ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದಿದ್ದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

Published : May 07, 2024, 01:47 PM ISTUpdated : May 07, 2024, 02:01 PM IST
ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದಿದ್ದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

ಸಾರಾಂಶ

ಕರ್ತವ್ಯನಿರತ ಚುನಾವಣಾ ಸಿಬ್ಬಂದಿ ಬಿಸಲಿಗೆ ಏಕಾಏಕಿ ತಲೆಸುತ್ತು ಬಂದು ಕುಸಿದು ಬಿದ್ದು,, ಮತದಾನ ಮಾಡಲು ಬಂದು ಸರತಿಸಾಲಿನಲ್ಲಿ ನಿಂತಿದ್ದ ವೈದ್ಯರಿಂದ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿದ ಘಟನೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನಡೆದಿದೆ. ವೈದ್ಯರ ಸಮಯಪ್ರಜ್ಞೆ, ಕಾರ್ಯಕ್ಕೆ ಮತದಾರರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಧಾರವಾಡ (ಮೇ.7): ಉತ್ತರ ಕರ್ನಾಟಕದಲ್ಲಿ ರಣಬಿಸಲು ಮುಂದುವರಿದಿದ್ದು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಿದೆ. ವಿಪರೀತ ಬಿಸಲಿಗೆ ಚುನಾವಣಾಧಿಕಾರಿಗಳಿಗೆ ಹೃದಯಾಘತ, ತಲೆಸುತ್ತು ವಿವಿಧ ಪ್ರಕರಣಗಳು ನಡೆದಿವೆ. ಇದೀಗ ಧಾರವಾಡದಲ್ಲಿ ಕರ್ತವ್ಯನಿರತ ಚುನಾವಣಾ ಸಿಬ್ಬಂದಿ ಬಿಸಲಿಗೆ ಏಕಾಏಕಿ ತಲೆಸುತ್ತು ಬಂದು ಕುಸಿದು ಬಿದ್ದ ಘಟನೆ  ಧಾರವಾಡ ಜಿಲ್ಲೆಯ ಗಾಂಧಿನಗರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ನಡೆದಿದೆ.

ಮೇಲಿನಮನಿ ಎಂಬುವವರ ಅಸ್ವಸ್ಥಗೊಂಡ ಚುನಾವಣಾಧಿಕಾರಿ. ಈ ವೇಳೆ ಮತದಾನಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತಿದ್ದ ವೈದ್ಯ ಡಾ.ನಿತಿನ್‌ಚಂದ್ರ ಹತ್ತಿಕಾಳ ಅವರು ಗಮನಿಸಿ ಅಧಿಕಾರಿ ತಲೆಸುತ್ತು ಬಂದು ಬಿದ್ದ ಕೂಡಲೇ ಅವರ ನೆರವಿಗೆ ದಾವಿಸಿ ಬಂದು  ಆರೋಗ್ಯ ತಪಾಸಣೆ ನಡೆಸಿದರು.

LIVE: Dharwad Elections 2024: ಧಾರವಾಡದಲ್ಲಿ ಬೆಳಗ್ಗೆ 11 ಗಂಟೆವರೆಗೆ ಶೇ. 24ರಷ್ಟು ಮತದಾನ

ಚುನಾವಣಾಧಿಕಾರಿ ಮೇಲಿನಮನಿ ಅವರಿಗೆ ಬಿಪಿ, ಶುಗರ್ ಎಲ್ಲವನ್ನೂ ತಪಾಸಣೆ ಮಾಡಿದ ವೈದ್ಯ ನಿತಿನ್‌ಚಂದ್ರ ಬಳಿಕ ಚಿಕಿತ್ಸೆಗಾಗಿ ಅವರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಮೇಲಿನಮನಿ ಅವರ ಆರೈಕೆ ಮಾಡಿದ ನಂತರವೇ ಡಾ.ಹತ್ತಿಕಾಳ ಅವರು ತಮ್ಮ ಮತ ಚಲಾಯಿಸಿದರು. ವೈದ್ಯರ ಸಮಯಪ್ರಜ್ಞೆ, ಕಾರ್ಯಕ್ಕೆ ಅಲ್ಲಿ ಸೇರಿದ್ದ ಮತದಾರರು ಮೆಚ್ಚುಗೆ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉಡುಪಿ: ಧರ್ಮ-ಸಂವಿಧಾನ ಬೇರೆಯಲ್ಲ:-ಪವನ್ ಕಲ್ಯಾಣ ಬಣ್ಣನೆ
ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?