‘ನಾಳೆ ಬಾ’ ಅನ್ನೋ ಬೋರ್ಡ್ ರೀತಿ ದೋಖಾ! ಕೈನಾಯಕರಿಗೆ ಶಾಸಕನಿಂದ ಮಾತಿನ ಗೂಸಾ!

Jun 15, 2019, 5:42 PM IST

ಬೆಂಗಳೂರು (ಜೂ.15): ಕಾಯಿಲೆಗಿಂತ ಮದ್ದಿನದ್ದೇ ತಾಪತ್ರಯ ಹೆಚ್ಚು ಎಂಬ ಪರಿಪಾಡು ಸಮ್ಮಿಶ್ರ ಸರ್ಕಾರದ್ದಾಗಿದೆ. ಪಕ್ಷದಲ್ಲಿ ಎದ್ದಿರುವ ಭಿನ್ನಮತ ಶಮನ ಮಾಡಲು ಸಚಿವ ಸಂಪುಟವನ್ನು ವಿಸ್ತರಿಸುವ ಕಾರ್ಯಕ್ಕೆ ಕೈ ಹಾಕಿದ ಮೈತ್ರಿ ಪಕ್ಷಗಳಿಗೆ, ಇದೀಗ ಸಂಪುಟ ವಿಸ್ತರಣೆಯು ಮತ್ತೊಂದು ಭಿನ್ನಮತಕ್ಕೆ ನಾಂದಿ ಹಾಡಿದೆ. 

ಬಹಳಷ್ಟು ಕಸರತ್ತುಗಳ ಬಳಿಕ ಕಳೆದ ಶುಕ್ರವಾರ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಇಬ್ಬರು ಸಚಿವರನ್ನು ಸಂಪುಟಕ್ಕೆ ಸೇರಿಸಿದೆ. ಅದರೆ, ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ  ಮತ್ತೊಂದು ಬಂಡಾಯದ ಕೂಗು ಕೇಳಿ ಬಂದಿದೆ. 

ಈ ಬಾರಿಯೂ ಸಚಿವ ಸ್ಥಾನ ಕೈತಪ್ಪಿರುವ ಬೆನ್ನಲ್ಲಿ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಡಾ. ಸುಧಾಕರ್ ಅಸಮಾಧಾನ ಹೊರಹಾಕಿದ್ದರು. ಇದೀಗ, ಸಚಿವಾಕಾಂಕ್ಷಿಯಾಗಿದ್ದ ಕಾಂಗ್ರೆಸ್‌ನ ಇನ್ನೋರ್ವ ಶಾಸಕ ಕೂಡಾ ಆಕ್ರೋಶ ಹೊರಹಾಕಿದ್ದಾರೆ. ನಾಯಕರು ನನಗೆ ‘ನಾಳೆ ಬಾ’ ಎಂಬಂತೆ  ಮೋಸ ಮಾಡುತ್ತಿದ್ದಾರೆ. ಕಷ್ಟ ಕಾಲದಲ್ಲಿ ಕೈ ಹಿಡಿದಿದ್ದ ನನಗೆ  ಈ ಬಾರಿಯೂ ಅನ್ಯಾಯ ಮಾಡಿದ್ದಾರೆ ಎಂದು ಸುವರ್ಣ ನ್ಯೂಸ್ ಜೊತೆ ಅಳಲನ್ನು ತೋಡಿಕೊಂಡಿದ್ದಾರೆ.