ದೂರವಾದ ಪತ್ನಿಗೆ ಬುದ್ಧಿ ಕಲಿಸಲು ಸುಪಾರಿ ನೀಡಿ ಮಗನನ್ನೇ ಕೊಂದ ಅಪ್ಪ

By Suvarna NewsFirst Published Mar 10, 2024, 3:20 PM IST
Highlights

ತೊರೆದು ಹೋದ ಪತ್ನಿಗೆ ಬುದ್ಧಿ ಕಲಿಸಲು ತಂದೆಯೋರ್ವ ಸುಪಾರಿ ನೀಡಿ ತನ್ನ 29 ವರ್ಷದ ಮಗನನ್ನೇ ಹತ್ಯೆ ಮಾಡಿಸಿದ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ನವದೆಹಲಿ: ತೊರೆದು ಹೋದ ಪತ್ನಿಗೆ ಬುದ್ಧಿ ಕಲಿಸಲು ತಂದೆಯೋರ್ವ ಸುಪಾರಿ ನೀಡಿ ತನ್ನ 29 ವರ್ಷದ ಮಗನನ್ನೇ ಹತ್ಯೆ ಮಾಡಿಸಿದ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.  ಮಗ ಗೌರವ್ ಸಿಂಘಾಲ್ ದೆಹಲಿಯಲ್ಲಿ ಜಿಮ್ ಟ್ರೈನರ್‌ ಆಗಿ ಕೆಲಸ ಮಾಡುತ್ತಿದ್ದು, ಈತನನ್ನು 15 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು. ಫೆಬ್ರವರಿ 6 ಅಥವಾ 7 ರಂದು ಈ ಕೊಲೆ ನಡೆದಿದ್ದು, ಕೊಲೆಯ ನಂತರ ತಂದೆ ರಂಗ್‌ ಲಾಲ್‌ ದೆಹಲಿಯಿಂದ ಜೈಪುರಕ್ಕೆ ಓಡಿ ಹೋಗಿದ್ದ.  ಮಗನ ಹತ್ಯೆಗೆ ಈತ ಕಳೆದ 4 ತಿಂಗಳಿನಿಂದಲೂ ಯೋಜನೆ ರೂಪಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. 

ದಕ್ಷಿಣ ದೆಹಲಿಯ ದೆವ್ಲಿ ಎಕ್ಸ್‌ಟೆನ್ಶನ್  ಪ್ರದೇಶದಲ್ಲಿ  ಇರುವ ನಿವಾಸದಲ್ಲಿ ಗೌರವ್ ಸಿಂಘಾಲ್ ಹತ್ಯೆಯಾಗಿತ್ತು. ಮುಖ ಹಾಗೂ ಎದೆಗೆ 15 ಬಾರಿ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರಿಗೆ  ತಂದೆ ರಂಗ್ ಲಾಲ್‌ಗೆ ಗೌರವ್‌ ಸಿಂಘಾಲ್‌ ಹಾಗೂ ತನ್ನ ಪತ್ನಿ ಜೊತೆ ಸಂಬಂಧ ಹಳಸಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನಿಗಾಗಿ ಬಲೆ ಬೀಸಿದ ಪೊಲೀಸರಿಗೆ ಕೊಲೆ ಆರೋಪಿ ತಂದೆಯೇ ಎಂಬುದು ಗೊತ್ತಾಗಿದೆ. ತೊರೆದು ಹೋದ  ಹೆಂಡತಿಗೆ ಬುದ್ದಿ ಕಲಿಸುವುದಕ್ಕಾಗಿ ಆತ ಈ ಕೃತ್ಯವೆಸಗಿದ್ದಾಗಿ ತಿಳಿದು ಬಂದಿದೆ.

ನಾಟಿ ಕೋಳಿ ಸಾರು ಜೊತೆ ಮದ್ಯ ಸೇವನೆಗೆ ಬಿಡದ್ದಕ್ಕೆ ಮಗನನ್ನೇ ಭೀಕರವಾಗಿ ಕೊಂದ ತಂದೆ!

ಮಗನ ಐಷಾರಾಮಿ ಜೀವನ ಶೈಲಿಯಿಂದಾಗಿ ರಂಗ್‌ ಲಾಲ್ ಅಸಮಾಧಾನಗೊಂಡಿದ್ದ, ಆದರೆ ತಾನು ಮಗನ ಬಗ್ಗೆ ಅಸಮಾಧಾನಗೊಂಡಾಗಲೆಲ್ಲಾ, ರಂಗ್‌ಲಾಲ್ ಪತ್ನಿ ಮಗನನ್ನು ಬೆಂಬಲಿಸುತ್ತಿದ್ದಳು.  ಇಂದು ರಂಗ್‌ಲಾಲ್‌ನನ್ನು ಮತ್ತಷ್ಟು ಕುಪಿತಗೊಳಿಸಿತ್ತು.  ಈ ಹಿನ್ನೆಲೆಯಲ್ಲಿ ಸ್ವಂತ ಮಗನನ್ನೇ ಪರಲೋಕಕ್ಕೆ ಕಳುಹಿಸುವ ಪ್ಲಾನ್ ಮಾಡಿದ ಈತ  ಇದಕ್ಕಾಗಿ ಮೂವರನ್ನು ನಿಯೋಜಿಸಿ ಅವರಿಗೆ 75 ಸಾವಿರ ರೂಪಾಯಿ ಸುಪಾರಿ ನೀಡಿದ್ದ. ಈ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ ರಂಗ್‌ಲಾಲ್‌ನನ್ನು ಪೊಲೀಸರು ಜೈಪುರದಲ್ಲಿ ಬಂಧಿಸಿದ್ದು, ಈ ಪ್ರಕರಣದಲ್ಲಿ ಭಾಗಿಯಾದ ಇತರ ನಾಲ್ವರು ತಲೆಮರೆಸಿಕೊಂಡಿದ್ದಾರೆ. 

ರಂಗಲ್ ಪತ್ನಿಯಿಂದ ದೂರವಾಗಿ ಬದುಕುತ್ತಿದ್ದರೆ, ಈತ ಮಗ ಗೌರವ್ ಹಾಗೂ ಪತ್ನಿ ಅದೇ ಪ್ರದೇಶದಲ್ಲಿ ಒಟ್ಟಿಗೆ ಜೀವನ ಮಾಡುತ್ತಿದ್ದರು. ಅಪ್ಪ ಮಗನ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಅಪ್ಪನಿಗೆ ಮಗ ಸಿಟ್ಟಿನಿಂದ ಬಾರಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಅಪ್ಪ ಮಗನ ಪರಲೋಕಕ್ಕೆ ಕಳುಹಿಸಿದ್ದಾನೆ. 

ಪುತ್ರನನ್ನೇ ಕೊಂದ ತಾಯಿ: ಹತ್ಯೆಗೂ ಮುನ್ನ ಮಗನಿಗೆ ಕಾಲ್‌ ಮಾಡಿದ್ದ ತಂದೆ..!

click me!