MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Karna Serial Update: ಕರ್ಣ-ನಿಧಿಯನ್ನು ದೂರ ಮಾಡಿದ್ರೂ ಸುಮ್ಮನಾಗದ ನೀಚ ರಮೇಶ್‌ನಿಂದ ಮತ್ತೊಂದು ಮನೆಹಾಳ ಕೆಲಸ

Karna Serial Update: ಕರ್ಣ-ನಿಧಿಯನ್ನು ದೂರ ಮಾಡಿದ್ರೂ ಸುಮ್ಮನಾಗದ ನೀಚ ರಮೇಶ್‌ನಿಂದ ಮತ್ತೊಂದು ಮನೆಹಾಳ ಕೆಲಸ

ಕರ್ಣ ಧಾರಾವಾಹಿಯಲ್ಲಿ ರಮೇಶ್‌ ಬಯಸಿದಂತೆ, ಕರ್ಣ ಹಾಗೂ ನಿತ್ಯಾ ಲೋಕದ ಕಣ್ಣಿಗೆ ಮದುವೆ ನಾಟಕ ಮಾಡಿದ್ದಾರೆ. ಈ ಮದುವೆ ನಡೆದಿಲ್ಲ ಅಂದ್ರೆ ಅಜ್ಜಿ ಸಾಯ್ತೀನಿ ಎಂದಿದ್ದಳು. ಹೀಗಾಗಿ ಅವನು ಭಯಕ್ಕೆ ಬಿದ್ದು, ನಿತ್ಯಾಳನ್ನು ಮದುವೆ ಆಗ್ತೀನಿ ಎಂದಿದ್ದನು. ಅದರಂತೆ ಅವನು ನಾಟಕ ಮಾಡಿದ್ದಾನೆ. 

2 Min read
Padmashree Bhat
Published : Oct 21 2025, 07:21 AM IST
Share this Photo Gallery
  • FB
  • TW
  • Linkdin
  • Whatsapp
15
ಸಪ್ತಪದಿ ತುಳಿದ ಕರ್ಣ, ನಿತ್ಯಾ
Image Credit : zee5

ಸಪ್ತಪದಿ ತುಳಿದ ಕರ್ಣ, ನಿತ್ಯಾ

ನಿತ್ಯಾ ತನಗೆ ತಾನೇ ತಾಳಿ ಕಟ್ಟಿಕೊಂಡಿದ್ದಾಳೆ. ತೇಜಸ್‌ ಜೊತೆ ಮದುವೆ ಆಗುವ ಕನಸು ಹೊತ್ತ ನಿತ್ಯಾಗೆ ಅವಳಿಗೆ ಅವಳೇ ತಾಳಿ ಕಟ್ಟಿಕೊಳ್ಳುವ ಸಮಯ ಬಂದಿದೆ. ಇಂಥ ಕಷ್ಟ ಯಾವ ಹೆಣ್ಣಿಗೂ ಬರಬಾರದಪ್ಪಾ..! ಆಮೇಲೆ ನಿತ್ಯಾ, ಕರ್ಣ ಎಲ್ಲರ ಮುಂದೆ ಸಪ್ತಪದಿ ತುಳಿದಿದ್ದಾರೆ.

25
ಗೋಳಿಟ್ಟ ನಿಧಿ
Image Credit : zee5

ಗೋಳಿಟ್ಟ ನಿಧಿ

ಕರ್ಣ ಹಾಗೂ ನಿತ್ಯಾ ಮದುವೆ ಆದರು, ಒಂದು ಕಡೆ ಅಕ್ಕನ ಜೀವನ, ಇನ್ನೊಂದು ಕಡೆ ಪ್ರೀತಿಸಿದ ಹುಡುಗ ಎಂದು ನಿಧಿ ಕಣ್ಣೀರು ಹಾಕಿದ್ದಾಳೆ. ಇಷ್ಟುದಿನ ಅವಳು ಕಂಡಿದ್ದ ಕನಸು ಎಲ್ಲವೂ ನುಚ್ಚು ನೂರಾಗಿದೆ. ಅವಳ ರೋಧನೆ ಮಾತ್ರ ಎಲ್ಲರ ಕರುಳು ಕಿವುಚಿದ ಹಾಗೆ ಆಗುವುದು.

Related Articles

Related image1
Karna Serial: ನಾಲ್ಕು ಗೋಡೆಯಲ್ಲಿ ನಡೆದ ಗುಟ್ಟು ರಟ್ಟು, ನಿಟ್ಟುಸಿರು ಬಿಟ್ಟ ಪ್ರೇಕ್ಷಕರು
Related image2
Karna Serial: ಕರ್ಣ-ನಿಧಿ ಖುಷಿ ಹಾಳು ಮಾಡಲು ಪಣ ತೊಟ್ಟಿರೋ ಸಂಜಯ್‌ ಪಾತ್ರಧಾರಿ ಯಾರು?
35
ನಿತ್ಯಾ ಮನೆಗೆ ಬೆಂಕಿ ಬಿತ್ತು
Image Credit : zee5

ನಿತ್ಯಾ ಮನೆಗೆ ಬೆಂಕಿ ಬಿತ್ತು

ಕರ್ಣ ಹಾಗೂ ನಿತ್ಯಾ ಲೋಕದ ಕಣ್ಣಿಗೆ ಮದುವೆ ನಾಟಕ ಮಾಡಿದ್ದಾರೆ ಅಷ್ಟೇ. ಇನ್ನು ಒಂದೇ ಮನೆಯಲ್ಲಿ ಅವರು ಹೇಗೆ ಬದುಕ್ತಾರೋ ಏನೋ! ಇನ್ನೊಂದು ಕಡೆ ಮದುವೆ ನಾಟಕ ಮುಗಿಯುತ್ತಿದ್ದಂತೆ ಮನೆಗೆ ಬೆಂಕಿ ಬಿದ್ದಿದೆ. ಇದು ರಮೇಶ್‌ ಮಾಡಿದ್ದಾ ಎಂಬ ಪ್ರಶ್ನೆ ಕೂಡ ಮಾಡಿದೆ. ಕರ್ಣ ಹಾಗೂ ನಿತ್ಯಾ ಮದುವೆ ಆದ್ಮೇಲೆ, ಕರ್ಣನ ಖುಷಿಯವನ್ನು ಅವನು ಕಿತ್ಕೊಂಡ ಮೇಲೆ ಮತ್ತೆ ಅವನು ಮನೆಗೆ ಬೆಂಕಿ ಹಾಕುವ ಕೆಲಸ ಮಾಡ್ತಾನಾ ಎಂಬ ಡೌಟ್‌ ಕೂಡ ಇದೆ.

45
ಟೆಡ್ಡಿ ಬೇರ್‌ ಬಿಡದ ನಿಧಿ
Image Credit : zee5

ಟೆಡ್ಡಿ ಬೇರ್‌ ಬಿಡದ ನಿಧಿ

ಮನೆ ಹೊತ್ತಿ ಉರಿಯುತ್ತಿತ್ತು. ಆಗ ನಿಧಿ ಒಳಗಡೆ ಹೋಗಿ ತನ್ನ ಟೆಡ್ಡಿ ಬೇರ್‌ನ್ನು ತಗೊಳ್ಳಲು ಒಳಗಡೆ ಹೋದಳು. ಕರ್ಣ ಅವಳನ್ನು ಕಾಪಾಡಲು ಹೋಗಿದ್ದಾನೆ. “ನನಗೆ ಈ ಟೆಡ್ಡಿ ಬೇರ್‌ ತುಂಬ ಮುಖ್ಯ” ಎಂದು ಅವಳು ಹೇಳಿದ್ದಾಳೆ. ಇದರ ಹಿಂದಿನ ಅರ್ಥ ಏನು ಎಂದು ಅವನಿಗೆ ಗೊತ್ತೇ ಇರಲಿಕ್ಕಿಲ್ಲ. ಟೆಡ್ಡಿ ಬೇರ್‌ನ್ನು ತನ್ನ ಹುಡುಗ ಎಂದು ನಿಧಿ ಇಷ್ಟು ದಿನಗಳಿಂದ ಅದರ ಜೊತೆ ಮಾತನಾಡುತ್ತ, ಮುದ್ದು ಮಾಡುತ್ತಿದ್ದಳು. ಈಗ ಇನ್ಮುಂದೆ ಕೂಡ ಇದೇ ಥರ ಇರಬೇಕಿದೆ.

55
ಮುಂದೆ ಏನಾಗುತ್ತದೆ?
Image Credit : zee5

ಮುಂದೆ ಏನಾಗುತ್ತದೆ?

ನಿತ್ಯಾ ಹೊಟ್ಟೆಯಲ್ಲಿ ಮಗು ಇರೋದು ಕರ್ಣನಿಗೆ ಗೊತ್ತಾಗಿದೆ. ಅವನು ಮುಂದಿನ ದಿನಗಳಲ್ಲಿ ಈ ವಿಚಾರವನ್ನು ನಿತ್ಯಾಗೆ ಹೇಳಬಹುದು ಅಥವಾ ಅವಳಿಗೆ ಗೊತ್ತಾಗಬಹುದು. ಮೊದಲೇ ಹಸೆಮಣೆಯಲ್ಲಿದ್ದ ನಿತ್ಯಾಳನ್ನು ತೇಜಸ್‌ ಬಿಟ್ಟು ಹೋಗಿದ್ದಾನೆ, ಇದರಿಂದಲೇ ಎಲ್ಲರೂ ಬೇಸರ ಮಾಡಿಕೊಂಡಿದ್ದರು. ಈಗ ಪ್ರಗ್ನೆಂಟ್‌ ನಿತ್ಯಾಳನ್ನು ಬಿಟ್ಟು ಹೋಗಿದ್ದಾನೆ ಎಂದರೆ ಎಲ್ಲರೂ ಇನ್ನಷ್ಟು ಸಿಟ್ಟಾಗ್ತಾರೆ. ಹೀಗಾಗಿ ಕರ್ಣ ಸುಮ್ಮನೆ ಇರಬಹುದು. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬ ಕುತೂಹಲ ಕಾಡುತ್ತಿದೆ, ಒಟ್ಟಿನಲ್ಲಿ ಎಪಿಸೋಡ್‌ಗಳು ಭಾರೀ ಕುತೂಹಲಭರಿತವಾಗಿ ಪ್ರಸಾರ ಆಗ್ತಿವೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಕರ್ಣ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved