Jan 18, 2022, 3:34 PM IST
ಬೆಂಗಳೂರು (ಜ. 18): ರಾಜ್ಯಾದ್ಯಂತ ಕೊರೊನಾ ಸೋಂಕು (Covid 19) ಏರಿಕೆಯಾಗುತ್ತಿದೆ. ಇನ್ನೂ ಒಂದು ವಾರವೇ ನಮಗೆ ನಿರ್ಣಾಯಕ ದಿನ, ಸರ್ಕಾರದ ನಿರ್ಧಾರವೇ ಅಂತಿಮ' ಎಂದು ಆರೋಗ್ಯ ಇಲಾಖೆ (Health Department) ಆಯುಕ್ತ ರಂದೀಪ್ ಹೇಳಿದ್ದಾರೆ.
Weekend Curfew:'ಮುಂದುವರೆದರೆ ಬಾರ್ & ವೈನ್ ಶಾಪ್ ಮಾಲೀಕರು ವೆಂಟಿಲೇಟರ್ಗೆ ಹೋಗ್ತಾರೆ'
ಕೊರೋನಾ ನಿರ್ಬಂಧಗಳ ಕುರಿತು ತೀರ್ಮಾನ ತೆಗೆದುಕೊಳ್ಳಲುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Bommai) ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ‘ಕಾದು ನೋಡುವ ತಂತ್ರ’ ಅನುಸರಿಸಲು ಸರ್ಕಾರ ನಿರ್ಧರಿಸಿದೆ. ಶುಕ್ರವಾರ (ಜ. 21) ದಂದು ಮತ್ತೊಂದು ಸಭೆ ನಡೆಸಿ ವಾರಾಂತ್ಯ ಕರ್ಫ್ಯೂ ಕೈಬಿಡಬೇಕೆ ಅಥವಾ ಮುಂದುವರೆಸಬೇಕೆ ಎಂಬುದನ್ನು ತೀರ್ಮಾನಿಸಲು ನಿರ್ಧರಿಸಲಾಗಿದೆ. ಅಲ್ಲಿಯವರೆಗೆ ಈಗಿನ ನಿರ್ಬಂಧಗಳೇ ಮುಂದುವರೆಯಲಿವೆ.