಾಲಕಿ ಲಕ್ಷ್ಮಿಯ ಕರುಣಾಜನಕ ಕಥೆ. ಈ ಬಾಲಕಿಯನ್ನು ಉಳಿಸಿಕೊಳ್ಳಲು ಇಡೀ ಗ್ರಾಮವೇ ಪರಡಾಡುತ್ತಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ಬಾಲಕಿ ಲಕ್ಷ್ಮೀಯ ಕರುಣಾಜನಕ ಕಥೆ ನೋಡಿದ್ರೆ ಹೃದಯ ಮಿಡಿಯುತ್ತದೆ.
ಶಾಲೆಯಿಂದ ಮನೆಗೆ ಬಂದ ಬಳಿಕ ಲಕ್ಷ್ಮೀ ಒಲೆ ಮೇಲೆ ಚಾ ಇಡುತ್ತಾಳೆ. ಅದನ್ನು ಇಳಿಸುವಾಗ ಒಲೆಗೆ ವೇಲು ಬಿದ್ದು ಬೆಂಕಿ ಹತ್ತಿಕೊಳ್ಳುತ್ತದೆ. ಬೆಂಕಿ ಇಡೀ ದೇಹವನ್ನು ಸುಡುತ್ತದೆ. ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಗೆ ಸಹಾಯಹಸ್ತದ ನೆರವು ಬೇಕಾಗಿದೆ.