ಎರಡೂವರೆ ತಿಂಗಳಲ್ಲಿ ಮಳೆಗೆ 73 ಮಂದಿ ಬಲಿ, 22 ಸಾವಿರ ಮಂದಿ ಅತಂತ್ರ: ಆರ್ ಅಶೋಕ್

Aug 8, 2022, 3:27 PM IST

ಬೆಂಗಳೂರು (ಆ. 08): ರಾಜ್ಯದಲ್ಲಿ ಸುರಿಯುತ್ತಿರುವ ಅತಿವೃಷ್ಟಿ ಜನರ ಜೀವ ಹಿಂಡುತ್ತಿದೆ. ಎರಡೂವರೆ ತಿಂಗಳಲ್ಲಿ ಮಳೆಯ ಅವಾಂತರಕ್ಕೆ 73 ಜನ ಸಾವನ್ನಪ್ಪಿದ್ದಾರೆ. 14 ಪ್ರವಾಹ ಪೀಡಿತ ಜಿಲ್ಲೆಯಲ್ಲಿ 22 ಸಾವಿರ ಜನ ಅತಂತ್ರರಾಗಿದ್ದಾರೆ. 666 ಮನೆಗಳಿಗೆ ಹಾನಿಯಾಗಿದೆ. 2949 ಮನೆಗಳಿಗೆ ತೀವ್ರ ಹಾನಿಯಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಮಾಹಿತಿ ನೀಡಿದ್ದಾರೆ.