ಮಚ್ಚು ರೀಲ್ಸ್ ಮಾಡಿದ್ದ ಜೋಡಿಯಲ್ಲಿ ವಿನಯ್ ಬಚಾವ್ ಆಗಿ ರಜತ್‌ ಮಾತ್ರ ಜೈಲು ಸೇರಿದ್ದೇಕೆ?

ಮಚ್ಚು ರೀಲ್ಸ್ ಮಾಡಿದ್ದ ಜೋಡಿಯಲ್ಲಿ ವಿನಯ್ ಬಚಾವ್ ಆಗಿ ರಜತ್‌ ಮಾತ್ರ ಜೈಲು ಸೇರಿದ್ದೇಕೆ?

Published : Apr 17, 2025, 02:56 PM ISTUpdated : Apr 17, 2025, 03:06 PM IST

ಪರಪ್ಪನ ಅಗ್ರಹಾರ ಸೇರಿದ್ದ ದಾಸನ ಶಿಷ್ಯಂದಿರು ಕೊನೆಗೆ ಬೇಲ್ ಪಡೆದು ಹೊರಬಂದಿದ್ರು. ಮತ್ತೆ ಮೊದಲಿನಂತೆ ಟೆಲಿವಿಷನ್ ಶೋನಲ್ಲಿ ಭಾಗಿಯಾಗೋದಕ್ಕೆ ಶುರುಮಾಡಿದ್ರು. ಆದ್ರೆ ಕೋರ್ಟ್ ಜಾಮೀನು ಕೊಟ್ಟಿದೆ ಅಂದ್ರೆ ಅದರ ಜೊತೆಗೆ ಒಂದಿಷ್ಟು ಷರತ್ತುಗಳನ್ನ ವಿಧಿಸಿರುತ್ತೆ. ಅದರ ಅರಿವೇ ಇಲ್ಲದೇ ..

ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಸೇರಿದ್ದ ದಾಸನ ಶಿಷ್ಯ ರಜತ್ ಬೇಲ್ ಮೇಲೆ ಹೊರ ಬಂದಿದ್ದ. ಜೈಲು ಸೇರಿ ಬಂದರೂ ಬುದ್ದಿ ಕಲಿಯದ ಬುಜ್ಜಿನ ಮತ್ತೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜಾಮೀನು ಷರತ್ತು ಉಲ್ಲಂಘಿಸಿದ ರಜತ್​​ನ ಅರೆಸ್ಟ್ ಮಾಡಿ ಕೋರ್ಟ್​ಗೆ ಹಾಜರು ಪಡಿಸಿದ್ರು. ಕೋರ್ಟ್ ಈ ಮಚ್ಚೇಶ್ವರನ ಬೇಲ್ ರದ್ದು ಮಾಡಿ ಜೈಲಿಗಟ್ಟಿದೆ.

ಯೆಸ್ ಬಿಗ್ ಬಾಸ್ ಮನೆಯ ಬ್ಯಾಡ್ ಬಾಯ್ ರಜತ್ ಮತ್ತೆ ಜೈಲು ಪಾಲಾಗಿದ್ದಾನೆ. ಈ ಹಿಂದೆ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಆರೋಪದ ಮೇಲೆ ಬೆಂಗಳೂರಿನ ಬಸವೇಶ್ವರ ನಗರ ಠಾಣೆ ಪೊಲೀಸರು ರಜತ್ ಮತ್ತು ವಿನಯ್ ಗೌಡರನ್ನ ಬಂಧಿಸಿ ಜೈಲಿಗಟ್ಟಿದ್ರು.

ಪರಪ್ಪನ ಅಗ್ರಹಾರ ಸೇರಿದ್ದ ದಾಸನ ಶಿಷ್ಯಂದಿರು ಕೊನೆಗೆ ಬೇಲ್ ಪಡೆದು ಹೊರಬಂದಿದ್ರು. ಮತ್ತೆ ಮೊದಲಿನಂತೆ ಟೆಲಿವಿಷನ್ ಶೋನಲ್ಲಿ ಭಾಗಿಯಾಗೋದಕ್ಕೆ ಶುರುಮಾಡಿದ್ರು. ಆದ್ರೆ ಕೋರ್ಟ್ ಜಾಮೀನು ಕೊಟ್ಟಿದೆ ಅಂದ್ರೆ ಅದರ ಜೊತೆಗೆ ಒಂದಿಷ್ಟು ಷರತ್ತುಗಳನ್ನ ವಿಧಿಸಿರುತ್ತೆ. ಅದರ ಅರಿವೇ ಇಲ್ಲದೇ ತಮ್ಮ ಕೇಸ್ ಖುಲಾಸೆಯೇ ಆಗೋಯ್ತು ಅಂತ ಮೆರೀತಾ ಇದ್ದವರಿಗೆ ಕೋರ್ಟ್ ಶಾಕ್ ಕೊಟ್ಟಿದೆ.

ಊರ್ಮಿಳಾ ಹೆಸರನ್ನು ಮಗಳಿಗೆ ಇಟ್ಟಿದ್ದೇಕೆ ಶ್ರೀದೇವಿ..? ಆದ್ರೆ 'ತಾಯಿಗೆ ತಕ್ಕ ಮಗಳಲ್ಲ' ಅನ್ನೋದ್ಯಾಕೆ?

ಬೇಲ್ ಕೊಡೋವಾಗ ಪ್ರತಿಬಾರಿ ವಿಚಾರಣೆಗೆ ಹಾಜರಾಗಬೇಕು ಅಂತ ಕೋರ್ಟ್ ಷರತ್ತು ವಿಧಿಸಿತ್ತು. ಆದ್ರೆ ರಜತ್ ಮೊದಲ ಹಿಯರಿಂಗ್​​ಗೇನೇ ಗೈರು ಹಾಜರಾಗಿದ್ದ. ನನಗೆ ಶೂಟಿಂಗ್ ಇದೆ ಕೋರ್ಟ್​ಗೆ ಬರೋದಕ್ಕೆ ಆಗ್ತಾ ಇಲ್ಲ ನೆಪ ಹೇಳಿದ್ದ.. ಇದನ್ನ ಕೇಳಿ ಗರಂ ಆಗಿದ್ದ ನ್ಯಾಯಾದೀಶರು ಈತನ ಬೇಲ್ ರದ್ದು ಮಾಡಿ, ಬಂಧನಕ್ಕೆ ವಾರೆಂಟ್ ಹೊರಡಿಸಿದ್ರು.

ಇವತ್ತು ಬಸವೇಶ್ವರ ನಗರ ಪೊಲೀಸರು ರಜತ್​ನ ಅರೆಸ್ಟ್ ಮಾಡಿ ಕೋರ್ಟ್ ಕಟಕಟೆಯಲ್ಲಿ ನಿಲ್ಲಿಸಿತು. ರಜತ್​ಗೆ ಛೀಮಾರಿ ಹಾಕಿದ ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ. ಅಲ್ಲಿಗೆ ಮಚ್ಚೇಶ್ವರ ಮತ್ತೆ ಕಂಬಿ ಹಿಂದೆ ಶಿಪ್ಟ್ ಆಗಿದ್ದಾನೆ.

ಇನ್ನೂ ರಜತ್​ನ ರೀಲ್ಸ್ ಪಾರ್ಟನರ್ ವಿನಯ್ ಗೌಡ ಕೂಡ ಅರೆಸ್ಟ್ ಆಗಬೇಕಿತ್ತು. ಆದ್ರೆ ಕೋರ್ಟ್​ಗೆ ಹಾಜರಾಗಿ ವಕೀಲರ ಮೂಲಕ ವಾರೆಂಟ್ ರಿಕಾಲ್​ಗೆ ಮನವಿ ಸಲ್ಲಿಸಿ ವಿನಯ್ ಬಚಾವ್ ಆಗಿದ್ದಾರೆ. ಇಲ್ಲದೇ ಹೋದ್ರೆ ಈ ರೀಲ್ಸ್ ಜೋಡಿ ಮತ್ತೊಮ್ಮೆ ಜೊತೆಯಾಗಿ ಜೈಲಿನಲ್ಲಿ ಮುದ್ದೆ ಮುರಿಬೇಕಾಗ್ತಾ ಇತ್ತು.

ವಿನಯ್ ಬೇಲ್ ಪಡೆದು ಹೊರಬಂದ ಮೇಲೆ ತಮ್ಮ ಪಾಡಿಗೆ ಶೂಟಿಂಗ್​ನಲ್ಲಿ ಭಾಗಿಯಗ್ತಾ ತೆಪ್ಪಗೆ ಇದ್ದಾರೆ. ಆದ್ರೆ ರಜತ್ ಮಾತ್ರ ತಾನು ದೊಡ್ಡ ಸಾಧನೆ ಮಾಡಿ ಜೈಲಿಗೆ ಹೋಗಿ ಬಂದವರಂತೆ ಎಲ್ಲೆಡೆ ಸಂದರ್ಶನಗಳನ್ನ ಕೊಟ್ಟಿದ್ದ. ಅಷ್ಟೇ ಅಲ್ಲದೇ ಕೇಸ್​ನ ಸೂಕ್ಷ್ಮಗಳನ್ನ ಕ್ಯಾಮೆರಾ ಎದುರು ಮಾತನಾಡಿದ್ದ. ರೇಣುಕಾಸ್ವಾಮಿ ಎಸೆದ  ಮೋರಿಗೆ ಮಚ್ಚು ಎಸೆದಿದ್ದೀನಿ ಅಂತೆಲ್ಲಾ ಮಾತನಾಡಿದ್ದ. ಇದೆಲ್ಲವೂ ಮಚ್ಚೇಶ್ವರಿನಿಗೆ ಸಮಸ್ಯೆ ತಂದೊಡ್ಡಲಿವೆ.

ಡಾ ರಾಜ್‌ಕುಮಾರ್ ಜ್ಞಾಪಕ ಶಕ್ತಿ ನೋಡಿದರೆ ನೀವು ಶಾಕ್ ಆಗ್ತೀರಾ..! ಅಣ್ಣಾವ್ರಿಗೆ ಅದು ವರವೇ?

ಸದ್ಯಕ್ಕಂತೂ ಜಾಮೀನು ಷರತ್ತು ಉಲ್ಲಂಘಿಸಿದ ರಜತ್​ನ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇನ್ನಾದ್ರೂ ರಜತ್​ಗೆ ಬುದ್ದಿ ಬರುತ್ತಾ ಅನ್ನೋದನ್ನ ಕಾದುನೋಡಬೇಕಿದೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
02:52ಈಗ ಮತ್ತೊಂದು ಸರ್ಪ್ರೈಸ್‌ ಕೊಟ್ಟ ಶಿವರಾಜ್‌ಕುಮಾರ್‌, ಉಪೇಂದ್ರ, ಅರ್ಜುನ್‌ ಜನ್ಯ 45 Movie!
05:25ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!
04:41ನಿನಗಿದು ಬೇಕಿತ್ತಾ ಗಿಲ್ಲಿ..? ಆಟದಲ್ಲಿ ಗಿಲ್ಲಿ ನಟನ ಕಳ್ಳಾಟ..! ಗಿಲ್ಲಿಗೆ ವಿಲನ್​ ಆಗುತ್ತಿದೆಯಾ ಅವರ ಕಾಮಿಡಿ?
05:53BBK12: ಬಿಗ್ ಬಾಸ್ ಕನ್ನಡ ಅಂತಿಮ ವಾರ: ಕೊನೆ ವಾರ್? ಯಾರು ವಿನ್ನರ್? ಟಾಪ್ 2 ಸ್ಪರ್ಧಿಗಳು ಇವರೇನಾ?
05:17ತೃಪ್ತಿ ದಿಮ್ರಿ ಜೊತೆಗೆ ಡಾರ್ಲಿಂಗ್ ಪ್ರಭಾಸ್‌ ರಗಡ್ ಪೋಸ್, ಕಿಕ್ಕೇರಿಸಿದ ‘ಸ್ಪಿರಿಟ್’ ಮಾದಕ ಪೋಸ್ಟರ್!
24:19ನಟಿ ನಂದಿನಿಗೆ ಕಲೆ ಜನ್ಮಗತ ರಕ್ತದಲ್ಲೇ ಬಂದಿತ್ತು; ಸರ್ಕಾರಿ ಕೆಲಸ ಇಷ್ಟವಿಲ್ಲದೆ ನಟನೆಗಾಗಿಯೇ ಜೀವಬಿಟ್ಟಳು!
04:36ಕಾವ್ಯಾ ಶೈವ ಪರ ಗಿಲ್ಲಿ ಫೆವರಿಸಂ; ಇಷ್ಟು ದಿನ ಚೆನ್ನಾಗಿ ಆಡಿ, ಈಗ ಪಕ್ಷಪಾತ ಮಾಡಿದ್ರಾ Bigg Boss ಗಿಲ್ಲಿ ನಟ?
05:09ಗಿಲ್ಲಿಗಿಂತ ನನಗೆ ಹೆಚ್ಚು ಫ್ಯಾನ್ಸ್ ಇದ್ದಾರೆ; ಅವನು Bigg Boss ಶೋನಲ್ಲಿ ವ್ಯಕ್ತಿತ್ವವೇ ತೋರಿಸಿಲ್ಲ: ಮಾಳು ನಿಪನಾಳ
24:18ಬಿಗ್ ಬಾಸ್​ನಲ್ಲಿ ಮಂಡ್ಯದ ಗಂಡು ಗಿಲ್ಲಿಗೆ ಕಿಚ್ಚನ ಮೆಚ್ಚುಗೆ: ಬಿಗ್​ ಸ್ಕ್ರೀನ್​ನಲ್ಲಿ ಗಿಲ್ಲಿ ನಟನಿಗೆ ದಾಸನ ಅಪ್ಪುಗೆ!
Read more