ಪುರಾಣಗಳ ಪ್ರಕಾರ ಶ್ರೀರಂಗಂ (Shreerangam) ಅನ್ನು ಭೋಗ ಮಂಟಪ ಮತ್ತು ಕಾಂಚಿಯನ್ನು ತ್ಯಾಗ ಮಂಟಪ ಎಂದು ಹೇಳಲಾಗುತ್ತದೆ. ಅಂತೆಯೇ, ಪುರಾಣಗಳು ತಿರುಮಲವನ್ನು ಹೂವಿನ ಮಂಟಪವೆಂದು ಉಲ್ಲೇಖಿಸುತ್ತವೆ. ತಿರುಮಲವು ಹೂವಿನ ಮಂಟಪವಾಗಿರೋದ್ರಿಂದ, ವೆಂಕಟೇಶ್ವರ ಹೂವುಗಳ ಪ್ರೇಮಿಯಾಗಿರುವುದರಿಂದ, ಪ್ರತಿದಿನ ಟನ್ ಗಟ್ಟಲೆ ಹೂವುಗಳಿಂದ ದೇವರಿಗೆ ಅಲಂಕಾರಗಳು ಮತ್ತು ಪೂಜೆಗಳನ್ನು ನಡೆಸಲಾಗುತ್ತದೆ.