Apr 8, 2021, 4:03 PM IST
ಬೆಂಗಳೂರು (ಏ. 08): ಶಾಂತಿನಗರ ಬಸ್ ನಿಲ್ದಾಣಕ್ಕೆ ಕಮಿಷನರ್ ಕಮಲ್ ಪಂಥ್ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿಗಳ ಜೊತೆ ಚರ್ಚೆ ನಡೆಸಿದ್ಧಾರೆ. ಭದ್ರತೆಯನ್ನು ಪರಿಶೀಲಿಸಿದ್ದಾರೆ.
ಬಸ್ ಓಡಿಸಲು ಮುಂದೆ ಬಂದರೆ ನೌಕರರಿಗೆ ಪೊಲೀಸ್ ಭದ್ರತೆ: ಗೃಹ ಸಚಿವ
'ನೌಕರರು ಬಸ್ ಓಡಿಸಲು ಮುಂದೆ ಬಂದರೆ ಅವರಿಗೆ ನಾವು ಭದ್ರತೆ ಕೊಡುತ್ತೇವೆ. ಈಗಾಗಲೇ ಕೆಲವು ಮಾರ್ಗಗಳಿಗೆ ಬಸ್ಗಳು ಸಂಚರಿಸುತ್ತಿವೆ. ಶಾಂತಿ ಸುವ್ಯವಸ್ಥೆ ಕಾಪಾಡಿದ್ದೇವೆ. ಬಿಎಂಟಿಸಿ ಡ್ರೈವರ್ಗೆ ಬೆದರಿಕೆಯೊಡ್ಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇನ್ನು ಖಾಸಗಿ ವಾಹನಗಳು ಹೆಚ್ಚುವರಿ ಶುಲ್ಕ ವಸೂಲಿ ಮಾಡುವಂತಿಲ್ಲ' ಎಂದು ಕಮಿಷನರ್ ಕಮಲ್ ಪಂಥ್ ಹೇಳಿದ್ದಾರೆ.