MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ದೃಷ್ಟಿಯ ಬಣ್ಣ ಬಯಲಾದ ಬಳಿಕ ಅಗ್ನಿಸಾಕ್ಷಿಯ ಸಿದ್ಧಾರ್ಥ್ ಆಗಿ ಬದಲಾದ ದತ್ತಾ ಭಾಯ್

ದೃಷ್ಟಿಯ ಬಣ್ಣ ಬಯಲಾದ ಬಳಿಕ ಅಗ್ನಿಸಾಕ್ಷಿಯ ಸಿದ್ಧಾರ್ಥ್ ಆಗಿ ಬದಲಾದ ದತ್ತಾ ಭಾಯ್

ದೃಷ್ಟಿ ಬೊಟ್ಟು ಧಾರಾವಾಹಿಯಲ್ಲಿ ಇದೀಗ ದೃಷ್ಟಿಯ ಬಣ್ಣ ಬಯಲಾಗಿದ್ದು, ಇದೀಗ ದತ್ತ ಭಾಯ್ ಲುಕ್ ಸಂಪೂರ್ಣವಾಗಿ ಬದಲಾಗಿ ಅಗ್ನಿಸಾಕ್ಷಿಯ ಸಿದ್ಧಾರ್ಥ್ ನಂತಾಗಿದ್ದಾರೆ. 

2 Min read
Pavna Das
Published : Aug 31 2025, 09:07 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Asianet News

ಕಿರುತೆರೆ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಿರುವ ಕಲರ್ಸ್ ಕನ್ನಡ  (Colors Kannada) ವಾಹಿನಿಯ ದೃಷ್ಟಿ ಬೊಟ್ಟು ಧಾರಾವಾಹಿಯಲ್ಲಿ ಇದೀಗ ದೊಡ್ಡದಾದ ಟ್ವಿಸ್ಟ್ ಸಿಕ್ಕಿದೆ. ಧಾರವಾಹಿಯಲ್ಲಿ ದೃಷ್ಟಿಯ ಬಣ್ಣ ದತ್ತ ಭಾಯ್ ಮುಂದೆ ಬಯಲಾಗಿದೆ.

27
Image Credit : Asianet News

ಸೀರಿಯಲ್ ವಿಕ್ಷಕರು ಹಲವು ಸಮಯದಿಂದ ದತ್ತಾ ಭಾಯ್ ಎದುರು ಯಾವಾಗ ದೃಷ್ಟಿಯ ಬಣ್ಣ ಅನಾವರಣವಾಗುತ್ತೆ ಅನ್ನೋದನ್ನ ಕಾಯುತ್ತಿದ್ದರು. ಇದೀಗ ಕೊನೆಗೂ ಆ ಕ್ಷಣ ಬಂದೇ ಬಿಟ್ಟಿದೆ. ದೃಷ್ಟಿ ಹಾಗೂ ದತ್ತ ಭಾಯ್ ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಪ್ರೀತಿ ಉಂಟಾಗಿರುವ ಈ ಸಮಯದಲ್ಲಿಯೇ ಶರಾವತಿಯ ಕುತಂತ್ರದಿಂದ ದೃಷ್ಟಿಯ ಬಣ್ಣ ಬಯಲಾಗಿದೆ.

Related Articles

Related image1
Drustibottu : ದೃಷ್ಟಿ ಮೇಲೆ ಕಣ್ಣಿಟ್ಟಿರೋ ಕಿರಾತಕ ಪೊಲೀಸ್ ಆಫೀಸರ್ ಚಂದನವನ ಖ್ಯಾತ ನಟ, ನಿರ್ದೇಶಕರೂ ಹೌದು !
Related image2
Kannada TV Serials TRP Report: ಪ್ರಸಾರ ಆಗ್ತಿದ್ದಂತೆ ಹಳೇ ಧಾರಾವಾಹಿಗಳನ್ನು ಧೂಳಿಪಟ ಮಾಡಿದ ಹೊಸ ಸೀರಿಯಲ್!
37
Image Credit : Asianet News

ಇದರಿಂದ ದತ್ತನ ಮುಂದೆ ದೃಷ್ಟಿ ಮೋಸಗಾತಿಯಾಗಿದ್ದಾಳೆ . ಈ ಹಿಂದೆ ದೃಷ್ಟಿಯ ಅಕ್ಕನಿಂದ ದತ್ತ ಬಾಯಿ ಮೋಸ ಹೋಗಿದ್ದರು. ಹಾಗಾಗಿ ದತ್ತನಿಗೆ ಸುಂದರವಾಗಿರುವ ಹುಡುಗೀರು ಅಂದ್ರೆ ಆಗೋದೇ ಇಲ್ಲ. ಸುಂದರವಾಗಿರುವವರು ಮೋಸ ಮಾಡುತ್ತಾರೆ ಅಂತಾನೆ ನಂಬಿರೋ ದತ್ತ ಭಾಯ್ , ಅಂತಹ ಹುಡುಗಿಯರು ನಂಬಿಕೆಗೆ ಅರ್ಹರಲ್ಲ ಎಂದು ಗಟ್ಟಿಯಾಗಿ ನಂಬಿದ್ದರು.

47
Image Credit : Asianet News

ಇನ್ನೊಂದು ಕಡೆ ದೃಷ್ಟಿಗೆ ತನ್ನ ಅಂದವೇ ಮುಳುವಾಗಿತ್ತು. ಸ್ಲಂ ನಲ್ಲಿ ಬೆಳೆದ ದೃಷ್ಟಿಯ ಮೇಲೆ ಯಾವ ಕೆಟ್ಟ ಕಣ್ಣುಗಳು ಬೀಳದಿರಲಿ ಎಂದು ಸ್ವತಹ ತಾಯಿ ಮೈ ಪೂರ್ತಿ ಕಪ್ಪು ಬಣ್ಣವನ್ನು ಹಚ್ಚಿ ಅದೇ ಅವಳ ನಿಜವಾದ ಬಣ್ಣ ಎಂದು ಬಿಂಬಿಸಿದ್ದರು. ಅಲ್ಲಿಂದ ಇಲ್ಲಿವರೆಗೂ ಕೂಡ ದೃಷ್ಟಿ ಕಪ್ಪು ಬಣ್ಣವನ್ನು ಮುಖ ಮೈ ಮೇಲೆ ಹಚ್ಚಿಕೊಂಡು ತನ್ನ ಸೌಂದರ್ಯವನ್ನು ಮರೆಮಾಚಿದಳು.

57
Image Credit : Asianet News

ಕಥೆ ಸಾಗಿದಂತೆ ಒಂದು ಕಡೆ ದೃಷ್ಟಿಯ ಜೀವನವನ್ನು ದತ್ತ ಕಾಪಾಡಿದರೆ, ಮತ್ತೊಂದೆಡೆ ದತ್ತನ ಜೀವನವನ್ನು ದೃಷ್ಟಿ ಕಾಪಾಡಿದ್ದರು. ಕೊನೆಗೆ ಇವರಿಬ್ಬರನ್ನು ಆ ವಿಧಿ ಒಂದಾಗುವಂತೆ ಮಾಡಿ, ಸದ್ಯ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಹತ್ತಿರವಾಗಿದ್ದರು. ಇನ್ನೆಲ್ಲಾ ಸರಿಯಾಗಿ ದತ್ತ-ದೃಷ್ಟಿ ಒಂದಾಗುತ್ತಾರೆ ಎನ್ನುವಾಗ ಧಾರಾವಾಹಿಯಲ್ಲಿನ ಮಹಾ ತಿರುವು ಸಿಕ್ಕಿದೆ.

67
Image Credit : Asianet News

ತನ್ನ ತಮ್ಮನ ವಿರುದ್ಧವೇ ದ್ವೇಷ ಸಾರುತ್ತಿದ್ದ ಶರಾವತಿ ತನ್ನ ಷಡ್ಯಂತ್ರಗಳಿಗೆ ಅಡ್ಡಿಯಾಗುತ್ತಿದ್ದ ದೃಷ್ಟಿಯನ್ನು ದತ್ತ ನ ಬಾಳಿನಿಂದ ದೂರ ಮಾಡಲು, ಹಾಗೂ ಆತನ ಸುಂದರವಾದ ಸಂಸಾರವನ್ನು ಹಾಳು ಮಾಡಲು ನಿರ್ಧರಿಸಿ ದತ್ತಾ , ದೃಷ್ಟಿಯನ್ನು ಒಪ್ಪಿಕೊಳ್ಳುವ ಸಮಯದಲ್ಲಿಯೇ ಆಕೆಯ ನಿಜ ಬಣ್ಣವನ್ನು ಬಯಲಾಗಿಸಿ , ದತ್ತನ ಮುಂದೆ ದೃಷ್ಟಿಯನ್ನು ಮೋಸಗಾತಿಯನ್ನಾಗಿ ಮಾಡಿದ್ದರು. ಇದೀಗ ದೃಷ್ಟಿ ಮಾಡಿದ ಮೋಸ ದತ್ತನಿಗೆ ಅರಗಿಸಿಕೊಳ್ಳಲಾಗದ ಪೆಟ್ಟು ಬಿದ್ದಂತಾಗಿದೆ.

77
Image Credit : Asianet News

ಗಡ್ಡ ಮೀಸೆ ಬಿಟ್ಟಿದ್ದ ದತ್ತಾ ಭಾಯ್ ಇದೀಗ ಸೀರಿಯಲ್ ನಲ್ಲಿ ಗಡ್ಡ, ಮೀಸೆ ಬೋಳಿಸಿ, ಮತ್ತೆ ಕುಡಿತದ ಮೊರೆ ಹೋಗಿದ್ದಾರೆ. ದತ್ತ ಭಾಯ್ ಈ ಲುಕ್ ನೋಡಿದ್ರೆ ಈ ಹಿಂದೆ ಅಗ್ನಿ ಸಾಕ್ಷಿ (Agnisakshi) ಧಾರಾವಾಹಿಯಲ್ಲಿ ಸಿದ್ಧಾರ್ಥ್ ನೋಡಿದಂತೆ ಆಗುತ್ತಿದೆ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಹೌದು, ಸ್ವಲ್ಪ ಅದೇ ಚಾಕಲೇಟ್ ಬಾಯ್ ಲುಕ್ ನಲ್ಲಿ ಕಾಣಿಸುತ್ತಿರೋದಂತೂ ನಿಜಾ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸೀರಿಯಲ್ ಶೂಟಿಂಗ್
ಕನ್ನಡ ಧಾರಾವಾಹಿ
ಕಲರ್ಸ್ ಕನ್ನಡ

Latest Videos
Recommended Stories
Recommended image1
Now Playing
ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Recommended image2
ಅಲ್ಲಿ ಸಾಯಿಸೋಕೇ ರೆಡಿಯಾಗಿದ್ರೆ ಇಲ್ಲಿ ಕುಣೀತಿದ್ದಾಳಲ್ಲಪ್ಪಾ Na Ninna Bidalaare ದುರ್ಗಾ?
Recommended image3
Bigg Bossಗೆ ಬಂದ ಚೈತ್ರಾ ಕುಂದಾಪುರ, ರಜತ್​ ವಾಪಸ್​ ಹೋಗದ ಗುಟ್ಟು ರಟ್ಟಾಗೋಯ್ತು! ಕುಂಟೆಬಿಲ್ಲೆ ಆಟದಲ್ಲಿ ರಿವೀಲ್​!
Related Stories
Recommended image1
Drustibottu : ದೃಷ್ಟಿ ಮೇಲೆ ಕಣ್ಣಿಟ್ಟಿರೋ ಕಿರಾತಕ ಪೊಲೀಸ್ ಆಫೀಸರ್ ಚಂದನವನ ಖ್ಯಾತ ನಟ, ನಿರ್ದೇಶಕರೂ ಹೌದು !
Recommended image2
Kannada TV Serials TRP Report: ಪ್ರಸಾರ ಆಗ್ತಿದ್ದಂತೆ ಹಳೇ ಧಾರಾವಾಹಿಗಳನ್ನು ಧೂಳಿಪಟ ಮಾಡಿದ ಹೊಸ ಸೀರಿಯಲ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved