'ಆತ ಯೋಗಿನೋ? ರೋಗಿನೋ? ಅಧಿಕಾರದಲ್ಲಿರಲು ನಾಲಾಯಕ್ಕು'

Oct 2, 2020, 5:29 PM IST

ಬೆಂಗಳೂರು (ಅ. 02): ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ರೇಪ್ ಅಂಡ್ ಮರ್ಡರ್‌ ಕೇಸ್‌ಗೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ, ಯೋಗಿ ಆದಿತ್ಯನಾಥ್ ಅವರು ಯೋಗಿನೋ? ರೋಗಿನೋ? ಎಂದು ಲೇವಡಿ ಮಾಡಿದ್ದಾರೆ. 

'ಹೆಣ್ಣನ್ನು ಕಾಪಾಡಲಾಗದವರು ರಾಜಿನಾಮೆ ಕೊಟ್ಟು ಮನೆಗೆ ಹೋಗಿ'

ಯೋಗಿ ಆದಿತ್ಯನಾಥ್ ಅಧಿಕಾರದಲ್ಲಿರಲು ನಾಲಾಯಕ್ ಇದ್ದಾರೆ. ಮೊದಲೇ ಜಂಗಲ್ ರಾಜ್ಯ ಎನಿಸಿಕೊಳ್ಳುತ್ತಿದ್ದ ಯುಪಿ ಈಗ ಪ್ರೂವ್ ಮಾಡಿದೆ.  'ಅಲ್ರೀ, ನ್ಯಾಯ ಕೇಳಲು ರಾಹುಲ್ ಗಾಂಧಿ ಬಂದ್ರೆ ಅವರನ್ನು ತಳ್ಳಾಡ್ತೀರಿ. ಇದನ್ನು ಪ್ರಜಾಪ್ರಭುತ್ವ ಅಂತ ಕರೆಯಬೇಕಾ? ಈ ದೇಶ ಬಿಜೆಪಿಯವರ ಆಸ್ತಿಯಲ್ಲ' ಎಂದು ಲೇವಡಿ ಮಾಡಿದ್ಧಾರೆ.