ನಿಮ್ಮನ್ನು ಆಯ್ಕೆ ಮಾಡಿದ್ದು ಯಾರು? ಚಾಣಾಕ್ಷ ಉತ್ತರ ಕೊಟ್ಟ ಬಿಜೆಪಿ ಅಭ್ಯರ್ಥಿ ಕಡಾಡಿ

Jun 9, 2020, 3:37 PM IST

ಬೆಂಗಳೂರು(ಜೂ.09): ರಾಜ್ಯಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ರಾಜ್ಯ ಘಟಕದ ಶಿಫಾರಸು ಬದಿಗೊತ್ತಿ, ಪಕ್ಷದ ತಳಮಟ್ಟದ ಕಾರ್ಯಕರ್ತರಿಗೆ ಮಣೆಹಾಕಿದೆ. ಬಿಜೆಪಿ ಹೈಕಮಾಂಡ್ ತಳಮಟ್ಟದ ಕಾರ್ಯಕರ್ತರಾದ ಬೆಳಗಾವಿಯ ಈರಣ್ಣ ಕಡಾಡಿ ಹಾಗೂ ರಾಯಚೂರಿನ ಅಶೋಕ್ ಗಸ್ತಿ ಅವರಿಗೆ ಟಿಕೆಟ್ ನೀಡಿದೆ.

ಬಿಜೆಪಿ ಅಭ್ಯರ್ಥಿಗಳಾದ ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ಮೊದಲ ಬಾರಿಗೆ ಸುವರ್ಣ ನ್ಯೂಸ್ ಮುಂದೆ ಟಿಕೆಟ್ ಸಿಕ್ಕಿರುವ ಬಗ್ಗೆ ಮಾತನಾಡಿದ್ದಾರೆ. ಟಿಕೆಟ್ ಸಿಕ್ಕಿರುವ ವಿಚಾರ ಸುವರ್ಣ ನ್ಯೂಸ್ ಮೂಲಕವೇ ಗೊತ್ತಾಯಿತು ಎಂದು ಈರಣ್ಣ ಕಡಾಡಿ ಹೇಳಿದ್ದಾರೆ.

ರಾಜ್ಯಸಭೆ ಟಿಕೆಟ್: ಬಿಜೆಪಿಯಲ್ಲಿ ಯಾವುದೇ ಅಸಮಾಧಾನವಿಲ್ಲ; ಜಗದೀಶ್ ಶೆಟ್ಟರ್

ಉಮೇಶ್ ಕತ್ತಿ ನಮಗೆಲ್ಲರಿಗೂ ಹಿರಿಯರು, ಅವರ ಮಾರ್ಗದರ್ಶನದಲ್ಲಿ ನಾವು ಕೆಲಸ ಮಾಡುತ್ತೇವೆ. ನಿಮ್ಮನ್ನು ಆಯ್ಕೆ ಮಾಡಿದ್ದು ಬಿ.ಎಲ್ ಸಂತೋಷ್ ಅಥವಾ ಬೇರೆಯವರ ಪ್ರಶ್ನೆಗೆ ಈರಣ್ಣ ಕಡಾಡಿ ಚಾಣಾಕ್ಷ ಉತ್ತರವನ್ನೇ ನೀಡಿದ್ದಾರೆ. ಅಷ್ಟಕ್ಕೂ ಮಾಧ್ಯಮದ ಮುಂದೆ ಬಿಜೆಪಿ ಅಭ್ಯರ್ಥಿಗಳು ಏನಂದ್ರು ಅನ್ನೋದನ್ನು ನೀವೇ ಕೇಳಿ