'RSS ಕೂದಲು ಅಲ್ಲಾಡಿಸೋಕೂ ಸಿದ್ದರಾಮಯ್ಯಗೆ ಆಗಲ್ಲ, ಅವರೊಬ್ಬ ಪೊಲಿಟಿಕಲ್ ಸೀರಿಯಲ್ ಕಿಲ್ಲರ್'

Oct 11, 2021, 4:59 PM IST

ಬೆಂಗಳೂರು (ಅ. 11): ಆರ್‌ಎಸ್‌ಎಸ್ ಹಾಗೂ ತಾಲಿಬಾನ್ ಒಂದೇ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. 

'ಸಿದ್ದರಾಮಯ್ಯ ದೊಡ್ಡ ನಾಯಕ ಅಲ್ಲ. ಅಲೆಮಾರಿ. ಪೊಲಿಟಿಕಲ್ ಸೀರಿಯಲ್ ಕಿಲ್ಲರ್. ಕಾಂಗ್ರೆಸ್‌ನ್ನು ಮುಗಿಸಲು ಬಂದ ವ್ಯಕ್ತಿ. ಆರ್‌ಎಸ್‌ಎಸ್ ಕೂದಲು ಅಲ್ಲಾಡಿಸೋಕೂ ಅವರಿಗೆ ಆಗಲ್ಲ ಎಂದು ಬಿಜೆಪಿ ನಾಯಕ ಚಲವಾದಿ ನಾರಾಯಣಸ್ವಾಮಿ ಹೇಳಿದ್ಧಾರೆ. 

ಮಂಗಳೂರು ನೈತಿಕ ಪೊಲೀಸ್‌ಗಿರಿಗೆ ಬಿಜೆಪಿ ಶಾಸಕನ ಬೆಂಬಲ..!

ಸಿದ್ದರಾಮಯ್ಯ ಅವಕಾಶವಾದಿ. ಕೋಮುವಾದಿ. ಅಧಿಕಾರ ಸಿಗಲಿಲ್ಲವೆಂದು ದಳವನ್ನು ಧಿಕ್ಕರಿಸಿ ಕಾಂಗ್ರೆಸ್‌ಗೆ ಬಂದವರು. ಪರಮೇಶ್ವರ್ ಅವರು ಮುಂದೆ ಬರುತ್ತಾರೆಂದು ವ್ಯವಸ್ಥಿತವಾಗಿ ನೇಪಥ್ಯಕ್ಕೆ ಸರಿಸಿದರು ಎಂದು ಗಣೇಶ್ ಕಾರ್ಣಿಕ್ ವಾಗ್ದಾಳಿ ನಡೆಸಿದರು.