MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಶ್ರಾವಣಿ-ಸುಬ್ರಮಣ್ಯ ರಕ್ಷಣೆಗೆ ಮಹಾಶಕ್ತಿ ನಿಂತಾಯ್ತು; ಇನ್ಮುಂದೆ ಎದುರಾಳಿಗಳಿಗೆ ಇಲ್ಲ ಉಳಿಗಾಲ

ಶ್ರಾವಣಿ-ಸುಬ್ರಮಣ್ಯ ರಕ್ಷಣೆಗೆ ಮಹಾಶಕ್ತಿ ನಿಂತಾಯ್ತು; ಇನ್ಮುಂದೆ ಎದುರಾಳಿಗಳಿಗೆ ಇಲ್ಲ ಉಳಿಗಾಲ

Shravani Subramanya: ಶ್ರಾವಣಿ ಮತ್ತು ಸುಬ್ರಮಣ್ಯ ಅವರ ಮದುವೆಗೆ ಶ್ರೀವಲ್ಲಿಯೇ ಕಾರಣ ಎಂಬ ವಿಚಾರ ವಿಜಯಾಂಬಿಕಾಗೆ ತಿಳಿದಿದೆ. ಶ್ರೀವಲ್ಲಿಯ ತ್ಯಾಗದಿಂದ ಮದುವೆಯಾಗಿರುವುದನ್ನು ತಿಳಿದು ವಿಜಯಾಂಬಿಕಾಗೆ ಆಘಾತವಾಗಿದೆ. ಶ್ರೀವಲ್ಲಿ ವಿಜಯಾಂಬಿಕಾಗೆ ಎಚ್ಚರಿಕೆ ನೀಡಿದ್ದಾಳೆ.

1 Min read
Mahmad Rafik
Published : Sep 15 2025, 05:50 PM IST
Share this Photo Gallery
  • FB
  • TW
  • Linkdin
  • Whatsapp
15
ಶ್ರಾವಣಿ ಸುಬ್ರಮಣ್ಯ ಸೀರಿಯಲ್‌
Image Credit : Shravani Subramanya FB

ಶ್ರಾವಣಿ ಸುಬ್ರಮಣ್ಯ ಸೀರಿಯಲ್‌

ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನಲ್ಲಿ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿದೆ. ಶ್ರೀವಲ್ಲಿಯ ಮಹಾತ್ಯಾಗದಿಂದ ಶ್ರಾವಣಿ-ಸುಬ್ರಮಣ್ಯ ಮದುವೆಯಾಗಿರೋ ವಿಚಾರ ವಿಜಯಾಂಬಿಕೆ ಮತ್ತು ಮದನ್‌ಗೆ ಗೊತ್ತಾಗಿದೆ. ಇಷ್ಟು ಮಾತ್ರವಲ್ಲ ವಿಜಯಾಂಬಿಕೆಗೆ ಶ್ರೀವಲ್ಲಿ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾಳೆ. ಇದರಿಂದಾಗಿ ವಿಜಯಾಂಬಿಕಾಗೆ ಬಿಗ್ ಶಾಕ್ ಎದುರಾಗಿದೆ.

25
ವಣಿ-ಸುಬ್ರಮಣ್ಯ ಮದುವೆಗೆ ಶ್ರೀವಲ್ಲಿಯೇ ಕಾರಣ
Image Credit : Shravani Subramanya FB

ವಣಿ-ಸುಬ್ರಮಣ್ಯ ಮದುವೆಗೆ ಶ್ರೀವಲ್ಲಿಯೇ ಕಾರಣ

ರೌಡಿಗಳಿಂದ ಸುಬ್ರಮಣ್ಯನನ್ನು ರಕ್ಷಿಸಿದ ಶ್ರೀವಲ್ಲಿ ಮದುವೆಗೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡು ಶ್ರೀವಲ್ಲಿಗೆ ವಿಜಯಾಂಬಿಕಾ ಫೋನ್ ಮಾಡಿದ್ದಾಳೆ. ಈ ವೇಳೆ ತಾನೇ ಶ್ರಾವಣಿ-ಸುಬ್ರಮಣ್ಯ ಮದುವೆ ನಡೆಯಲು ಕಾರಣ. ದೇವಸ್ಥಾನದವರೆಗೂ ಬಂದ್ರೂ ಮದುವೆಗೆ ಬರಲಿಲ್ಲ. ನಾನು ಪ್ರೀತಿಯನ್ನು ಬಲವಂತದಿಂದ ಪಡೆದುಕೊಳ್ಳಲು ಹೋಗಿ ಸುಬ್ಬುನಿಂದ ದೂರವಾದೆ ಎಂದು ಶ್ರೀವಲ್ಲಿ ಹೇಳಿದ್ದಾಳೆ.

Related Articles

Related image1
ರೋಚಕ ಘಟ್ಟದಲ್ಲಿಯೇ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನಿಂದ ಹೊರ ಬಂದ ನಟಿ
Related image2
ಶ್ರಾವಣಿ ಸುಬ್ರಮಣ್ಯ : ವಿಜಯಾಂಬಿಕ ಲೆಕ್ಕ ತಲೆ ಕೆಳಗಾಯ್ತು... ವೀರೂನ ರಕ್ಷಣೆಗೆ ಬಂದ್ರು ಲಲಿತಾ ದೇವಿ
35
ಭ್ರಮೆಯಿಂದ ಹೊರಬಂದ ಶ್ರೀವಲ್ಲಿ
Image Credit : Shravani Subramanya FB

ಭ್ರಮೆಯಿಂದ ಹೊರಬಂದ ಶ್ರೀವಲ್ಲಿ

ಸುಬ್ಬು ಪ್ರೀತಿಯನ್ನು ಹಿಡಿದಿಟ್ಟುಕೊಂಡು ಅವನಿಂದ ತಾಳಿ ಕಟ್ಟಿಸಿಕೊಳ್ಳುತ್ತೀನಿ ಅಂದುಕೊಂಡಿದ್ದು ನಾನು ಮಾಡಿದ ತಪ್ಪು. ನಾನು ಆ ಭ್ರಮೆಯಿಂದ ಆಚೆ ಬಂದಿದ್ದೇನೆ. ನೀವು ಸಹ ಈ ವಿಚಾರಗಳಿಂದ ಹೊರಗೆ ಬಂದು ಅವರಿಬ್ಬರನ್ನು ಬದುಕಲು ಬಿಡಿ ಎಂದು ಶ್ರಾವಣಿ ಹೇಳಿದ್ದಾಳೆ.

45
ವಿಜಯಾಂಬಿಕಾಗೆ ತಿರುಗೇಟು
Image Credit : Shravani Subramanya FB

ವಿಜಯಾಂಬಿಕಾಗೆ ತಿರುಗೇಟು

ಇನ್ಮುಂದೆ ಅವರ ಮೇಲೆ ದ್ವೇಷ ಸಾಧಿಸೋದು, ಕೆಂಡಕಾರೋದು ಯಾವುದು ಬೇಡ. ನನಗಂತೂ ನಿಮ್ಮ ಸಹವಾಸವೇ ಸಾಕು. ಸುಬ್ಬು ನನ್ನವನಾಗಬೇಕೆಂಬ ದುರಾಸೆಯಿಂದ ನಿಮ್ಮ ಜೊತೆ ಕೈ ಜೋಡಿಸಿದೆ. ನಾನು ಅನ್ಯಾಯದ ದಾರಿ ಹಿಡಿಯದೇ ನ್ಯಾಯವಾಗಿ ನಡೆದುಕೊಂಡಿದ್ರೆ ಸುಬ್ಬು ನನಗೆ ಸಿಗುತ್ತಿದ್ದ. ನಿಮ್ಮಂಥವರ ಸಹವಾಸ ಮಾಡಿ ನಾನು ತಪ್ಪು ಮಾಡಿದೆ ಎಂದು ವಿಜಯಾಂಬಿಕಾ ಮುಖದ ಮೇಲೆ ಹೊಡೆದಂತೆ ಶ್ರೀವಲ್ಲಿ ಹೇಳಿದ್ದಾಳೆ.

ಇದನ್ನೂ ಓದಿ: 'ನಾ ನಿನ್ನ ಬಿಡಲಾರೆ' ಧಾರಾವಾಹಿಯಿಂದ ದಿಢೀರ್ ಕಾಣೆಯಾದ ನಟಿ? ಎಲ್ಲಿ ಹೋದ್ರು?

55
ವಿಜಯಾಂಬಿಕಾಗೆ ಎಚ್ಚರಿಕೆ ನೀಡಿದ ಶ್ರೀವಲ್ಲಿ
Image Credit : Shravani Subramanya FB

ವಿಜಯಾಂಬಿಕಾಗೆ ಎಚ್ಚರಿಕೆ ನೀಡಿದ ಶ್ರೀವಲ್ಲಿ

ಇಲ್ಲಿ ಯಾರು ವಿಲನ್ ಎಂಬ ವಿಷಯ ಎಲ್ಲರಿಗೂ ಗೊತ್ತಿದೆ. ಶ್ರಾವಣಿ ಮತ್ತು ಸುಬ್ಬು ಮದುವೆಯಾಗಿದ್ದಾರೆ ಎಂಬ ಕೋಪಕ್ಕೆ ಅವರಿಬ್ಬರಿಗೂ ತೊಂದರೆ ಮಾಡುವ ಯೋಚನೆ ಇದ್ರೆ ಅದರಿಂದ ಹೊರಗೆ ಬನ್ನಿ. ಸುಬ್ಬುಗೆ ತೊಂದರೆ ಮಾಡುವ ಯೋಚನೆಯನ್ನೇ ಇಲ್ಲಿಗೆ ಬಿಟ್ಟುಬಿಡಿ. ಅವರಿಬ್ಬರನ್ನು ಕಾಯೋದಕ್ಕೆ ಇನ್ಮುಂದೆ ಶ್ರೀವಲ್ಲಿ ನಿಮಗೆ ಎದುರಾಗಿ ನಿಲ್ಲುತ್ತಾಳೆ ಎಂದು ವಿಜಯಾಂಬಿಕಾಗೆ ಎಚ್ಚರಿಕೆ ನೀಡಿದ್ದಾಳೆ.

ಇದನ್ನೂ ಓದಿ: ಮದುವೆಯಾಗಿ ಬರ್ತಿದ್ದಂತೆ ಹಿತಶತ್ರುಗೆ ಗುನ್ನಾ ಕೊಟ್ಟ ಶ್ರಾವಣಿ; ಇನ್ಮುಂದೆ ತಂಟೆಗೆ ಬಂದ್ರೆ ತಟ್ಟೋದಷ್ಟೆ!

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಶ್ರಾವಣಿ ಸುಬ್ರಮಣ್ಯ
ಕನ್ನಡ ಧಾರಾವಾಹಿ
ಜೀ ಕನ್ನಡ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved