ಬಿಡದಿ ತಟ್ಟೆ ಇಡ್ಲಿ ಸವಿದು ಭೈರಾಗಿ ಪ್ರಮೋಷನ್ ಶುರು ಮಾಡಿದ ಶಿವಣ್ಣ- ಧನಂಜಯ್!

Jun 24, 2022, 2:21 PM IST

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ ಭೈರಾಗಿ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಇಡೀ ತಂಡ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು ಇಂದು ರಾಮನರಗದ ಕಡೆ ಪ್ರಯಾಣ ಮಾಡಿದ್ದಾರೆ. ಮಾರ್ಗ ಮಧ್ಯೆ ಬಿಡದಿಯಲ್ಲಿ ನಿಲ್ಲಿಸಿ ತಟ್ಟೆ ಇಡ್ಲಿ ಸೇವಿಸಿದ್ದಾರೆ. ಶಿವರಾಜ್‌ಕುಮಾರ್, ಗೀತಾ ಶಿವಣ್ಣ, ಧನಂಜಯ್ ಮತ್ತು ನಿರ್ಮಾಪಕ ಕೃಷ್ಣ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಪ್ರಚಾರಕ್ಕೆ ಸ್ವತಃ ಶಿವಣ್ಣ ಅವರೇ ಕಾರು ಡ್ರೈವ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment