Jul 2, 2021, 5:27 PM IST
ಬೆಂಗಳೂರು (ಜು. 02): ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲೊಂದು ಮತ್ಸ್ಯ ಸಾಮ್ರಾಜ್ಯ ನಿರ್ಮಾಣವಾಗಿದೆ. ಭಾರತೀಯ ರೈಲ್ವೆ ನಿಲ್ದಾಣ ಅಭಿವೃದ್ಧಿ ನಿಗಮದ ವಿನೂತನ ಪ್ರಯತ್ನ ಇದಾಗಿದೆ. ಈ ಟನೆಲ್ ಅಕ್ವೇರಿಯಂನಲ್ಲಿವೆ ಬ್ಲಾಕ್ ಡೈಮಂಡ್, ಸ್ಟಿಂಗ್ ರೇ ಮುಂತಾದ ವಿದೇಶದ ಮೀನುಗಳು. ರೈಲ್ವೆ ಪ್ರಯಾಣಿಕರ ಆಯಾಸ ಮತ್ತು ದಣಿವು ನಿವಾರಣೆ ಇದರ ಉದ್ದೇಶವಾಗಿದೆ. ಬೆಳಿಗ್ಗೆ 9 ರಿಂದ ರಾತ್ರಿ 9 ಗಂಟೆಯವರೆಗೆ ವೀಕ್ಷಣೆಗೆ ಅವಕಾಶ, ಕೇವಲ 25 ರೂ. ದರ ನಿಗದಿಪಡಿಸಲಾಗಿದೆ.