ಜಿಲ್ಲಾಡಳಿತದ ಮಹಾ ಎಡವಟ್ಟು: ತಿಥಿ ಕಾರ್ಯ ಮುಗಿದ ಮೇಲೆ ಮನೆಗೆ ಬಂತು ಶವ..!

Aug 1, 2020, 1:20 PM IST

ಬೆಂಗಳೂರು (ಆ. 01): ರಾಜ್ಯದಲ್ಲಿ ಕೊರೊನಾ ಯಡವಟ್ಟಿಗೆ ಬ್ರೇಕ್ ಬೀಳುತ್ತಿಲ್ಲ. ಗದಗ ಜಿಲ್ಲಾಡಳಿತದಿಂದ ಮಹಾ ಯಡವಟ್ಟೊಂದು ನಡೆದಿದೆ. ಅನಾರೋಗ್ಯದಿಂದ ಜುಲೈ 15 ಕ್ಕೆ ಜಿಮ್ಸ್ ಆಸ್ಪತ್ರೆಗೆ ದಾಖಲಾಗುತ್ತಾರೆ. ಜುಲೈ 18 ಕ್ಕೆ ಕೊರೊನಾ ಪಾಸಿಟಿವ್ ಎಂದು ವರದಿ ಬರುತ್ತದೆ. ಜುಲೈ 20 ರಂದು ಮಹಿಳೆ ಸಾವಿಗೀಡಾಗಿದ್ದಾರೆ ಎಂದು ವರದಿ ಬರುತ್ತದೆ. ಮೃತದೇಹ ಸಿಗದೇ ಇದ್ದಿದ್ದರಿಂದ ಪುತ್ರ ತಿಥಿ ಕಾರ್ಯ ಮಾಡಿದ್ದಾರೆ. ತಿಥಿ ಕಾರ್ಯ ಮುಗಿದ ಮೇಲೆ ಆರೋಗ್ಯ ಸಿಬ್ಬಂದಿ ಶವ ತಂದಿದ್ದಾರೆ. ಆಡಳಿತ ಅಧಿಕಾರಿಗಳ ವಿರುದ್ಧ ಪುತ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕೊರೊನಾದಿಂದ ಸಾವು ಹೆಚ್ಚಳಕ್ಕೆ ಸರ್ಕಾರದ ನಿರ್ಲಕ್ಷ್ಯ ಕಾರಣ..?