ಬೈಲಹೊಂಗಲ: ಅಪ್ರಾಪ್ತ ಪುತ್ರಿಯನ್ನು ಪೀಡಿಸುತ್ತಿದ್ದ ಇಬ್ಬರನ್ನು ಕೊಂದ ತಂದೆ..!

By Kannadaprabha NewsFirst Published May 9, 2024, 11:35 AM IST
Highlights

ಅಪ್ರಾಪ್ತಯನ್ನು ಮದುವೆಯಾಗುವಂತ ಪೀಡಿಸುತ್ತಿದ್ದ ಯುವಕ ಹಾಗೂ ಅವನ ಸಹೋದರನನ್ನು ಹುಡುಗಿಯ ತಂದೆಯೇ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಸಮೀಪದ ದುಂಡನಕೊಪ್ಪ ಗ್ರಾಮದಲ್ಲಿ ನಡೆದಿದೆ. 

ಬೈಲಹೊಂಗಲ(ಮೇ.09):  ಅಪ್ರಾಪ್ತಯನ್ನು ಮದುವೆಯಾಗುವಂತ ಪೀಡಿಸುತ್ತಿದ್ದ ಯುವಕ ಹಾಗೂ ಅವನ ಸಹೋದರನನ್ನು ಹುಡುಗಿಯ ತಂದೆಯೇ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಸಮೀಪದ ದುಂಡನಕೊಪ್ಪ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. 

ತಾಲೂಕಿನ ದುಂಡನಕೊಪ್ಪ ಗ್ರಾಮದ ಮಾಯಪ್ಪ ಸೋಮಪ್ಪ ಅಳಗೋಡಿ (20), ಯಲ್ಲಪ್ಪ ಸೋಮಪ್ಪ ಅಳಗೋಡಿ (22) ಕೊಲೆಯಾದ ಸಹೋದರರು. 

ಓದುವುದಕ್ಕಾಗಿ ಜಮೀನು ಮಾರಿ ಮಗನ ವಿದೇಶಕ್ಕೆ ಕಳುಹಿಸಿದ ರೈತ: ಅಲ್ಲಿ ಭಾರತೀಯರಿಂದಲೇ ವಿದ್ಯಾರ್ಥಿ ಕೊಲೆ

ಅದೇ ಗ್ರಾಮದ ಫಕ್ಕೀರಪ್ಪ ಮಾರುತಿ ಭಾಂವಿಹಾಳ (50) ಹತ್ಯೆ ಆರೋಪಿಯಾಗಿದ್ದು, ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ ಪಾಂಡುರಂಗಯ್ಯ, ಸಿಪಿಐ ವೀರೇಶ ಮಠಪತಿ ಹಾಗೂ ಸಿಬ್ಬಂದಿ ಭೇಟಿ ತನಿಖೆ ಕೈಗೊಂಡಿದ್ದಾರೆ. 

click me!