Mar 21, 2023, 11:48 AM IST
ಚುನಾವಣೆ ಹೊಸ್ತಿನಲ್ಲಿ ಬಿಜೆಪಿಗೆ ಅಥಣಿ ಟಿಕೆಟ್ ಟೆನ್ಷನ್ ಆರಂಭವಾಗಿದ್ದು, ಸವದಿ -ರಮೇಶ್ ಜಾರಕಿಹೊಳಿ ಮಧ್ಯೆ ಸ್ವಾಭಿಮಾನದ ಯುದ್ಧ ನಡೆಯುತ್ತಿದೆ. ಕುಮಟಳ್ಳಿಗೆ ಟಿಕೆಟ್ ನೀಡದಿದ್ದರೆ ರಾಜಕೀಯ ನಿವೃತ್ತಿಯ ಘೋಷಣೆ ಮಾಡುವುದಾಗಿ ಎಚ್ಚರಿಕೆ ನೀಡುವುದರ ಜತೆ ಮಹೇಶ್ ಕುಮಟಳ್ಳಿಗೆ ಟಿಕೆಟ್ ಕೊಡದಿದ್ದರೆ ನಾನು ಗೋಕಾಕನಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ . ಅಮಿತ್ ಶಾ ಜೊತೆ ಬೇಟಿ ಕೆಲವು ವಿಚಾರಗಳು ಮಾತನಾಡಲಾಗಿದೆ ಎಂದು ಮಹೇಶ ಕುಮಟಳ್ಳಿಗೆ ಟಿಕೆಟ್ ಕೊಡಿಸಲು ರಮೇಶ್ ಕಸರತ್ತು ಮಾಡುತ್ತಿದ್ದಾರೆ . ಮತ್ತೊಂದೆಡೆ ಸ್ಪರ್ಧೆ ಬಗ್ಗೆ ಲಕ್ಷ್ಮಣ್ ಸವದಿ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ಮಾರ್ಚ್ 27ರವರೆಗೆ ಸಮುದಾಯವಾರು ಸಭೆ ಮಾಡಿ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ.