ಭೂಮಿಯೊಂದು ಬೋಳು ತಲೆಯು ಟೊಪ್ಪಿ ಇಟ್ರೆ ತಪ್ಪು ಏನು?: ಒಟ್ಟಿಗೆ ಹಾಡಿ ಕುಣಿದ ಪ್ರಭುದೇವ-ಶಿವಣ್ಣ!

Jan 31, 2024, 11:46 AM IST

ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್ ಹಾಗು ಭಾರತೀಯ ಚಿತ್ರರಂಗದ ಡಾನ್ಸ್ ಕಿಂಗ್ ಪ್ರಭುದೇವ ಇದೇ ಮೊದಲ ಭಾರಿಗೆ ತೆರೆ ಹಂಚಿಕೊಳ್ಳುತ್ತಿರೋ ಸಿನಿಮಾ ಕರಟಕ ದಮನಕ. ನಿರ್ದೇಶಕ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಿರೋ ಈ ಸಿನಿಮಾದ ಟೈಟಲ್ ಸಾಂಗ್ ರಿಲೀಸ್ ಆಗಿದೆ. ಶಿವಣ್ಣ ಹಾಗು ಪ್ರಭುದೇವ ಸಖತ್ ಡಾನ್ಸ್ ಮಾಡಿದ್ದಾರೆ. ಇವರಿಬ್ಬರನ್ನ ನೋಡಿ ಇದು ಚಿತ್ರ ಜಗತ್ತಿನ ಬೊಂಬಾಟ್ ಜೋಡಿ ಅಂತ ಕಮೆಂಟ್ ಮಾಡುತ್ತಿದ್ದಾರೆ. ಯೋಗರಾಜ್‌ ಭಟ್‌ ಸಾಹಿತ್ಯ ಬರೆದಿರೋ ಈ ಹಾಡಿನಲ್ಲಿ ಎರಡು ನರಿಗಳ ಪಂಚತಂತ್ರದ ಕಥೆಯ ಝಲಕ್‌ ಕಾಣುತ್ತೆ. 

ಶಿವಣ್ಣ ಇಲ್ಲಿ ಕರಟಕನಾಗಿ ಪ್ರಭುದೇವ್‌ ದಮನಕನಾಗಿ ಕಾಣಿಸಿಕೊಂಡಿದ್ದಾರೆ. ಶಿವರಾತ್ರಿ ಹಬ್ಬದ ಸಮಯದಲ್ಲಿ ಅಂದರೆ ಮಾರ್ಚ್‌ 8ರಂದು ಕರಟಕ ದಮನಕ ಸಿನಿಮಾ ಬಿಡುಗಡೆಯಾಗಲಿದೆ. ಇದೇ ಹಾಡಿಗೆ ಸ್ಟೇಜ್ ಮೇಲೆ ಶಿವಣ್ಣ ಪ್ರಭುದೇವ ಡಾನ್ಸ್ ಮಾಡಿದ್ದಾರೆ. ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು "ಕರಟಕ" ಇನ್ನೊಂದರ ಹೆಸರು "ದಮನಕ". ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಆ ಕುತಂತ್ರಿ ನರಿಗಳು ಇಂದು ಮಾನವ ರೂಪ ತಾಳುವ ಮೂಲಕ ಸಮಾಜಕ್ಕೆ ಹೇಗೆ ಒಳ್ಳೆಯದು ಮಾಡುತ್ತವೆ ಅನ್ನೋದನ್ನು ಹೇಳುವುದೇ ಕರಟಕ ದಮನಕ ಸಿನಿಮಾದ ಕಥೆ. ಈ ಸಿನಿಮಾವನ್ನ ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ.