MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Karna Serial: ತೇಜಸ್‌, ನಿತ್ಯಾ ಮದುವೆ ಮುರಿದ ಆ ನೀಚ ಯಾರು? ನಿಧಿ ಅಕ್ಕನನ್ನು ಕರ್ಣ ಯಾಕೆ ಮದುವೆ ಆಗಲು ಒಪ್ತಾನೆ?

Karna Serial: ತೇಜಸ್‌, ನಿತ್ಯಾ ಮದುವೆ ಮುರಿದ ಆ ನೀಚ ಯಾರು? ನಿಧಿ ಅಕ್ಕನನ್ನು ಕರ್ಣ ಯಾಕೆ ಮದುವೆ ಆಗಲು ಒಪ್ತಾನೆ?

ಕರ್ಣ ಧಾರಾವಾಹಿಯಲ್ಲಿ ಹೊಸ ಪ್ರೋಮೋವೊಂದು ರಿಲೀಸ್‌ ಆಗಿದ್ದು, ನಿತ್ಯಾ ಹಾಗೂ ತೇಜಸ್‌ ಮದುವೆ ಮುರಿದಿರೋದು ವೀಕ್ಷಕರಿಗೆ ಬೇಸರ ತಂದಿದೆ. ಈ ಹಿಂದೆ ಕರ್ಣ ಹಾಗೂ ನಿತ್ಯಾ ಮದುವೆ ಆಗುವ ವಿಡಿಯೋ ಟೆಲಿಕಾಸ್ಟ್‌ ಆದಾಗಲೂ ಕೂಡ ವೀಕ್ಷಕರಿಗೆ ಬೇಸರ ಆಗಿದ್ದರೂ ಕೂಡ, ಇದು ಕನಸು ಇರಬಹುದು ಎಂದು ಸಣ್ಣ ಆಶಯ ಇತ್ತು. 

2 Min read
Padmashree Bhat
Published : Oct 14 2025, 01:32 AM IST
Share this Photo Gallery
  • FB
  • TW
  • Linkdin
  • Whatsapp
19
ತೇಜಸ್‌ ಇಲ್ಲ, ಅಪ್ಪ ಅಮ್ಮನೂ ಕಾಣೆ
Image Credit : zee kannada

ತೇಜಸ್‌ ಇಲ್ಲ, ಅಪ್ಪ-ಅಮ್ಮನೂ ಕಾಣೆ

ಇನ್ನೇನು ನಿತ್ಯಾ ಹಾಗೂ ತೇಜಸ್‌ ಹಸೆಮಣೆ ಮೇಲೆ ಕೂರಬೇಕು ಎನ್ನುವಷ್ಟರಲ್ಲಿ ತೇಜಸ್‌ ಹಾಗೂ ಅವನ ಅಪ್ಪ-ಅಮ್ಮ ಕಾಣೆಯಾಗಿದ್ದಾರೆ. ಎಲ್ಲರೂ ಹುಡುಕಿದರೂ ಕೂಡ ಅವರ ಸುಳಿವೇ ಇಲ್ಲ. ಇನ್ನೊಂದು ಕಡೆ ನಿತ್ಯಾ ಅಜ್ಜಿಗೆ ದಿಕ್ಕು ತೋಚದ ಹಾಗೆ ಆಗಿದೆ.

29
ಅಂಗಲಾಚಿ ಬೇಡಿದ ಅಜ್ಜಿ
Image Credit : zee kannada

ಅಂಗಲಾಚಿ ಬೇಡಿದ ಅಜ್ಜಿ

ತೇಜಸ್‌ ಅಂತೂ ಮೋಸ ಮಾಡಿ ಹೋದ, ಈಗ ಬೇರೆಯವರಲ್ಲಿ ಯಾರಾದರೂ ನನ್ನ ಮೊಮ್ಮಗಳನ್ನು ಮದುವೆ ಆಗಲಿ ಎಂದು ಅವಳು ಎಲ್ಲರ ಮುಂದೆ ಅಂಗಲಾಚಿ ಬೇಡಿದ್ದಾಳೆ. ಆದರೂ ಕೂಡ ಯಾರೂ ಅವಳ ಮಾತನ್ನು ಕೇಳಲೇ ಇಲ್ಲ.

Related Articles

Related image1
ಮಿತಿ ಮೀರಿ ಮಾತನಾಡಿದ ಕಿಡಿಗೇಡಿಗಳು; ಫಸ್ಟ್‌ ಟೈಮ್‌ ಸಿಡಿದೆದ್ದ Amruthadhaare Serial ನಟಿ ಛಾಯಾ ಸಿಂಗ್!
Related image2
Amruthadhaare Serial: ಭೂಮಿಕಾ, ಯಾವುದು ಆಗಬಾರದು ಅನ್ಕೊಂಡಿದ್ದಳೋ ಅದೇ ಆಗೋಯ್ತು; ಭರ್ಜರಿ ಟ್ವಿಸ್ಟ್‌!
39
ಶಾಂತಿ ಮೊಮ್ಮಗಳ ಜೀವನ ಹಾಳಾಯ್ತು
Image Credit : zee kannada

ಶಾಂತಿ ಮೊಮ್ಮಗಳ ಜೀವನ ಹಾಳಾಯ್ತು

ಇನ್ನೊಂದು ಕಡೆ ಹಸೆಮಣೆ ಏರಿದಮೇಲೆ, ಮದುವೆ ನಿಕ್ಕಿ ಆದ್ಮೇಲೆ ಆ ಮದುವೆ ನಿಂತರೆ, ಹುಡುಗಿಯಲ್ಲಿ ಏನಾದರೂ ಸಮಸ್ಯೆ ಇರಬಹುದು ಎಂದು ಜನರು ಮಾತಾಡಿಕೊಳ್ತಾರೆ, ಬೇರೆ ಯಾರೂ ಕೂಡ ಮದುವೆ ಆಗೋಕೆ ಮುಂದೆ ಬರೋದಿಲ್ಲ ಎಂದು ಅಜ್ಜಿ ಅಂದುಕೊಂಡಿದ್ದಳು. ಹೀಗಾಗಿ ಮೊಮ್ಮಗಳ ಜೀವನ ಹಾಳಾಯ್ತು ಎಂದು ಅವಳು ಅತ್ತಿದ್ದಳು.

49
ಎಲ್ಲ ಚೆನ್ನಾಗಿಯೇ ಇತ್ತು, ಆಮೇಲೆ ಏನಾಯ್ತು?
Image Credit : zee kannada

ಎಲ್ಲ ಚೆನ್ನಾಗಿಯೇ ಇತ್ತು, ಆಮೇಲೆ ಏನಾಯ್ತು?

ಇದೆಲ್ಲ ಸರಿ, ಪ್ರೀತಿಸಿದ್ದ ತೇಜಸ್‌ ಯಾಕೆ ಹಾಗೆ ಮಾಡಿದ ಎನ್ನುವ ಡೌಟ್‌ ಬರುವುದು. ಆರಂಭದಲ್ಲಿ ನಿತ್ಯಾಳನ್ನು ಅವನ ತಂದೆ-ತಾಯಿ ಕೂಡ ಸೊಸೆ ಮಾಡಿಕೊಳ್ಳಲು ಒಪ್ಪಿರಲಿಲ್ಲ, ಆಮೇಲೆ ಮಗನಿಗಿಂತ ಸೊಸೆಯೇ ಬೆಸ್ಟ್‌, ಫೇವರಿಟ್ ಎಂದರು.‌ ಎಲ್ಲ ಶಾಸ್ತ್ರ ಆಗುವವರೆಗೂ ಚೆನ್ನಾಗಿದ್ದ ಅವರು ತಕ್ಷಣ ಮಾಯ ಆಗಿದ್ದು ಹೇಗೆ?

59
ಆ ನೀಚ ಯಾರು?
Image Credit : zee5

ಆ ನೀಚ ಯಾರು?

ತೇಜಸ್‌ ಒಳ್ಳೆಯವನೇ ಇರಬಹುದು. ಆದರೆ ಕರ್ಣನ ತಂದೆ ರಮೇಶ್‌ ಕುತಂತ್ರದಿಂದ ಈ ಮದುವೆ ಮುರಿದಿರಬಹುದು. ಕರ್ಣ ಹಾಗೂ ನಿಧಿ ಪ್ರೀತಿ ವಿಷಯ ತಿಳಿದ ರಮೇಶ್‌ಗೆ ಇವರಿಬ್ಬರಿಗೂ ಬ್ರೇಕಪ್‌ ಮಾಡಿಸಿ, ಕರ್ಣನಿಗೆ ಇನ್ನಷ್ಟು ನೋವು ಕೊಡುವ ಆಸೆ ಇತ್ತು. ನಿತ್ಯಾ, ಕರ್ಣನನ್ನು ಇಷ್ಟಪಡೋದಿಲ್ಲ, ನಮ್ಮ ದಾರಿಗೂ ಅಡ್ಡ ಬರೋದಿಲ್ಲ ಎಂದು ಅವನು ಲೆಕ್ಕಾಚಾರ ಹಾಕಿದ್ದನು.

69
ರಮೇಶ್‌ ಏನು ಮಾಡಿರ್ತಾನೆ?
Image Credit : zee5

ರಮೇಶ್‌ ಏನು ಮಾಡಿರ್ತಾನೆ?

ಬಹುಶಃ ಮದುವೆ ಮನೆಯಲ್ಲಿ ನೀನು ನಿತ್ಯಾಳನ್ನು ಮದುವೆ ಆದರೆ ನಿನ್ನ ಅಥವಾ ನಿಮ್ಮ ತಂದೆ-ತಾಯಿ ಜೀವ ತೆಗೆಯುತ್ತೇನೆ ಎಂದು ತೇಜಸ್‌ಗೆ ರಮೇಶ್ ಧಮ್ಕಿ ಹಾಕಿರಬಹುದು. ಅಥವಾ ೀ ಮದುವೆ ನಡೆದರೆ, ತೇಜಸ್‌ನನ್ನು ಜೀವ ಸಮೇತ ಉಳಿಸೋದಿಲ್ಲ ಎಂದು ಅವನ ತಂದೆ-ತಾಯಿಯನ್ನು ಹೆದರಿಸಿರಬಹುದು. ಇಲ್ಲವೇ ಆ ಮೂವರನ್ನು ಕಿಡ್ನ್ಯಾಪ್‌ ಮಾಡಿರಬಹುದು.‌

79
ತೇಜಸ್‌ ಕೆಲಸದಿಂದ ಕೊರಗ್ತಿರುವ ಅಜ್ಜಿ
Image Credit : zee kannada

ತೇಜಸ್‌ ಕೆಲಸದಿಂದ ಕೊರಗ್ತಿರುವ ಅಜ್ಜಿ

ನಿತ್ಯಾ ಹಾಗೂ ತೇಜಸ್‌ ಮದುವೆ ನಿಲ್ಲತ್ತೆ, ಆದರೆ ನಿತ್ಯಾ ಮದುವೆ ಆಗದೆ ಹಾಗೆ ಅಲ್ಲಿಂದ ಹೋದರೆ ಮತ್ತೆ ಅವಳಿಗೆ ಮದುವೆ ಆಗೋದು ಕಷ್ಟ ಅಂತ ಅಜ್ಜಿ ಕೊರಗುತ್ತಿದ್ದಾಳೆ. ಶಾಂತಿ ತನ್ನ ಗೆಳತಿಯೂ ಆದ ಕರ್ಣನ ಅಜ್ಜಿ ಬಳಿ ಗೋಳು ಹೇಳಿಕೊಂಡು ಅಳಬಹುದು. ನನ್ನ ಮೊಮ್ಮಗನಿಗೂ ಮದುವೆ ಮಾಡಿಸಬೇಕು ಎಂದುಕೊಂಡಿದ್ದ ಆ ಅಜ್ಜಿ, ಕರ್ಣನ ಬಳಿ ನಿತ್ಯಾಳನ್ನು ಮದುವೆ ಆಗು, ಆಗಿಲ್ಲ ಅಂದ್ರೆ ನಾನು ಸಾಯ್ತೀನಿ ಅಂತ ಇವಳು ಧಮ್ಕಿ ಹಾಕಿರಬಹುದು. ಧರ್ಮ ಸಂಕಟಕ್ಕೆ ಬಿದ್ದು ಕರ್ಣ ನಿತ್ಯಾಳನ್ನು ಮದುವೆ ಆಗಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಚೆನ್ನಾಗಿವೆ.

89
ಕರ್ಣ ಹಾಗೂ ನಿತ್ಯಾ ಮದುವೆ ಆದರೆ?
Image Credit : zee kannada

ಕರ್ಣ ಹಾಗೂ ನಿತ್ಯಾ ಮದುವೆ ಆದರೆ?

ಯಾವುದಾದರೂ ಕಾರಣಕ್ಕೆ ಕರ್ಣನನ್ನು ಕಂಡರೆ ನಿತ್ಯಾ ದ್ವೇಷ ಮಾಡ್ತಾಳೆ, ಅವನು ಮಾಡುವ ನೂರು ಒಳ್ಳೆಯ ಕೆಲಸದ ಬದಲು ಒಂದು ಕೆಲಸ ನೋವು ಕೊಡುತ್ತದೆ ಎಂದು ಭಾವಿಸಿದ್ದಳು. ನಿತ್ಯಾಳಿಂದ ಬೈಸಿಕೊಳ್ಳುವ ಕರ್ಣ ಸದಾ ಅವನಿಂದ ದೂರ ಇರಲು ಇಷ್ಟಪಡ್ತಾನೆ. ಈಗ ಇವರಿಬ್ಬರು ಮದುವೆ ಆದರೆ ಮುಂದೆ ಕಥೆ ಏನು? 

99
ಪಾತ್ರಧಾರಿಗಳು
Image Credit : zee kannada

ಪಾತ್ರಧಾರಿಗಳು

ಕರ್ಣ- ಕಿರಣ್‌ ರಾಜ್‌

ನಿಧಿ-ಭವ್ಯಾ ಗೌಡ

ನಿತ್ಯಾ-ನಮ್ರತಾ ಗೌಡ

ಶಾಂತಿ-ಗಾಯತ್ರಿ ಪ್ರಭಾಕರ್‌

ರಮೇಶ್-‌ ಟಿ ಎಸ್‌ ನಾಗಾಭರಣ

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಕರ್ಣ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved