ಹುಬ್ಬಳ್ಳಿ ಜನರೆದುರು ಚಪ್ಪಲಿ ಬಿಟ್ಟು ಮಾತನಾಡಿದ ದರ್ಶನ್, ಯಾಕೆ ನೋಡಿ!

Mar 1, 2021, 4:49 PM IST

ರಾಬರ್ಟ್‌ ಆಡಿಯೋ ರಿಲೀಸ್‌ ಕಾರ್ಯಕ್ರಮದಲ್ಲಿ ದರ್ಶನ್ ವೇದಿಕೆ ಮೇಲೆ ಚಪ್ಪಲಿ ಬಿಟ್ಟು ಮಾತನಾಡಿದ್ದಾರೆ. ದರ್ಶನ್ ಯಾಕ್ಹಿಂಗೆ ಮಾಡಿದರು ಎಂದು ಕೆಲವರಿಗೆ ತಿಳಿಯಲಿಲ್ಲ. ಇದಕ್ಕೆ ಸ್ವತಃ ದರ್ಶನ್ ಉತ್ತರ ನೀಡಿದ್ದಾರೆ. ಸಂಗೊಳ್ಳಿ ರಾಯಣ್ಣ ಸಿನಿಮಾ ವಿಜಯ ಯಾತ್ರೆ ಸಮಯದಲ್ಲಿ ಪ್ರತಿ ಹಳ್ಳಿಯ ಹೆಣ್ಣು ಮಕ್ಕಳು ತೆಲೆ ಸೆರಗು, ಹಾಕಿಕೊಂಡಿದ್ದು, ಚಪ್ಪಲಿಯನ್ನು ಬಿಟ್ಟು ಕೈ ಮುಗಿಯುತ್ತಿದ್ದರು. ಉತ್ತರ ಕರ್ನಾಟಕ ಜನ ಕೊಡುವ ಗೌರವ ಹಾಗೂ ತೋರಿಸಿದ ಪ್ರೀತಿಗೆ ಹೀಗೆ ಮಾಡಿರುವುದಾಗಿ ದರ್ಶನ್ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment