ಬ್ಯಾಂಕ್ ಕೊಲ್ಲುತ್ತಿದ್ದಾರೆ‘ಆ ಮೂವರು’:ಮೋದಿ ಬಳಿ ಇದೆ ಪ್ಲ್ಯಾನ್?

Jul 29, 2018, 7:21 PM IST

ಬೆಂಗಳೂರು(ಜು.29): ಭಾರತದ ಬ್ಯಾಂಕ್ ಗಳ ಮೇಲೆ ದಾಳಿ ಇಟ್ಟಿದ್ದಾರೆ ಮೂವರು ಮಹಾ ರಕ್ಕಸರು ದಾಳಿ ಇಟ್ಟಿದ್ದಾರೆ. ಆ ಮಹಾರಕ್ಕಸರಿಂದ ದೇಶದಲ್ಲಿ ಭಯಂಕರ ಲೂಟಿ ನಡೆಯುತ್ತಿದೆ. ನಿಮ್ಮ ಜೇಬಿನಲ್ಲಿರುವ ದುಡ್ಡು, ನಿಮ್ಮ ಅಕೌಂಟ್ ನಲ್ಲಿರುವ ದುಡ್ಡು ಎಲ್ಲವೂ ಕ್ಷಣಾರ್ಧದಲ್ಲಿ ಉಡೀಸ್ ಆಗುತ್ತೆ. 

ಅಷ್ಟಕ್ಕೂ ಬ್ಯಾಂಕಿಂಗ್ ಲೋಕವನ್ನೇ ಬರ್ಬಾದ್ ಮಾಡಲು ದಾಳಿ ಇಟ್ಟಿರುವ ಆ ಮೂವರು ಮಹಾ ರಕ್ಕಸರಾದರೂ ಯಾರು? ಅವರನ್ನು ಬಗ್ಗು ಬಡಿಯಲು ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಮಾಸ್ಟರ್ ಪ್ಲಾನ್ ಏನು? ರಿಸರ್ವ್ ಬ್ಯಾಂಕ್ ಬಿಚ್ಚಿಟ್ಟ ಆ ಭಯಂಕರ ರಹಸ್ಯ ಎಂಥದ್ದು? ಎಂಬೆಲ್ಲಾ ಪ್ರಶ್ನೆಗಳು ಇದೀಗ ಹರಿದಾಡುತ್ತಿವೆ.

 ಬ್ಯಾಂಕಿಂಗ್ ಲೋಕವನ್ನ ಮೂರು ಮಹಾ ಕುತ್ತುಗಳು ಕಾಡುತ್ತಿವೆ. ಅದೂ ಬ್ರಹ್ಮ ರಕ್ಕಸರಂತೆ ಕಾಡುತ್ತಿವೆ. ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಹಾಳು ಮಾಡುತ್ತಿವೆ ಈ ಮೂವರು ರಕ್ಕಸರು. ಭಾರತೀಯ ಬ್ಯಾಂಕಿಂಗ್ ಸಿಸ್ಟಮ್ ಈ ಮಟ್ಟಕ್ಕೆ ಅಧಃಪತನವಾಗಿರುವುದಕ್ಕೆ ಆ ಮೂರು ಮಹಾ ಕುತ್ತುಗಳೇ ಕಾರಣ ಅಂತ ಹೇಳಲಾಗುತ್ತಿದೆ.

ಈ ಕುರಿತು ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ..