Jul 28, 2024, 10:46 AM IST
ಸೆಂಟ್ರಲ್ ಜೈಲ್ನ ಸೆಲೆಬ್ರೆಟಿ ಆಗಿರೋ ನಟ ದರ್ಶನ್ ಭೇಟಿಗೆ ಒಬ್ಬೊಬ್ಬರೇ ಸ್ಯಾಂಡಲ್ವುಡ್ ಮಂದಿ ಹೋಗುತ್ತಿದ್ದಾರೆ. ಕೆಲವರಿಗೆ ದರ್ಶನ್ ದರ್ಶನಕ್ಕೆ ಅವಕಾಶ ಸಿಕ್ಕಿದ್ರೆ ಇನ್ನು ಕೆಲವರಿಗೆ ದರ್ಶನ್ನ ದರ್ಶನ ಆಗುತ್ತಿಲ್ಲ. ಬಂದ ಹಾದಿಗೆ ಸುಂಕವಿಲ್ಲ ಅಂತ ವಾಪಸ್ ಆಗುತ್ತಿದ್ದಾರೆ. ಕನ್ನಡದ ಕಾಮಿಡಿ ಸೂಪರ್ ಸ್ಟಾರ್ ಸಾಧು ಕೋಕಿಲ ಕೂಡ ದರ್ಶನ್ ಬೇಟಿಗೆ ಬಂದು ವಾಪಸ್ ಆಗಿದ್ರು. ಆದ್ರೆ ಮರುದಿನ ಮತ್ತೆ ಪರಪ್ಪನ ಅಗ್ರಹಾರಕ್ಕೆ ಬಂದಿದ್ದ ಸಾಧು ಕೋಕಿಲಾ, ಕೊನೆಗೂ ದರ್ಶನ್ ಭೇಟಿ ಮಾಡಿದ್ದಾರೆ.
ನಟ ದರ್ಶನ್ರನ್ನ ಭೇಟಿ ಆಗಿರೋ ಸಾಧು ಕೋಕಿಲಾ, ದರ್ಶನ್ ಜೈಲಿನಲ್ಲಿ ಹೇಗಿದ್ದಾರೆ ಅಂತ ಹೇಳಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ನಿಂದು ಬೇಯುತ್ತಿದ್ದ ದರ್ಶನ್ ಈಗ ಪುಸ್ತಕದ ಹುಳು ಆಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಆರೋಪದ ಟೆನ್ಷನ್ ಮಧ್ಯೆ ದರ್ಶನ್ರನ್ನ ಅವರಿವರು ಬಂದು ಭೇಟಿ ಮಾಡುತ್ತಿರೋದ್ರಿಂದ ದರ್ಶನ್ ಸ್ವಲ್ಪ ರಿಲ್ಯಾಕ್ಸ್ ಆಗಿದ್ದಾರಾಂತೆ. ಕಂಬಿ ಹಿಂದೆ ಕೂಲ್ ಕೂಲ್ ಆಗಿರೋ ದಾಸ ಪುಸ್ತಕ ಓದಿಕೊಂಡು ಸಮಯ ಕಳೆಯುತ್ತಿದ್ದಾರಂತೆ. ಇವತ್ತು ದರ್ಶನ್ರನ್ನು ನೋಡಿ ನಮಗೂ ಒಂಚೂರು ನೆಮ್ಮದಿ ಸಿಕ್ತು ಅಂತ ಸಾಧುಕೋಕಿಲಾ ಹೇಳಿದ್ದಾರೆ.