ಕೊರೊನಾ ಲಸಿಕೆ ಬಗ್ಗೆ ಜನರಿಗೆ ಭಯಬೇಡ, ಅತ್ಯಂತ ಸುರಕ್ಷಿತ ಲಸಿಕೆಯಾಗಿದೆ: ಸುಧಾಕರ್

Jan 12, 2021, 12:36 PM IST

ಬೆಂಗಳೂರು (ಜ. 12): ಇಂದು ವಿವೇ​ಕಾ​ನಂದರ ಜನ್ಮ ದಿನಾಚರಣೆ ಪ್ರಯುಕ್ತ ಸಮಸ್ತ ಯುವ ಜನತಗೆ ಆರೋಗ್ಯ ಸಚಿವ ಡಾ. ಸುಧಾಕರ್ ಶುಭಾಶಯ ಕೋರಿದ್ದಾರೆ. 

ಇದೇ ವೇಳೆ ಕೊರೊನಾ ಲಸಿಕೆ ಹಂಚಿಕೆ ಬಗ್ಗೆ ಮಾತನಾಡಿದ್ದಾರೆ. 'ಈ ಲಸಿಕೆ ಅತ್ಯಂತ ಸುರಕ್ಷಿತವಾದ ಲಸಿಕೆಯಾಗಿರಲಿದೆ. ಜನಸಾಮಾನ್ಯರು ಭಯಪಡುವ ಅಗತ್ಯ ಇಲ್ಲ. ಯಾರಿಗಾದರೂ ಅಡ್ಡ ಪರಿಣಾಮಗಳಾದರೆ ಅದನ್ನು ದಾಖಲಿಸುವ ವ್ಯವಸ್ಥೆ ಮಾಡಿದ್ದೇವೆ' ಎಂದು ಸುಧಾಕರ್ ಹೇಳಿದ್ದಾರೆ.