ಕೊರೊನಾ ನೆಪದಲ್ಲಿ ದುಡ್ಡು ಹೊಡ್ಯೋದು ಬಿಟ್ಟು ಬೇರೆ ಯಾವ ತಯಾರಿಯೂ ನಡೆಸಿಲ್ಲ: ಉಗ್ರಪ್ಪ

Apr 20, 2021, 12:35 PM IST

ಬೆಂಗಳೂರು (ಏ. 20): ಕೊರೊನಾ ಹೆಚ್ಚಳಕ್ಕೆ ಜನರೇ ಕಾರಣ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ಕಾಂಗ್ರೆಸ್ ಮುಖಂಡ ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಸ್ಕ್ ಇಲ್ಲ, ಅಂತರವಿಲ್ಲ, ಜನರ ನಿರ್ಲಕ್ಷ್ಯವೇ ಕೊರೊನಾ ಹೆಚ್ಚಳಕ್ಕೆ ಕಾರಣ: ಸುಧಾಕರ್

'ಇದು ಮೂರ್ಖತನ ಪರಮಾವಧಿ ಹೇಳಿಕೆ. ಜನರನ್ನು ತಪ್ಪಿತಸ್ಥರು ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. 2 ನೇ ಅಲೆ ಬಗ್ಗೆ ಎಚ್ಚರ ವಹಿಸಿ ಎಂದು ತಜ್ಞರು ಎಚ್ಚರಿಸಿದರೂ, ಇವರು ಏನು ಮಾಡಿದಾರೆ..? ಯಾವ ತಯಾರಿ ನಡೆಸಿದ್ದಾರೆ..? ಇದ್ಯಾವುದನ್ನೂ ಮಾಡದೇ ಜನರನ್ಯಾಕೆ ತಪ್ಪಿತಸ್ಥರು ಅನ್ನೋದು ಸರಿನಾ.? ರಾಜ್ಯ ಸರ್ಕಾರ ಏನೂ ಕೆಲಸ ಮಾಡುತ್ತಿಲ್ಲ. ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.