ಕುರುಬರ ಮತ್ತೊಂದು ಸುತ್ತಿನ ಹೋರಾಟ: ಸಿದ್ದರಾಮಯ್ಯ ಭಾಗಿಯಾಗ್ತಾರಾ?

Feb 18, 2021, 5:54 PM IST

ಬೆಂಗಳೂರು, (ಫೆ.18): ಎಸ್‌ಟಿ ಮೀಸಲಾತಿಗಾಗಿ ಈಗಾಗಲೇ ಕುರುಬ ಸಮುದಾಯ ಫೆ.7ರಂದು ಬೆಂಗಳೂರಿನಲ್ಲಿ ತಮ್ಮ ಶಕ್ತಿ ಪ್ರದರ್ಶನ ತೋರಿಸಿದೆ. ಇದೀಗ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಿದ್ಧವಾಗಿದೆ.

ಹೌದು...ನಾಳೆ ಅಂದ್ರೆ (ಫೆ..19) ಬೆಂಗಳೂರಿನಲ್ಲಿ ಕುರುಬರ ಮತ್ತೊಂದು ಸುತ್ತಿನ ಹೋರಾಟ ತೀರ್ಮಾನಿಸಲಾಗಿದೆ. ಆದ್ರೆ, ಈ ಬಾರಿ ರಾಜ್ಯ ಕುರುಬರ ಸಂಘದಿಂದಲೇ ಹೋರಾಟಕ್ಕೆ ಕರೆ ನೀಡಿದ್ದು, ಕುರುಬರಿಗೆ ಎಸ್ ಟಿ ಮೀಸಲಾತಿ ಕೊಡಲು ತಕ್ಷಣವೇ ಕುಲಶಾಸ್ತ್ರೀಯ ಅಧ್ಯಯನ ಮಾಡಿಸಬೇಕೆಂದು ಆಗ್ರಹಿಸಲಿದೆ.