MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Karna Serial: ಮುತ್ತಿನಂಥ ಮಾತು ಹೇಳಿ ಅಪ್ಪ-ತಮ್ಮನಿಗೆ ಶಾಕ್ ಕೊಟ್ಟ ಕರ್ಣ; ನಿಧಿ ಕನ್ಫ್ಯೂಸ್

Karna Serial: ಮುತ್ತಿನಂಥ ಮಾತು ಹೇಳಿ ಅಪ್ಪ-ತಮ್ಮನಿಗೆ ಶಾಕ್ ಕೊಟ್ಟ ಕರ್ಣ; ನಿಧಿ ಕನ್ಫ್ಯೂಸ್

ಕರ್ಣ ಸೀರಿಯಲ್‌ನಲ್ಲಿ ಸಾಲು ಸಾಲು ಟ್ವಿಸ್ಟ್‌ಗಳ ಬಳಿಕ, ಕರ್ಣ ಸಹಜ ಜೀವನಕ್ಕೆ ಮರಳಿದ್ದಾನೆ. ನಿತ್ಯಾ ಜೊತೆಗಿನ ಮದುವೆ, ಮನೆಯಲ್ಲಾದ ದುರಂತದ ನಂತರವೂ ಕರ್ಣನ ಮುಖದಲ್ಲಿನ ನಗು, ಅವನ ತಂದೆ ರಮೇಶ್, ತಮ್ಮ ಸಂಜಯ್ ಮತ್ತು ಮಾಜಿ ಪ್ರೇಯಸಿ ನಿಧಿಗೆ ಗೊಂದಲ ಮೂಡಿಸಿದೆ.

2 Min read
Mahmad Rafik
Published : Oct 23 2025, 08:15 AM IST
Share this Photo Gallery
  • FB
  • TW
  • Linkdin
  • Whatsapp
15
ಸಹಜ ಜೀವನಕ್ಕೆ ಮರಳಿದ ಕರ್ಣ
Image Credit : Zee Kannada

ಸಹಜ ಜೀವನಕ್ಕೆ ಮರಳಿದ ಕರ್ಣ

ಸೀರಿಯಲ್‌ಗಳಲ್ಲಿ ಏನು ಬೇಕಾದ್ರೂ ನಡೆಯುತ್ತೆ ಅನ್ನೋದಕ್ಕೆ ಕರ್ಣ ಸೀರಿಯಲ್ ಸಾಕ್ಷಿಯಾಗಿದೆ. ಒಂದೇ ದಿನದ ಸಂಚಿಕೆಯಲ್ಲಿ ಧಾರಾವಾಹಿ ಸಂಪೂರ್ಣ ಬದಲಾಗಿದೆ. ಕರ್ಣನ ಮದುವೆಯಾಯ್ತು, ನಿತ್ಯಾ ಗರ್ಭಿಣಿ, ಮನೆಗೆ ಬೆಂಕಿ ಸೇರಿದಂತೆ ಸಾಲು ಸಾಲು ಟ್ವಿಸ್ಟ್ ನೀಡಿ ನೋಡುಗರನ್ನು ಮನರಂಜಿಸಲಾಗಿದೆ. ಈ ಎಲ್ಲಾ ಘಟನೆ ನಡೆದ ಮರುದಿನವೇ ಕರ್ಣ ಎಂದಿನಂತೆ ಮುಗುಳ್ನಗುತ್ತಾ ಅಪ್ಪ ರಮೇಶ್, ತಮ್ಮ ಸಂಜೀವ್‌ಗೆ ಶಾಕ್ ನೀಡಿದ್ದಾನೆ. ಕರ್ಣ ಎಂದಿನಂತೆ ಸಹಜ ಜೀವನಕ್ಕೆ ಮರಳಿರೋದನ್ನು ನೋಡಿ ನಿಧಿ ಫುಲ್ ಕನ್ಫ್ಯೂಸ್ ಆಗಿದ್ದಾಳೆ.

25
ರಮೇಶ್ ಮತ್ತು ಸಂಜಯ್‌ಗೆ ಶಾಕ್
Image Credit : Zee Kannada

ರಮೇಶ್ ಮತ್ತು ಸಂಜಯ್‌ಗೆ ಶಾಕ್

ನಿತ್ಯಾ ಜೊತೆಗಿನ ಮದುವೆ, ಮಾಜಿ ಪ್ರೇಯಸಿ ನಿಧಿ ಕಣ್ಮುಂದೆ ಇದ್ರೆ ಕರ್ಣ ಶೋಕದಲ್ಲಿರುತ್ತಾನೆ. ಆತನ ಸೋತ ಮುಖ ನೋಡಿ ಆನಂದ ತೆಗೆದುಕೊಳ್ಳಬೇಕು ಅನ್ನೋದು ರಮೇಶ್‌ನ ಪ್ಲಾನ್ ಆಗಿತ್ತು. ರಮೇಶ್‌ನ ಈ ಕುತಂತ್ರಕ್ಕೆ ಮಗ ಸಂಜಯ್ ಸಹ ಸಾಥ್ ನೀಡಿದ್ದಾನೆ. ಬೆಳಗ್ಗೆ ಎದ್ದು ಕರ್ಣನ ಸೋತ ಮುಖ ನೋಡಲು ಬಂದಿದ್ದ ರಮೇಶ್ ಮತ್ತು ಸಂಜಯ್‌ಗೆ ಶಾಕ್ ಆಗಿದೆ.

Related Articles

Related image1
Karna Serial: ಒಡೆದ ಹೃದಯಗಳ ಪಿಸುಮಾತಿಗೆ ಸಾಕ್ಷಿಯಾದ ಕರ್ಣ-ನಿಧಿ ಮೌನ, ಅಸಹಾಯಕಳಾಗಿ ನಿಂತ ನಿತ್ಯಾ
Related image2
Karna Serial: ಗುಟ್ಟಾಗಿಯೇ ಉಳಿತು ಮೂರು ಗಂಟಿನ ಸತ್ಯ: ಕರ್ಣನದ್ದು ಒಂದೊಂದು ಭೂಮಿ ತೂಕದ ಮಾತು
35
ಕರ್ಣನ ಮುಖದಲ್ಲಿನ ನಗು ನೋಡಿ ಶಾಕ್
Image Credit : Zee Kannada

ಕರ್ಣನ ಮುಖದಲ್ಲಿನ ನಗು ನೋಡಿ ಶಾಕ್

ಇವತ್ತು ಬೆಳಗ್ಗೆ ನಿಜವಾದ ಬೆಳಕು ಕೊಡುವ ಸೂರ್ಯ ಹುಟ್ಟಿದ್ದಾನೆ. ಇವತ್ತಿನಿಂದ ಕರ್ಣನ ತಿಪ್ಪೆ ಬದುಕಿನ ಹೊಸ ಅಧ್ಯಾಯ ಆರಂಭ ಎಂದು ರಮೇಶ್ ಮಗನಿಗೆ ಹೇಳುತ್ತಾನೆ. ಕರ್ಣನ ಹೊಸ ಅಧ್ಯಾಯ ನೋಡಲು ಮಗ ಸಂಜಯ್ ಜೊತೆ ರಮೇಶ್ ಬರುತ್ತಾನೆ. ಆದ್ರೆ ಕರ್ಣನ ಮುಖದಲ್ಲಿನ ನಗು ನೋಡಿ ಶಾಕ್ ಆದ ರಮೇಶ್, ಇವನಿಗೇನಾದ್ರೂ ಹುಚ್ಚು ನಾಯಿ ಕಚ್ಚಿದೆಯಾ ಎಂದು ಮಗನಿಗೆ ಕೇಳುತ್ತಾನೆ.

45
ಕರ್ಣನ ಮುತ್ತಿನಂಥ ಮಾತು
Image Credit : Zee Kannada

ಕರ್ಣನ ಮುತ್ತಿನಂಥ ಮಾತು

ಅಡುಗೆ ಸಿಬ್ಬಂದಿ ಜೊತೆ ಮಾತನಾಡಿರುವಾಗ ಕರ್ಣ, ಏನಾದ್ರೂ ತಪ್ಪು ಆಯ್ತು ಅಂದ್ಕೊಳ್ಳಿ. ಅದನ್ನು ಸಹ ಖುಷಿ ದಾರಿಗೆ ತಂದು ಸರಿ ಮಾಡಿಕೊಳ್ಳಬೇಕು ಎಂದು ಮುತ್ತಿನಂತಹ ಮಾತನ್ನು ಹೇಳಿದ್ದಾನೆ. ಕರ್ಣನ ಮಾತುಗಳು ಮತ್ತ ನಗುವನ್ನು ಅರಗಿಸಿಕೊಳ್ಳಲು ನೀಚ ರಮೇಶ್‌ಗೆ ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: Karna Serial: ನಿತ್ಯಾ, ನಿಧಿ ಎಂಟ್ರಿಯಿಂದ ನಯನತಾರಾಳ ಆತಂಕ, ಬಯಲಾಗುವುದೇ ಆ ಕರಾಳ ರಹಸ್ಯ?

55
ನಿಧಿ ಕನ್ಫ್ಯೂಸ್
Image Credit : Zee Kannada

ನಿಧಿ ಕನ್ಫ್ಯೂಸ್

ಸದ್ಯ ಅಜ್ಜಿ ಶಾಂತಿ ಜೊತೆ ಕರ್ಣನ ಮನೆಯಲ್ಲಿಯೇ ನಿಧಿ ಆಶ್ರಯ ಪಡೆದುಕೊಂಡಿದ್ದಾಳೆ. ಅಕ್ಕನ ಜೀವನದಲ್ಲಾದ ಬದಲಾವಣೆ, ಪ್ರೀತಿ ಕಳೆದುಕೊಂಡ ದುಖಃದಲ್ಲಿರುವ ನಿಧಿ ಸಹ ಬೆಳಗ್ಗೆ ಕರ್ಣ ನಗುತ್ತಾ ಲವಲವಿಕೆಯಿಂದಿರೊದ್ನು ನೋಡಿ ಕನ್ಫ್ಯೂಸ್ ಆಗಿದ್ದಾಳೆ. ತಂದೆ ರಮೇಶ್ ಜೊತೆಯಲ್ಲಿ ನಿಧಿಗೂ ಕರ್ಣ ಬಿಸಿಬಿಸಿಯಾದ ಕಾಫಿ ಮಾಡಿಕೊಟ್ಟಿದ್ದಾನೆ.

ಇದನ್ನೂ ಓದಿ: ಅನ್ಕೊಂಡಿದ್ದು ಒಂದು, ಆಗಿದ್ದು ಇನ್ನೊಂದು: ಪ್ಲಾನ್ ಫ್ಲಾಪ್ ಆಗಿದ್ದಕ್ಕೆ ರಮೇಶ್‌ಗೆ ಆಯ್ತು ಭ್ರಮನಿರಸನ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕರ್ಣ ಧಾರಾವಾಹಿ
ಜೀ ಕನ್ನಡ
ನಮ್ರತಾ ಗೌಡ
ಭವ್ಯಾ ಗೌಡ
ಕಿರಣ್ ರಾಜ್
ಕನ್ನಡ ಧಾರಾವಾಹಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved