ಕೊರೋನಾ ತಡೆಗೆ ಸಿಎಂ ಮಹತ್ವದ ಕ್ರಮ..!

Jul 8, 2020, 5:15 PM IST

ಬೆಂಗಳೂರು(ಜು.08): ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ವೈರಸ್ ಹೆಮ್ಮಾರಿಯ ತಡೆಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡಿದಿದ್ದು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

ಅಸಿಂಪ್ಟಮ್ಯಾಟಿಕ್ ರೋಗಿಗಳ ಆರೋಗ್ಯಕ್ಕೆ ಆದ್ಯತೆ ನೀಡಲು ಸಿಎಂ ಮುಂದಾಗಿದ್ದಾರೆ. ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಒಂದು ಸಾವಿರ ಟೆಂಪೋ ಟ್ರಾವೆಲ್ಸ್ ವ್ಯವಸ್ಥೆ ಮಾಡಲಾಗುತ್ತಿದೆ. 

ಆನ್‌ಲೈನ್‌ ತರಗತಿಗೆ ಮಕ್ಕಳಿಂದಲೂ ವಿರೋಧ..!

ರೋಗ ಲಕ್ಷಣಗಳಿಲ್ಲದ ರೋಗಿಗಳನ್ನು ಕರೆದೊಯ್ಯಲು ಬಾಡಿಗೆಗೆ TT ವಾಹನಗಳನ್ನು ಪಡೆಯಲು ತೀರ್ಮಾನಿಸಲಾಗಿದೆ. ಸದ್ಯಕ್ಕೆ 200 ವಾಹನಗಳನ್ನು ತುರ್ತಾಗಿ ಬಳಕೆಗೆ ಪಡೆಯಲು ಚರ್ಚೆ ನಡೆದಿದ್ದು, 10 ಸಾವಿರ ಮೆಡಿಕಲ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ಬಗ್ಗೆಯೂ ಚರ್ಚೆ ನಡೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.