ಕರ್ನಾಟಕಕ್ಕೆ ಇನ್ನೂ ನಾಲ್ಕು ದಿನ ಉಷ್ಣಮಾರುತ: ಹವಾಮಾನ ಇಲಾಖೆ

Published : Apr 30, 2024, 08:03 AM IST
ಕರ್ನಾಟಕಕ್ಕೆ ಇನ್ನೂ ನಾಲ್ಕು ದಿನ ಉಷ್ಣಮಾರುತ: ಹವಾಮಾನ ಇಲಾಖೆ

ಸಾರಾಂಶ

ಮಿತಿ ಮೀರಿದ ತಾಪಮಾನ ಹಾಗೂ ಬಿಸಿ ಗಾಳಿಯಿಂದಾಗಿ ಜನರು ಬವಣೆ ಪಡುತ್ತಿರುವಾಗಲೇ ಕರ್ನಾಟಕದಲ್ಲಿ ಮೇ 3ರವರೆಗೂ ಉಷ್ಣಮಾರುತ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಬಿಸಿಯ ವಾತಾವರಣದಿಂದ ಸದ್ಯಕ್ಕೆ ಮುಕ್ತಿಯಂತೂ ಇಲ್ಲ ಎಂದೂ ತಿಳಿಸಿದೆ.

ನವದೆಹಲಿ (ಏ.30): ಮಿತಿ ಮೀರಿದ ತಾಪಮಾನ ಹಾಗೂ ಬಿಸಿ ಗಾಳಿಯಿಂದಾಗಿ ಜನರು ಬವಣೆ ಪಡುತ್ತಿರುವಾಗಲೇ ಕರ್ನಾಟಕದಲ್ಲಿ ಮೇ 3ರವರೆಗೂ ಉಷ್ಣಮಾರುತ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಬಿಸಿಯ ವಾತಾವರಣದಿಂದ ಸದ್ಯಕ್ಕೆ ಮುಕ್ತಿಯಂತೂ ಇಲ್ಲ ಎಂದೂ ತಿಳಿಸಿದೆ.

ದೇಶದ ಹಲವಾರು ರಾಜ್ಯಗಳಲ್ಲಿ ಉಷ್ಣ ಮಾರುತ ಕಂಡುಬಂದಿದೆ. ಈಗಾಗಲೇ ಹಲವು ಕಡೆಗಳಲ್ಲಿ ತಾಪಮಾನ 45.6 ಡಿಗ್ರಿ ಸೆಲ್ಶಿಯಸ್‌ಗೆ ಮುಟ್ಟಿದೆ. ಪೂರ್ವ ಹಾಗೂ ದಕ್ಷಿಣದ ರಾಜ್ಯಗಳಲ್ಲಿ ಇನ್ನೂ ಐದು ದಿನಗಳ ಉಷ್ಣ ಮಾರುತ ಕಂಡುಬರಲಿದೆ. ಕರ್ನಾಟಕದ ಜತೆಗೆ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದಲ್ಲೂ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ 43 ಡಿಗ್ರಿ ತಲುಪಿದ ಉಷ್ಣಾಂಶ: ಇಬ್ಬರು ವೃದ್ಧೆಯರು ಬಲಿ

ಭಾನುವಾರ ದೇಶದ 155 ಹವಾಮಾನ ಇಲಾಖೆಯ ಕೇಂದ್ರಗಳಲ್ಲಿ 40 ಡಿಗ್ರಿಗಿಂತ ಅಧಿಕ ತಾಪ ವರದಿಯಾಗಿದೆ. ಪೂರ್ವ, ದಕ್ಷಿಣ ಹಾಗೂ ಉತ್ತರ ಭಾರತದಲ್ಲಿ ಉಷ್ಣ ಮಾರುತದ ಅಬ್ಬರ ಹೆಚ್ಚಾಗಿದೆ. ಆಂಧ್ರದ ರಾಯಲಸೀಮೆ ಪ್ರಾಂತ್ಯದ ನಂದ್ಯಾಲದಲ್ಲಿ 45.6 ಡಿಗ್ರಿ ತಾಪ ದಾಖಲಾಗಿದೆ.  ಕರ್ನಾಟಕದ ಒಳನಾಡಿನ ಬಹುತೇಕ ಕಡೆಗಳಲ್ಲಿ ಬಿಸಿ ಹಾಗೂ ಆರ್ದ್ರ ವಾತಾವರಣ ಕಂಡುಬಂದಿದೆ. ರಾಯಚೂರಿನಲ್ಲಿ 43 ಹಾಗೂ ಕಲಬುರಗಿಯಲ್ಲಿ 42.9 ಡಿಗ್ರಿ ಸೆಲ್ಶಿಯಸ್‌ ಕಂಡುಬಂದಿದೆ ಎಂದು ತಿಳಿಸಿದೆ.

ಕಾಂಬೋಡಿಯಾದಲ್ಲಿ 170 ವರ್ಷಗಳಲ್ಲೇ ಅಧಿಕ ಉಷ್ಣಾಂಶ: ಕಳೆದೊಂದು ತಿಂಗಳಿನಿಂದ ಭಾರತವನ್ನು ಆವರಿಸಿಕೊಂಡಿರುವ ಉಷ್ಣ ಮಾರುತಗಳು ಏಷ್ಯಾದ ಇತರೆ ಹಲವು ದೇಶಗಳಲ್ಲೂ ತನ್ನ ಅಟ್ಟಹಾಸ ಮೆರೆಯುತ್ತಿದೆ. ಆಗ್ನೇಯಾ ಏಷ್ಯಾದ ದೇಶಗಳಲ್ಲಿ ಉಷ್ಣಹವೆ ಅಧಿಕವಾಗಿದ್ದು, ಈ ದೇಶಗಳಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ಸಮೀಪ ತಲುಪಿದೆ. ಕಾಂಬೋಡಿಯಾದಲ್ಲಿ 170 ವರ್ಷಗಳಲ್ಲಿಯೇ ಈ ವರ್ಷ ಅತ್ಯಧಿಕ ತಾಪಮಾನ ದಾಖಲಾಗಿದ್ದು, 43 ಡಿ. ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. 

ಪ್ರಜ್ವಲ್ ಪರ ಪ್ರಚಾರ ಮಾಡಿದ್ದ ಮೋದಿ ಈಗೇನು ಹೇಳುತ್ತಾರೆ: ಪ್ರಿಯಾಂಕಾ ಗಾಂಧಿ

ಮ್ಯಾನ್ಮಾರ್‌ನ ಚೌಕ ಟೌನ್ಶಿಪ್‌ ನಲ್ಲಿ ಉಷ್ಣಾಂಶ 48.2 ಡಿ.ಸೆ.ಗೆ ಉಷ್ಣಾಂಶ ತಲುಪಿದೆ. ಇನ್ನು ಥಾಯ್ಲೆಂಡ್‌ನ ಹಲವು ನಗರಗಳಲ್ಲಿ ಉಷ್ಣಾಂಶ 44 ಡಿ.ಸೆ. ದಾಖಲಾಗಿದೆ. ಉಷ್ಣಹವೆ ಪರಿಣಾಮದಿಂದಾಗಿ ಜನ ಪರದಾಡುತ್ತಿದ್ದಾರೆ. ಪಿಲಿಪ್ಪೀನ್ಸ್‌ನಲ್ಲಿ 50ಕ್ಕೂ ಹೆಚ್ಚು ಜನರು ಹವಾಮಾನ ಸಮಸ್ಯೆಗೆ ತುತ್ತಾಗಿದ್ದಾರೆ. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ . ಇನ್ನು ವರದಿ ಪ್ರಕಾರ ಬಾಂಗ್ಲಾದೇಶದಲ್ಲಿ ಹೀಟ್ ಸ್ಟ್ರೋಕ್‌ ನಿಂದ ತಿಂಗಳ ಆರಂಭದಲ್ಲಿ 5 ದಿನಗಳ ಅಂತರದಲ್ಲಿ 20 ಜನ ಬಲಿಯಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ