Bitcoin: ನಿಜಕ್ಕೂ ನಿಮಗೆ ತಾಕತ್ತಿದ್ರೆ ಪ್ರತಾಪ್ ಸಿಂಹರ ಚಡ್ಡಿ ಬಿಚ್ಚಿ ಹೊಡೆಯಿರಿ, ಸ್ವಾಮೀಜಿಗೆ ಸವಾಲ್!

Nov 22, 2021, 10:14 AM IST

ಬೆಂಗಳೂರು (ನ. 22): ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಕುರಿತು ಸಂಸದ ಪ್ರತಾಪ್‌ ಸಿಂಹ (Pratap Simha) ಮಾಡಿರುವ ವೈಯಕ್ತಿಕ ಟೀಕೆಗಳನ್ನು ಕಟು ಶಬ್ದಗಳಲ್ಲಿ ಖಂಡಿಸಿರುವ ಕಲಬುರಗಿ ಸುಲಫಲ ಮಠ ಹಾಗೂ ಶ್ರೀಶೈಲಂನ ಸಾರಂಗ ಮಠದ ಜಗದ್ಗುರು ಮಹಾಂತ ಸ್ವಾಮೀಜಿ, ಪಶ್ಚಾತ್ತಾಪ ಪಟ್ಟು ಪ್ರತಾಪ ಸಿಂಹ 15 ದಿನಗಳೊಳಗಾಗಿ ಕ್ಷಮೆ ಕೇಳದಿದ್ದರೆ ಮೈಸೂರಿಗೆ ಹೋಗಿ ಅವರ ಮನೆ ಮುಂದೆಯೇ ಹೊಡೆಯುತ್ತೇವೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

Bitcoin Scam: ಪ್ರತಾಪ್ ಸಿಂಹ VS ಪ್ರಿಯಾಂಕ್.. ಅಕಟಕಟಾ.. ಸ್ವಾಮೀಜಿಗಳ ಬಾಯಲ್ಲಿ ಸೆನ್ಸಾರ್ ಮಾತುಗಳು!

ಸುಲಫಲ ಶ್ರೀಗಳ ಮಾತಿಗೆ ಆಂದೋಲಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನಿಮಗೆ ತಾಕತ್ತಿದ್ರೆ ಪ್ರತಾಪ್ ಸಿಂಹರ ಚಡ್ಡಿ ಬಿಚ್ಚಿ ಹೊಡೆಯಿರಿ. ನೀವು ರಾಜಕಾರಣಿಗಳ ಓಲೈಕೆಗೆ ಮುಂದಾಗಿ ಬಕೆಟ್ ಸ್ವಾಮಿ ಎಂಬ ಖ್ಯಾತಿ ಪಡೆದಿದ್ದೀರಿ. ಇದೇ ಪ್ರಿಯಾಂಕ್ ಖರ್ಗೆ ಈ ಹಿಂದೆ ಮೋದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಆಗ ನೀವು ಎಲ್ಲೋಗಿದ್ರಿ.? ಎಂದು ಪ್ರಶ್ನಿಸಿದ್ದಾರೆ.