ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದವರೇ ಜೋಕೆ.! ಮೃತಪಟ್ಟ 5 ದಿನಗಳ ಬಳಿಕ ಪಾಸಿಟಿವ್ ರಿಪೋರ್ಟ್‌;

Jul 12, 2020, 5:54 PM IST

ಬೆಂಗಳೂರು (ಜು. 12): ಕೊರೊನಾ ವಿಚಾರದಲ್ಲಿ ಆರೋಗ್ಯ ಅಧಿಕಾರಿಗಳು ಎಡವಟ್ಟಿನ ಮೇಲೆ ಎಡವಟ್ಟು ಮಾಡುತ್ತಿದ್ದಾರೆ. ಆನೇಕಲ್‌ನಲ್ಲಿ ಸತ್ತ ವ್ಯಕ್ತಿಗೆ 5 ದಿನಗಳ ಬಳಿಕ ಪಾಸಿಟಿವ್ ವರದಿ ನೀಡಿದ್ದಾರೆ. ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದವರಲ್ಲಿ ಕೊರೊನಾ ಆತಂಕ ಶುರುವಾಗಿದೆ. 

ಕಾಯುವ ಅಗತ್ಯವಿಲ್ಲ, 10 ನಿಮಿಷದಲ್ಲೇ ಕೊರೋನಾ ರಿಪೋರ್ಟ್ ಕೈಯಲ್ಲಿ..!

ಸಿಪಾಯಿ ಬೀದಿ ನಿವಾಸಿ ರಾಜಪ್ಪ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ.  ಸ್ವ್ಯಾಬ್ ಟೆಸ್ಟ್ ಮಾಡಿಸಲಾಗಿದೆ. ಸಿಪಾಯಿ ಬೀದಿಯನ್ನು ಸೀಲ್ ಡೌನ್ ಮಾಡಲಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೊರೊನಾ ಆತಂಕ ಶುರುವಾಗಿದೆ.