MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Karna Serial: ಕರ್ಣ-ನಿಧಿ ಖುಷಿ ಹಾಳು ಮಾಡಲು ಪಣ ತೊಟ್ಟಿರೋ ಸಂಜಯ್‌ ಪಾತ್ರಧಾರಿ ಯಾರು?

Karna Serial: ಕರ್ಣ-ನಿಧಿ ಖುಷಿ ಹಾಳು ಮಾಡಲು ಪಣ ತೊಟ್ಟಿರೋ ಸಂಜಯ್‌ ಪಾತ್ರಧಾರಿ ಯಾರು?

ಕರ್ಣ ಧಾರಾವಾಹಿಯಲ್ಲಿ ಸಂಜಯ್‌ ಪಾತ್ರದಲ್ಲಿ ವಿನಯ್‌ ಕಶ್ಯಪ್‌ ನಟಿಸುತ್ತಿದ್ದಾರೆ. ಇದು ಪಕ್ಕಾ ನೆಗೆಟಿವ್‌ ಪಾತ್ರವಾಗಿದ್ದು, ಹೀರೋ ಕರ್ಣನನ್ನು ಕಂಡರೆ ಸಂಜಯ್‌ಗೆ ಆಗೋದೇ ಇಲ್ಲ. ಸಂಜಯ್‌ ಆಸ್ತಿಗೋಸ್ಕರ, ಸ್ವಾರ್ಥಕ್ಕೋಸ್ಕರ ಏನು ಬೇಕಿದ್ರೂ ಮಾಡೋಕೆ ರೆಡಿ ಇರುವ ಪಾತ್ರವಾಗಿದೆ. 

1 Min read
Padmashree Bhat
Published : Oct 19 2025, 11:43 AM IST
Share this Photo Gallery
  • FB
  • TW
  • Linkdin
  • Whatsapp
15
ಸಂಜಯ್‌ ಪಾತ್ರಧಾರಿ ಯಾರು?
Image Credit : zee5 and instagram

ಸಂಜಯ್‌ ಪಾತ್ರಧಾರಿ ಯಾರು?

ಸಂಜಯ್‌ ಪಾತ್ರಧಾರಿ ಯಾರು? ಇವರ ಹಿನ್ನಲೆ ಏನು? ನಟನೆ ಶುರುವಾಗಿದ್ದು ಹೇಗೆ ಮುಂತಾದ ವಿಚಾರಗಳ ಬಗ್ಗೆ ಸ್ವತಃ ವಿನಯ್‌ ಕಶ್ಯಪ್‌ ಅವರೇ ಮಾತನಾಡಿದ್ದಾರೆ.

25
ವಿದ್ಯಾರ್ಹತೆ ಏನು?
Image Credit : zee5 and instagram

ವಿದ್ಯಾರ್ಹತೆ ಏನು?

ವಿನಯ್‌ ಕಶ್ಯಪ್‌ ಸಿಂಹ ಅವರು ಇಂಜಿನಿಯರಿಂಗ್‌ ಓದಿದ್ದು, ಇನ್ನೇನು ಕೆಲಸಕ್ಕೆ ಸೇರಿಕೊಳ್ಳಬೇಕು ಎನ್ನುವಷ್ಟರಲ್ಲಿ ಅವರು ನಟನೆ ಶುರು ಮಾಡ್ತೀನಿ ಎಂದು ರಂಗ ಬದಲಾಯಿಸಿದರು.

Related Articles

Related image1
Karna Serial: ತೇಜಸ್‌, ನಿತ್ಯಾ ಮದುವೆ ಮುರಿದ ಆ ನೀಚ ಯಾರು? ನಿಧಿ ಅಕ್ಕನನ್ನು ಕರ್ಣ ಯಾಕೆ ಮದುವೆ ಆಗಲು ಒಪ್ತಾನೆ?
Related image2
Karna Serial: ನಿಧಿ-ಕರ್ಣರನ್ನು ದೂರ ಮಾಡೋಕೆ ಅಸಲಿ ಕಾರಣ ಕೊಟ್ಟ ರಮೇಶ್!‌ ಎಂಥ ಕುತಂತ್ರಿಯೋ ನೀನು
35
ರಂಗಭೂಮಿ ನಟ
Image Credit : zee5 and instagram

ರಂಗಭೂಮಿ ನಟ

ವಿನಯ್‌ ಕಶ್ಯಪ್‌ ಅವರು ರಂಗಭೂಮಿಯಿಂದ ಬಂದವರು. ಅಲ್ಲಿ ಅವರು ನಾಟಕದಲ್ಲಿ ಅವಕಾಶ ಪಡೆದುಕೊಳ್ಳೋದಿಕ್ಕೆ ಸಾಕಷ್ಟು ಕಷ್ಟಪಟ್ಟಿದ್ದರು. ಮಗ ಇಂಜಿನಿಯರಿಂಗ್‌ ಬಿಟ್ಟು ನಟನೆಗೆ ಬಂದ ಎಂದು ಅವರ ಮನೆಯವರು ಕೂಡ ಬೇಸರಮಾಡಿಕೊಂಡಿದ್ದರಂತೆ.

45
ಆಡಿಷನ್‌ಗಳಲ್ಲಿ ಭಾಗವಹಿಸಿದ್ರು
Image Credit : zee5 and instagram

ಆಡಿಷನ್‌ಗಳಲ್ಲಿ ಭಾಗವಹಿಸಿದ್ರು

ಆರಂಭದಲ್ಲಿ ವಿನಯ್‌ ಅವರಿಗೆ ಒಂದೇ ಒಂದು ಅವಕಾಶವೇ ಸಿಗುತ್ತಿರಲಿಲ್ಲ. ಇದಕ್ಕಾಗಿ ವಿನಯ್‌ ಪಟ್ಟ ಕಷ್ಟ ಅಷ್ಟಿಷ್ಟಲ್ಲ. “ಪೌರಾಣಿಕ ಧಾರಾವಾಹಿಯ ಆಡಿಷನ್‌ಗೆ ಹೋದಾಗ ಏಜೆನ್ಸಿಯವರು ಬಾಯಿಗೆ ಬಂದಹಾಗೆ ಮಾತನಾಡಿದರು, ಶರ್ಟ್‌ ತೆಗೆಸಿ ಫಿಟ್‌ನೆಸ್‌ ನೋಡಿದರು, ಶೇವ್‌ ಕೂಡ ಮಾಡಿ ಲುಕ್‌ ಟೆಸ್ಟ್‌ ಮಾಡಿದರು. ಆಮೇಲೆ ಫೋನ್‌ ಬಂದು, ಕಿಚ್ಚ ಸುದೀಪ್‌ ಥರ ವಾಯ್ಸ್‌ ಬೇಕು, ಆಪರೇಶನ್‌ ಮಾಡಿಸಿಕೊಳ್ಳಿ ಎಂದು ಹೇಳಿದ್ದರಂತೆ. ಅದಾದ ಬಳಿಕ ಏಜೆನ್ಸಿಯವರು, ಶೇವ್‌ ಮಾಡಿಸಿಕೊಳ್ಳೋರು ಡೀಲ್‌ ಮಾಡಿಕೊಂಡು ಬ್ಯುಸಿನೆಸ್‌ ಮಾಡ್ತಿದ್ದಾರೆ ಎಂದು ಆಮೇಲೆ ಗೊತ್ತಾಯಿತು. ಆಪರೇಶನ್‌ ಮಾಡಿಸಿಕೊಳ್ಳದೆ ನಾನು ಬಚಾವ್‌ ಆದೆ” ಎಂದು ವಿನಯ್‌ ಕಶ್ಯಪ್‌ ಅವರೇ ಹೇಳಿದ್ದಾರೆ.

55
ಕೆಲ ಧಾರಾವಾಹಿಗಳಲ್ಲಿ ನಟನೆ
Image Credit : zee5 and instagram

ಕೆಲ ಧಾರಾವಾಹಿಗಳಲ್ಲಿ ನಟನೆ

ಅರಮನೆ ಗಿಳಿ ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವಿಧಿ ಬಾಯ್‌ಫ್ರೆಂಡ್‌ ಆಗಿ ನಟಿಸಿದ್ದರು. ‘ಹಿಟ್ಲರ್‌ ಕಲ್ಯಾಣ’, ‘ಕನ್ನಡತಿ’, ‘ಚಿಕ್ಕೆಜಮಾನಿ’, ‘ಸೇವಂತಿ’ ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಕರ್ಣ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved