ಸೋಮಣ್ಣ ಪ್ರಚಾರಕ್ಕೆ ಅಡ್ಡಿ: ಸಿದ್ದು ಪರ ಘೋಷಣೆ ಮೊಳಗಿಸಿದ ಯುವಕರು

Apr 23, 2023, 1:37 PM IST

ಮೈಸೂರು: ವರುಣಾ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದ್ದು, ವಿ. ಸೋಮಣ್ಣ ಪ್ರಚಾರ ಮಾಡುವ ವೇಳೆ ಯುವಕರು ಸಿದ್ದರಾಮಯ್ಯ ಪರ ಘೋಷಣೆ ಕೂಗಿದ್ದಾರೆ. ಕ್ಷೇತ್ರಕ್ಕೆ ಸೋಮಣ್ಣ ಆಗಮಿಸುತ್ತಿದ್ದಂತೆ ಅವರ ಕಾರನ್ನು ಅಡ್ಡಗಟ್ಟಿ ಪ್ರಚಾರಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಪರ ಜಯ ಘೋಷಗಳನ್ನು ಕೂಗಿದ್ದಾರೆ. ಈ ಘಟನೆಯಿಂದ ವಿ. ಸೋಮಣ್ಣ ಕಂಗಾಲಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಇದನ್ನೂ ವೀಕ್ಷಿಸಿ: ನನ್ನ ವೋಟು ನನ್ನ ಮಾತು : ವರುಣಾದಲ್ಲಿ ಸಿದ್ದು ಗೆದ್ದೇ ಗೆಲ್ತಾರೆ ಎಂದ ಜನ