ಮಿನಿ ಯುದ್ಧದ ಮಹಾತೀರ್ಪು ಬಂದಾಯ್ತು; ಯಾರಿಗೆ ನಷ್ಟ, ಯಾರಿಗೆ ಲಾಭ?

ಮಿನಿ ಯುದ್ಧದ ಮಹಾತೀರ್ಪು ಬಂದಾಯ್ತು; ಯಾರಿಗೆ ನಷ್ಟ, ಯಾರಿಗೆ ಲಾಭ?

Published : Nov 23, 2024, 06:08 PM IST

ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿಯಲ್ಲಿ ನಡೆದ ಚುನಾವಣೆಗಳಲ್ಲಿ ಪ್ರತಿಷ್ಠೆಯ ಕದನವೇ ನಡೆದಿದೆ. ಈ ಮೂರು ಕ್ಷೇತ್ರಗಳಲ್ಲಿ ಯಾರ ಗೆಲುವು ಯಾರಿಗೆ ಲಾಭ ತರುತ್ತದೆ ಮತ್ತು ಯಾರಿಗೆ ನಷ್ಟ ತರುತ್ತದೆ ಎಂಬುದನ್ನು ವಿಶ್ಲೇಷಿಸಲಾಗಿದೆ.

ಮಿನಿಯುದ್ಧದ ಮಹಾ ತೀರ್ಪಿಗೆ ಶುರು ಕೌಂಟ್ ಡೌನ್.. ಚದುರಂಗ ಚತುರರ ಚನ್ನಪಟ್ಟಣ, ಸಮರವೀರರ ಸಮರಭೂಮಿ ಸಂಡೂರು, ರಣಕಲಿಗಳ ಸಮರಾಂಗಣ ಶಿಗ್ಗಾಂವಿ.. ಮೂರು ಅಖಾಡ, ನೂರು ಕುತೂಹಲ.. ದ್ವೇಷ, ದುಷ್ಮನಿ, ಸೇಡಿನ ಯುದ್ಧದಲ್ಲಿ ಪ್ರತಿಷ್ಠೆಯನ್ನೇ ಪಣಕ್ಕೊಡ್ಡಿದ ಅತಿರಥ-ಮಹಾರಥಿಗಳು.. ಆಟಗಾರರೇ ಬೇರೆ, ತೆರೆಯ ಹಿಂದೆ ಆಟವಾಡಿಸಿದ ಸೂತ್ರಧಾರರೇ ಬೇರೆ.  ಎಲ್ಲಿ ಯಾರು ಗೆದ್ದರೆ ಯಾರಿಗೆ ಲಾಭ, ಯಾರಿಗೆ ನಷ್ಟ..? ಉರುಳಿದ ದಾಳಕ್ಕೆ ಉರುಳುತ್ತಾ ಸಿಂಹಾಸನ..? ಕೆರಳುತ್ತಾ ರಾಜಕಾರಣ..? ಇದೇ ಇವತ್ತಿನ ಸುವರ್ಣ ಸ್ಪೆಷಲ್. 

ಇದು ಚನ್ನಪಟ್ಟಣ ಚದುರಂಗದ ಕಥೆ.. ಉಳಿದೆರಡು ಅಖಾಡಗಳ ಕಥೆಯೂ ಅಷ್ಟೇ ರೋಚಕ.. ಸಂಡೂರಲ್ಲಿ ಸಿದ್ದು-ರೆಡ್ಡಿ ಪ್ರತಾಪ, ಶಿಗ್ಗಾಂವಿಯಲ್ಲಿ ಬೊಮ್ಮಾಯಿ-ಜಮೀರ್ ರಣರಂಗ. ಚನ್ನಪಟ್ಟಣ ಫಲಿತಾಂಶದಲ್ಲಿ ಅತಿರಥ-ಮಹಾರಥಿಗಳ ಪ್ರತಿಷ್ಠೆ ಅಡಗಿದ್ರೆ, ಅತ್ತ ಸಂಡೂರು ಶಿಗ್ಗಾಂವಿಯದ್ದೂ ಅದೇ ಕಥೆ. ಅಲ್ಲಿ ಅಭ್ಯರ್ಥಿಗಳೇನಿದ್ರೂ ದಾಳಗಳು.. ಪಗಡೆಯಾಟ ಆಡಿರೋರೇ ಬೇರೆ.. ತೆರೆಯ ಹಿಂದೆ ನಿಂತು ದಾಳ ಉರುಳಿಸಿದವರು ಯಾರು..? ಗುರಿ ಮುಟ್ಟೋದು ಯಾರ ದಾಳ..? ಗೆಲ್ಲೋದು ಯಾರ ಪ್ರತಿಷ್ಠೆ..? ತೋರಿಸ್ತೀವಿ ನೋಡಿ.

ಚನ್ನಪಟ್ಟಣ ಮತ್ತು ಸಂಡೂರಿನ ಕಥೆ ಹೀಗಾದ್ರೆ, ಅತ್ತ ಶಿಗ್ಗಾಂವಿಯದ್ದು ಮತ್ತೊಂದು ಕಥೆ.. ಅಲ್ಲಿ ಅಡಗಿರೋದು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿಷ್ಠೆ. ಆ ಪ್ರತಿಷ್ಠೆಯ ಹಿಂದಿರೋ ಅಸಲಿಯತ್ತನ್ನು ಇಲ್ಲಿದೆ ನೋಡಿ. ಚನ್ನಪಟ್ಟಣದಲ್ಲಿ ಡಿಕೆ Vs ಎಚ್ಡಿಕೆ ಪ್ರತಿಷ್ಠೆ, ಸಂಡೂರಲ್ಲಿ ಸಿದ್ದರಾಮಯ್ಯ Vs ರೆಡ್ಡಿ ಪ್ರತಿಷ್ಠೆ. ಶಿಗ್ಗಾಂವಿಯಲ್ಲಿ ಬೊಮ್ಮಾಯಿ Vs ಜಮೀರ್ ಪ್ರತಿಷ್ಠೆ.. ಬೊಮ್ಮಾಯಿ ಭದ್ರಕೋಟೆಯಲ್ಲಿ ಜಮೀರ್ ಪ್ರತಿಷ್ಠೆ ಅಡಗಿರೋದು.ಪಗಡೆಯಾಟದಲ್ಲಿ ದಾಳ ಉರುಳಿಸಿದವರು ಒಬ್ರು, ದಾಳವಾದವರು ಮತ್ತೊಬ್ರು.. ಆಟಗಾರ ಒಬ್ರು, ತೆರೆಯ ಹಿಂದೆ ಆಟವಾಡಿದ ಸೂತ್ರಧಾರ ಇನ್ನೊಬ್ರು.. ಉರುಳಿದ ದಾಳಕ್ಕೆ ಉರುಳುತ್ತಾ ಸಿಂಹಾಸನ..? ಕೆರಳುತ್ತಾ ರಾಜಕಾರಣ..? ಕಾದು ನೋಡೋಣ. 

20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!