11:01 PM (IST) Jun 18

Karnataka News Live 18 June 2025 ಪಾಕಿಸ್ತಾನಕ್ಕೆ 40 ಜೆ-35 ಸ್ಟೆಲ್ತ್ ಯುದ್ಧವಿಮಾನ ನೀಡುವ ಒಪ್ಪಂದ ಮಾಡಿಕೊಂಡ ಚೀನಾ!

40 ಜೆಎಫ್ -17 ಫೈಟರ್ ಜೆಟ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಜರ್‌ಬೈಜಾನ್‌ ಮತ್ತು ಪಾಕಿಸ್ತಾನವು 4.6 ಬಿಲಿಯನ್ ಡಾಲರ್‌ಗಳ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

Read Full Story
10:01 PM (IST) Jun 18

Karnataka News Live 18 June 2025 ತನ್ನ ಅಭಿಮಾನಿಗಳಿಗಾಗಿ ₹120 ಕೋಟಿ ಬಿಟ್ಟುಕೊಟ್ಟ ಈ ನಟ ಯಾರು?

ಸ್ಟಾರ್ ಹೀರೋಗಳು ಫ್ಯಾನ್ಸ್ ಅಂದ್ರೆ ಪ್ರಾಣ ಅಂತಾರೆ, ಆದ್ರೆ ಅವ್ರಿಗೋಸ್ಕರ ಕೋಟಿ ಬಿಡ್ಬೇಕಾದ್ರೆ.? ಒಬ್ಬ ಸ್ಟಾರ್ ಹೀರೋ ತನ್ನ ಅಭಿಮಾನಿಗಳಿಗೋಸ್ಕರ ₹120 ಕೋಟಿ ಡೀಲ್ ಬಿಟ್ಟಿದ್ದಾರೆ. ಯಾರು ಅಂತ ಗೊತ್ತಾ?

Read Full Story
09:58 PM (IST) Jun 18

Karnataka News Live 18 June 2025 ಬಿಸಿಸಿಐಗೆ ಭಾರೀ ಶಾಕ್‌ ನೀಡಿದ ಬಾಂಬೆ ಹೈಕೋರ್ಟ್‌, ಖಜಾನೆಗೆ ಬಿತ್ತು 538 ಕೋಟಿ ರೂಪಾಯಿ ಪರಿಹಾರದ ಭಾರ!

ಐಪಿಎಲ್‌ನಲ್ಲಿ ವಜಾಗೊಂಡಿರುವ ಕೊಚ್ಚಿ ಟಸ್ಕರ್ಸ್ ಕೇರಳ ತಂಡಕ್ಕೆ ₹538 ಕೋಟಿಗೂ ಹೆಚ್ಚಿನ ಮೊತ್ತದ ಮಧ್ಯಸ್ಥಿಕೆ ತೀರ್ಪನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿದ್ದು, ಫ್ರಾಂಚೈಸಿ ಒಪ್ಪಂದ ವಜಾ ಮಾಡಿದ್ದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

Read Full Story
08:50 PM (IST) Jun 18

Karnataka News Live 18 June 2025 ಬೆಂಗಳೂರಿನ ಕಚೇರಿ ಖಾಲಿ ಮಾಡಿದ DailyHunt, ಮಾಸಿಕ 60 ಲಕ್ಷ ಉಳಿತಾಯ!

ಹಿಂದೆ, ಡೀಲ್‌ಶೇರ್, ಬೈಜೂಸ್, ಡಂಜೊ ಮತ್ತು ಇತರ ಕಂಪನಿಗಳು ಕೆಲವು ಕೋಟಿಗಳಷ್ಟು ವೆಚ್ಚವನ್ನು ಕಡಿಮೆ ಮಾಡಲು, ತಮ್ಮ ಆರ್ಥಿಕ ಆರೋಗ್ಯವನ್ನು ಸುಧಾರಿಸಲು ಮತ್ತು ತಮ್ಮ ನಗದು ರನ್‌ವೇಯನ್ನು ಹೆಚ್ಚಿಸಲು ತಮ್ಮ ಕಚೇರಿ ಸ್ಥಳವನ್ನು ಬಿಟ್ಟುಕೊಟ್ಟಿವೆ.

Read Full Story
08:26 PM (IST) Jun 18

Karnataka News Live 18 June 2025 ಬೆಂಗಳೂರು ದೇವಸ್ಥಾನದಲ್ಲಿ ಸಾಮಾನ್ಯರಂತೆ ಕುಳಿತು ಮಗನ ಮೃದಂಗ ವಾದನ ವೀಕ್ಷಿಸಿದ ಕೋಟ್ಯಧಿಪತಿ ನಿತಿನ್‌ ಕಾಮತ್‌!

ಕೋಟ್ಯಧಿಪತಿಗಳಾದ ನಿತಿನ್ ಮತ್ತು ನಿಖಿಲ್ ಕಾಮತ್ ಅವರ ತಾಯಿ ರೇವತಿ ಕಾಮತ್ ಅವರು ಬೆಂಗಳೂರಿನ ದೇವಸ್ಥಾನದಲ್ಲಿ ತಮ್ಮ ಮೊಮ್ಮಗ ಕಿಯಾನ್ ಅವರೊಂದಿಗೆ ಮೃದಂಗದಲ್ಲಿ ವೀಣೆಯಲ್ಲಿ ಪ್ರದರ್ಶನ ನೀಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

Read Full Story
07:48 PM (IST) Jun 18

Karnataka News Live 18 June 2025 5 ಹೊಸ ಬೋಗಿ ಜೋಡಣೆ ಬಳಿಕ ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ರೈಲು ದಿನನಿತ್ಯ ವಿಳಂಬ, ಪ್ರಯಾಣಿಕರ ಅಸಮಾಧಾನ!

ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ರೈಲು ವಿಳಂಬದಿಂದ ಪ್ರಯಾಣಿಕರು ತೀವ್ರ ಅಸಮಾಧಾನಗೊಂಡಿದ್ದಾರೆ. ವಿಶೇಷವಾಗಿ ಬೆಂಗಳೂರಿನಲ್ಲಿ ಈ ವಿಳಂಬವು ಕಚೇರಿಗೆ ಹೋಗುವವರ ಮೇಲೆ ಪರಿಣಾಮ ಬೀರುತ್ತದೆ.

Read Full Story
07:37 PM (IST) Jun 18

Karnataka News Live 18 June 2025 ಅಂಕಲ್ ದಿಂಬಿನಿಂದ ಅಪ್ಪನ ಉಸಿರುಕಟ್ಟಿಸಿದಾಗ ಅಮ್ಮ ನೋಡ್ತಾ ನಿಂತಿದ್ದರು - ಸಾಕ್ಷಿ ಹೇಳಿದ 9 ವರ್ಷದ ಮಗು

ಅಲ್ವಾರ್‌ನಲ್ಲಿ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ಪ್ರೇಮಿಯೊಂದಿಗೆ ಸೇರಿ ಅಪ್ರಾಪ್ತ ಮಗನ ಮುಂದೆಯೇ ಗಂಡನನ್ನು ಕೊಲೆ ಮಾಡಿದ್ದಾಳೆ. 

Read Full Story
07:16 PM (IST) Jun 18

Karnataka News Live 18 June 2025 ವಯಸ್ಸಾದಂತೆ ಕಾಣ್ಬಾರ್ದು ಅಂದ್ರೆ ಹೀಗ್ ಮಾಡಿ; 10 ವರ್ಷ ಕಡಿಮೆ ಕಾಣೋದು ಗ್ಯಾರಂಟಿ!

ನಮ್ಮ ಚರ್ಮ ಆರೋಗ್ಯವಾಗಿರಬೇಕಂದ್ರೆ ಹೊರಗಿನಿಂದ ಕ್ರೀಮ್ ಹಚ್ಚಿದ್ರೆ ಸಾಲದು. ಒಳಗಿನಿಂದ ಕೇರ್ ತಗೊಳ್ಳೋದು ಮುಖ್ಯ. ದಿನಾ ನಾವು ಎದುರಿಸುವ ಮಾಲಿನ್ಯ, ಒತ್ತಡ, ನಿದ್ದೆ ಕೊರತೆ, ತಪ್ಪು ಆಹಾರ ಪದ್ಧತಿ ಇವೆಲ್ಲ ನಮ್ಮ ಚರ್ಮಕ್ಕೆ ಹಾನಿ ಮಾಡುತ್ತೆ.

Read Full Story
07:07 PM (IST) Jun 18

Karnataka News Live 18 June 2025 ಜುಲೈ 28ರವರೆಗೆ ಎಚ್ಚರ ಎಚ್ಚರ! ಸಂಭವಿಸಲಿದೆ ಅನಾಹುತಗಳ ಸರಮಾಲೆ - ಪರಿಹಾರ ಇಲ್ಲಿದೆ...

ಮಂಗಳ ಮತ್ತು ಕೇತು ಸಿಂಹ ರಾಶಿಯಲ್ಲಿ ಒಟ್ಟಿಗೆ ಇರುವ ಹಿನ್ನೆಲೆಯಲ್ಲಿ ಜುಲೂ 28ರವರೆಗೆ ಅನಾಹುತಗಳ ಸರಮಾಲೆಯೇ ನಡೆಯಲಿದೆ ಎಂದಿರುವ ಜ್ಯೋತಿಷಿಗಳು ಇದಕ್ಕೆ ಪರಿಹಾರವನ್ನೂ ಹೇಳಿದ್ದಾರೆ. ಏನದು?

Read Full Story
06:45 PM (IST) Jun 18

Karnataka News Live 18 June 2025 ಶಸ್ತ್ರಾಸ್ತ್ರಗಳ ಕೊರತೆಯ ಭೀತಿಯಲ್ಲಿ ಇಸ್ರೇಲ್‌, 10-12 ದಿನಕ್ಕೆ ಆಗುವಷ್ಟು ಮಾತ್ರವೇ ಕ್ಷಿಪಣಿಗಳ ದಾಸ್ತಾನು!

ಇಸ್ರೇಲಿ ಇಂಟರ್‌ಸೆಪ್ಟರ್‌ಗಳು ತೀವ್ರ ಒತ್ತಡದಲ್ಲಿವೆ, ಆರೋ ಕ್ಷಿಪಣಿಗಳಿಗೆ ತಲಾ $3 ಮಿಲಿಯನ್ ವೆಚ್ಚವಾಗುತ್ತದೆ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಸುಮಾರು $285 ಮಿಲಿಯನ್ ವೆಚ್ಚವಾಗುತ್ತಿದೆ ಎಂದು ವರದಿಯಾಗಿದೆ, ಇಸ್ರೇಲ್ ಎಷ್ಟು ಕಾಲ ತಡೆದುಕೊಳ್ಳಬಲ್ಲದು ಎಂಬ ಅನುಮಾನಗಳನ್ನು ಹುಟ್ಟುಹಾಕುತ್ತದೆ.

Read Full Story
06:32 PM (IST) Jun 18

Karnataka News Live 18 June 2025 ಚಿತ್ರಮಂದಿರದ ಮುಂದೆ ಕಾರು ಸರಿಯಾಗಿ ನಿಲ್ಲಿಸಿ ಎಂದಿದ್ದೇ ತಪ್ಪಾಯ್ತು? ಪಾರ್ಕಿಂಗ್ ಸಿಬ್ಬಂದಿಗೆ ಹೊಡೆದ ಚಾಲಕ!

ಕಾರವಾರದಲ್ಲಿ ಕಾರು ಪಾರ್ಕಿಂಗ್ ವಿಚಾರದಲ್ಲಿ ಗಲಾಟೆ ನಡೆದಿದ್ದು, ಪಾರ್ಕಿಂಗ್ ಸಿಬ್ಬಂದಿ ಮೇಲೆ ಇಬ್ಬರು ಯುವಕರು ಹಲ್ಲೆ ನಡೆಸಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Read Full Story
06:21 PM (IST) Jun 18

Karnataka News Live 18 June 2025 ಕಡಿಮೆ ನಿರ್ವಹಣೆ ವೆಚ್ಚ, ಭಾರತದಲ್ಲಿ ಲಭ್ಯವಿರುವ ಕೈಗೆಟುಕುವ ದರದ ಹೈಬ್ರಿಡ್ ಕಾರು

ಹೈಬ್ರಿಡ್ ಕಾರು ಉತ್ತಮ ಮೈಲೇಜ್ ನೀಡಲಿದೆ. ಇದರಿಂದ ನಿರ್ವಹಣೆ ಸುಲಭ. ಭಾರತದಲ್ಲಿ ಕೈಗೆಟುಕುವ ದರದಲ್ಲಿ ಹಲವು ಹೈಬ್ರಿಡ್ ಕಾರುಗಳು ಲಭ್ಯವಿದೆ.ಹೀಗೆ ಲಭ್ಯವಿರುವ ಉತ್ತಮ ಕಾರುಗಳ ಪಟ್ಟಿ ಇಲ್ಲಿದೆ.

Read Full Story
06:20 PM (IST) Jun 18

Karnataka News Live 18 June 2025 ಮೋದಿ-ಮೆಲೋನಿ ಭೇಟಿ - 'ನೀವೇ ಬೆಸ್ಟ್‌..ನಿಮ್ಮಂತೆ ಆಗಲು ಬಯಸಿದ್ದೇನೆ' ಎಂದ ಇಟಲಿ ಪ್ರಧಾನಿ!

ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಆತ್ಮೀಯ ಭೇಟಿ. ಮೆಲೋನಿ, ಮೋದಿಯವರನ್ನು 'ಬೆಸ್ಟ್‌' ಎಂದು ಶ್ಲಾಘಿಸಿದ್ದಾರೆ. ಇಬ್ಬರೂ ನಾಯಕರು ಉತ್ತಮ ಬಾಂಧವ್ಯ ಹೊಂದಿದ್ದಾರೆ.
Read Full Story
06:09 PM (IST) Jun 18

Karnataka News Live 18 June 2025 ಅಜ್ಜಿಯದ್ದು ಸಹಜ ಸಾವೆಂದು ಅಂತ್ಯಕ್ರಿಯೆ ಮಾಡುವಾಗ, ಕೊಲೆಯ ಸುಳಿವು ಕೊಟ್ಟ ಗಾಯ!

ಚನ್ನರಾಯಪಟ್ಟಣದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 68 ವರ್ಷದ ವೃದ್ಧೆ ಕಮಲಮ್ಮ ಅವರನ್ನು ಚಿನ್ನಾಭರಣಕ್ಕಾಗಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಸಹಜ ಸಾವು ಎಂದು ಭಾವಿಸಿದ್ದ ಸಂಬಂಧಿಕರು, ಕುತ್ತಿಗೆಯ ಗಾಯದ ಗುರುತು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
Read Full Story
06:03 PM (IST) Jun 18

Karnataka News Live 18 June 2025 Mysuru Lokayukta raid - 3 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದ ಚೆಸ್ಕಾಂ ಎಇಇ!

ಮೈಸೂರಿನಲ್ಲಿ ಚೆಸ್ಕಾಂನ ಎಇಇ ದೀಪಕ್ 3 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅನಧಿಕೃತ ವಿದ್ಯುತ್ ಸಂಪರ್ಕ ದಂಡ ಕಡಿಮೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
Read Full Story
05:42 PM (IST) Jun 18

Karnataka News Live 18 June 2025 ಸರ್ಕಾರಿ ಕಚೇರಿಯ ಬಾತ್‌ರೂಮಿನಲ್ಲಿ 8 ಅಡಿ ಉದ್ದದ ಹಾವು; ಬೆಚ್ಚಿಬಿದ್ದ ಸಿಬ್ಬಂದಿ

ಧಾರವಾಡದ ಗ್ರಾಮೀಣಾಭಿವೃದ್ಧಿ ಇಲಾಖೆ ಕಚೇರಿಯ ಬಾತ್‌ರೂಮಿನಲ್ಲಿ ೮ ಅಡಿ ಉದ್ದದ ಹಾವು ಪತ್ತೆಯಾಗಿದೆ. ಉರಗ ತಜ್ಞರು ಹಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ಈ ಘಟನೆ ಕಚೇರಿಗಳ ಸ್ವಚ್ಛತೆ ಕುರಿತು ಚರ್ಚೆ ಹುಟ್ಟುಹಾಕಿದೆ.
Read Full Story
05:33 PM (IST) Jun 18

Karnataka News Live 18 June 2025 ಸತ್ತಳೆಂದು ಅಂತ್ಯಸಂಸ್ಕಾರ ಮಾಡಿದ್ದ ತಂದೆಗೆ ಆಘಾತ - ಕಾಣೆಯಾದ ಮಗಳು ಲವರ್ ಜೊತೆ ಜೀವಂತ

ತನ್ನ ಕಾಣೆಯಾದ ಮಗಳು ಶವವಾಗಿ ಸಿಕ್ಕಳು ಎಂದು ರೋಧಿಸುತ್ತಾ ತಂದೆ ತನ್ನ ಮಗಳ ಅಂತ್ಯಸಂಸ್ಕಾರವನ್ನು ಕೂಡ ನಡೆಸಿದ್ದರು. ಆದರೆ ಹೀಗೆ ಕಾಣೆಯಾದ ಮಗಳು ಆಕೆಯ ಲವರ್ ಜೊತೆ ತಿರುಗಾಡುತ್ತಿರುವುದು ತಂದೆಯ ಕಣ್ಣಿಗೆ ಕಂಡಿದೆ.

Read Full Story
05:30 PM (IST) Jun 18

Karnataka News Live 18 June 2025 ದಿನದ ಕೆಲಸದ ಅವಧಿ 10 ಗಂಟೆಗೆ ವಿಸ್ತರಣೆ, ಕರ್ನಾಟಕ ಐಟಿ ಉದ್ಯೋಗಿಗಳ ಒಕ್ಕೂಟ ಭಾರೀ ವಿರೋಧ!

ಕರ್ನಾಟಕ ಸರ್ಕಾರವು ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಗೆ ಬದಲಾವಣೆಗಳನ್ನು ಪ್ರಸ್ತಾಪಿಸಿದ್ದು, ಕೆಲಸದ ಸಮಯವನ್ನು 9 ರಿಂದ 10 ಕ್ಕೆ ಹೆಚ್ಚಿಸುವ ಪ್ರಸ್ತಾಪ ಮಾಡಿದೆ. ಓವರ್‌ಟೈಮ್‌ ಸೇರಿದರೆ ದಿನಕ್ಕೆ ಗರಿಷ್ಠ 12 ಗಂಟೆಗಳಾಗಲಿದೆ.

Read Full Story
05:30 PM (IST) Jun 18

Karnataka News Live 18 June 2025 ಪ್ರೀತಿ ಹೆಸರಲ್ಲಿ ಮಹಿಳೆಗೆ ಬ್ಲಾಕ್‌ಮೇಲ್ ಪ್ರಕರಣ; ಆರೋಪಿ ಮೊಬೈಲ್ ಪರಿಶೀಲನೆ ವೇಳೆ ಪೊಲೀಸರೇ ಶಾಕ್!

ಮದುವೆಯಾಗುವ ಭರವಸೆ ನೀಡಿ ವಿಚ್ಛೇದಿತ ಮಹಿಳೆಯೊಬ್ಬರ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪಿಯನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಸೈಬರ್ ಸೆಂಟರ್ ನಡೆಸುತ್ತಿದ್ದ ಆರೋಪಿ, ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯನ್ನು ವಂಚಿಸಿದ್ದಾನೆ.
Read Full Story
05:27 PM (IST) Jun 18

Karnataka News Live 18 June 2025 ಊರು ಬಿಟ್ಟರೂ ಮೂಲ‌ ಮರೆಯದ ರಕ್ಷಿತಾ... ಕಟೀಲು, ಕೊಲ್ಲೂರಿಗೆ ಭೇಟಿ ಕೊಟ್ಟ ನಟಿ

ಕನ್ನಡ ಚಿತ್ರರಂಗದ ನಟಿ, ನಿರ್ಮಾಪಕಿ ರಕ್ಷಿತಾ ಜೋರಾದ ಮಳೆಯ ನಡುವೆ ಕರಾವಳಿಗೆ ಭೇಟಿ ನೀಡಿ, ಇಲ್ಲಿನ ವಿವಿಧ ದೇಗುಲಗಳ ದರ್ಶನ ಪಡೆದಿದ್ದಾರೆ.

Read Full Story