ಶಿರಾದಲ್ಲಿ 'ಖಾರ' ಬಾತ್; ಎಚ್‌ಡಿಕೆ ಕಣ್ಣೀರಿಗೆ ಸಿದ್ದರಾಮಯ್ಯ ಲೇವಡಿ ಮಾತು!

Oct 4, 2020, 5:29 PM IST

ಶಿರಾ, ತುಮಕೂರು (ಅ.04): ಉಪ-ಚುನಾವಣಾ ಕಣ ರಂಗೇರುತ್ತಿದ್ದಂತೆ ಮಾತಿನ ಸಮರ ಕೂಡಾ ಜೋರಾಗುತ್ತಿದೆ. ಹಳೇ ದೋಸ್ತಿಗಳಾದ ಸಿದ್ದರಾಮಯ್ಯ ಮತ್ತು  ಎಚ್‌ಡಿಕೆ ನಡುವಿನ ಗುದ್ದಾಟ ಮತ್ತೆ ಮುನ್ನೆಲೆಗೆ ಬಂದಿದೆ. 

ಇದನ್ನೂ ನೋಡಿ | RR ನಗರ ಚುನಾವಣೆ : ಕೈ- ಜೆಡಿಎಸ್ ದೋಸ್ತಿಯೊಂದಿಗೆ ಅಭ್ಯರ್ಥಿ ಕಣಕ್ಕೆ?...

ಜೆಡಿಎಸ್‌ ಹಾಗೂ ಎಚ್‌ಡಿಕೆ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ತನ್ನದೇ ಧಾಟಿಯಲ್ಲಿ ಮಾತಿನ ಬಾಣಗಳನ್ನು ಪ್ರಯೋಗಿಸಿದ್ದಾರೆ. ಜೆಡಿಎಸ್‌ ಒಂದು ರಾಜಕೀಯ ಪಕ್ಷವೇ ಅಲ್ಲ ಅಂದಿರುವ ಸಿದ್ದರಾಮಯ್ಯ, ಎಚ್‌ಡಿಕೆ ಮತ್ತು ದೇವೇಗೌಡರ ಕಣ್ಣೀರಿನ ಬಗ್ಗೆಯೂ ಲೇವಡಿ ಮಾಡಿದ್ದಾರೆ.

ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರಗಳಿಗೆ ನ.03ರಂದು ಮತದಾನ ನಡೆಯಲಿದ್ದು, ನ.10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಅ.16 ಕೊನೆಯ ದಿನವಾಗಿದೆ.