ಕಷ್ಟಕಾಲದಲ್ಲಿ ಕೈಹಿಡಿದವರ ಋಣಸಂದಾಯಕ್ಕೆ ಮುಂದಾದ ಡಿಕೆಶಿ!

Oct 31, 2019, 7:00 PM IST

ಬೆಂಗಳೂರು (ಅ.31): ತನ್ನ ಕಷ್ಟಕಾಲದಲ್ಲಿ ಕೈಹಿಡಿದವರ ಋಣಸಂದಾಯಕ್ಕೆ ಮುಂದಾಗಿದ್ದಾರೆ ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್. ನಾಳೆ ಶುಕ್ರವಾರ, ಕನ್ನಡ ರಾಜ್ಯೋತ್ಸವದಂದು ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ, ಧ್ವಜಾರೋಹಣ ಮಾಡಲಿದ್ದಾರೆ ಡಿಕೆಶಿ.

ಅಕ್ರಮ ಹಣ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಡಿಕೆಶಿಯನ್ನು  ಬಂಧಿಸಿದಾಗ, ಕರವೇ  ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಿದ್ದರು.