ಶ್ರೀರಂಗಪಟ್ಟಣದಲ್ಲಿ ಶ್ರೀಮುರುಳಿ ಮಾನವೀಯತೆ ಅನಾವರಣ

Jan 20, 2019, 7:22 PM IST

ಸ್ಯಾಂಡಲ್ ವುಡ್ ಸ್ಟಾರ್ ಶ್ರೀಮುರಳಿ ಮಾನವೀಯತೆಗೆ ಪ್ರಶಂಸೆ ವ್ಯಕ್ತವಾಗಿದೆ. ಶ್ರೀರಂಗಪಟ್ಟಣ ಸ್ನಾನಘಟ್ಟದ ಬಳಿ ನೊಂದ ಮಹಿಳೆಯ ನೋವನ್ನು ಶ್ರೀಮುರುಳಿ ಆಲಿಸಿದ್ದಾರೆ. ಚಿತ್ರೀಕರಣಕ್ಕಾಗಿ ಶ್ರೀರಂಗಪಟ್ಟಣಕ್ಕೆ ಬಂದಿದ್ದ‌ದ ಶ್ರೀಮುರುಳಿ ಸ್ನಾನಘಟ್ಟದ ಬಳಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯನ್ನು ಕಂಡು ಸಾಂತ್ವನ ಹೇಳಿದ್ದಾರೆ. ತಾನು ಸಹಾ ನೀಡುತ್ತೇನೆ ಬನ್ನಿ, ನಿಮ್ಮದು ಊಟ ಆಗಿದೆಯಾ ಎಂದು ಮುರುಳಿ ವಿಚಾರಿಸಿದ್ದಾರೆ. ಚಿತ್ರ ನಟನ ಆಹ್ವಾನವನ್ನು ನಯವಾಗಿ ಬೇಡವೆಂದು ಮಹಿಳೆ ಹೇಳಿದ್ದು ಸಹಾಯ ನೀಡುವ ಭರವಸೆ  ನೀಡಿದ್ದಾರೆ.