ಕಾಂಗ್ರೆಸ್, ಜೆಡಿಎಸ್ ಬಿಟ್ಟು ಬಂದವರನ್ನು CD ಸುಳಿಯಲ್ಲಿ ಸಿಕ್ಕಿಸಲಾಗ್ತಾ ಇದೆಯಾ.?

Mar 6, 2021, 2:36 PM IST

ಬೆಂಗಳೂರು (ಮಾ. 06): ತಮ್ಮ ಗೌರವಕ್ಕೆ ಚ್ಯುತಿ ಬರುವಂತಹ ಯಾವುದೇ ಸುದ್ದಿ, ದೃಶ್ಯಾವಳಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲು ಕೋರಿ ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ. 

ಹೆಚ್ಚಾಗುತ್ತಿದೆ CD ಢವಢವ; ಇನ್ನೂ ಹೆಚ್ಚು ಜನ ಸಚಿವರು ಕೋರ್ಟ್‌ಗೆ ಹೋಗ್ತಾರಂತೆ!

'ಕಾಂಗ್ರೆಸ್, ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದವರನ್ನು ಟಾರ್ಗೆಟ್ ಮಾಡುವ ಕೆಲಸ ನಡೆಯುತ್ತಿದೆ. ಹಾಗಾಗಿ ಮುನ್ನೆಚ್ಚರಿಕೆಯಿಂದ ಕೋರ್ಟ್ ಮೊರೆ ಹೋಗಿದ್ದೇವೆ. ಇಂದೂ ಕೆಲವರು ಮೊರೆ ಹೋಗುತ್ತಾರೆ. ನಮಗೆ ಯಾರೂ ಬ್ಲ್ಯಾಕ್‌ಮೇಲ್ ಮಾಡಿಲ್ಲ. ಅಧಿವೇಶನ ವೇಳೆ ತೇಜೋವಧೆ ಮಾಡಲು ಪಕ್ಕಾ ಪ್ಲ್ಯಾನ್ ಮಾಡಲಾಗಿದೆ ಎಂಬ ಮಾತು ಕೇಳಿ ಬಂದಿದೆ' ಎಂದು ಎಸ್‌ಟಿ ಸೋಮಶೇಖರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ಧಾರೆ.