ಜೈದೇವ್​ ಪಾಪದ ಕೃತ್ಯ ಇಷ್ಟುಬೇಗ ಗೌತಮ್​ಗೆ ತಿಳಿಯಿತಾ? ಮನೆಯಿಂದ ದಬ್ಬಿದ ಶಕುಂತಲಾ! ಸೀರಿಯಲ್​ ಮುಗಿಯತ್ತಾ?

Published : Oct 06, 2024, 08:29 PM ISTUpdated : Oct 06, 2024, 09:53 PM IST
ಜೈದೇವ್​ ಪಾಪದ ಕೃತ್ಯ ಇಷ್ಟುಬೇಗ ಗೌತಮ್​ಗೆ ತಿಳಿಯಿತಾ? ಮನೆಯಿಂದ ದಬ್ಬಿದ ಶಕುಂತಲಾ! ಸೀರಿಯಲ್​  ಮುಗಿಯತ್ತಾ?

ಸಾರಾಂಶ

ಕೊಲೆ ಪ್ರಯತ್ನ, ಕಿಡ್ನ್ಯಾಪ್​ ಸೇರಿ ಹಲವಾರು ಅಪರಾಧ ಮಾಡಿರುವ ಜೈದೇವ ಬಗ್ಗೆ ಗೌತಮ್​ಗೆ ಇಷ್ಟು ಬೇಗ ತಿಳಿದೇ ಹೋಯ್ತಾ? ಈಗ ಬಿಡುಗಡೆಯಾಗಿರೋ ಪ್ರೊಮೋದಲ್ಲಿ ಏನಿದೆ?     

ಇಬ್ಬರು ಮಧ್ಯವಯಸ್ಕರ ಕಿತ್ತಾಡದ ಮೂಲಕವೇ ಮದುವೆಯಾಗಿ ಈಗ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಸ್ಥಿತಿ ತಲುಪಿರುವ ಜೀ ಕನ್ನಡದ ಅಮೃತಧಾರೆ ಸೀರಿಯಲ್​ ಇದೀಗ ಕುತೂಹಲದ ಘಟ್ಟ ತಲುಪಿದೆ.  ಸದಾ ವಿಲನ್​ ಅತ್ತೆಯಂದಿರ ಕೈ ಮೇಲಾಗುವ ಸೀರಿಯಲ್​ಗಳೇ ಹೆಚ್ಚಾಗಿರುವ ಈ ದಿನಗಳಲ್ಲಿ ಸೊಸೆ ಭೂಮಿಕಾಳೇ ಅತ್ತೆಗೆ ಟಾಂಗ್​ ಕೊಡುತ್ತಾ ಅವಳನ್ನು ಸೋಲಿಸುತ್ತಿರುವ ಕಾರಣ ಈ ಸೀರಿಯಲ್​ ಹಲವರಿಗೆ ತುಂಬಾ ಇಷ್ಟವಾಗಿತ್ತು. ಆದರೆ ಇದೀಗ ಕೆಲವು ಕಂತುಗಳಿಂದ ತನ್ನ ಅತ್ತೆ ವಿಲನ್​ ಎಂದು ತಿಳಿದಿದ್ದರೂ ಅವಳ ಮೋಸದ ಜಾಲದಲ್ಲಿ ಭೂಮಿಕಾ ಸಿಲುಕಿ ಬಿಟ್ಟಿದ್ದಾಳೆ. ಈ ಕುತಂತ್ರಕ್ಕೆ ತನ್ನ ಸ್ವಂತ ತಂಗಿಯನ್ನೇ ಅತ್ತೆ ಬಳಸಿಕೊಳ್ಳುತ್ತಿದ್ದಾಳೆ ಎನ್ನುವುದು ಕೂಡ ಜಾಣೆ ಭೂಮಿಕಾಗೆ ಗೊತ್ತಾಗದೇ ಹೋಗಿ ಬಿಟ್ಟಿದೆ. ಇನ್ನೊಂದೆಡೆ ಕುತಂತ್ರಿ ಮೈದುನ ಜೈದೇವನ ತಂತ್ರವನ್ನೂ ಅವಳು ಅರಿಯುತ್ತಿಲ್ಲ ಎನ್ನುವುದು ವಿಚಿತ್ರ ಎನಿಸುತ್ತಿರುವ ಕಾರಣ ಈ ಸೀರಿಯಲ್​ ಬಗ್ಗೆ ಫ್ಯಾನ್ಸ್​ ಬೇಸರ ವ್ಯಕ್ತಪಡಿಸುತ್ತಿದ್ದರು.
 
ಆದರೆ ಇದೀಗ ಜೈದೇವನ ಎಲ್ಲಾ ಪಾಪದ ಕೃತ್ಯಗಳೂ ಭೂಮಿಕಾಗೆ ಗೊತ್ತಾಗಿದೆ. ಜೈದೇವನ ಪಾಪದ ಕೊಡ ತುಂಬಿದೆ.  ತನ್ನನ್ನು, ಗಂಡನನ್ನು, ಪತ್ನಿ ಮಲ್ಲಿಯನ್ನು ಕೊಲ್ಲಲು ಸಂಚುರೂಪಿಸಿದ್ದು ತಿಳಿದಿದ್ದರೂ ಜೈದೇವನನ್ನು ನಂಬಿ ಅತೀ ಪೆದ್ದು ಎನ್ನುವಂತೆ ಭೂಮಿಕಾ ಮತ್ತು ಗೌತಮ್​ ನಡೆದುಕೊಂಡಿದ್ದು ಯಾಕೋ ಸೀರಿಯಲ್​ ವೀಕ್ಷಕರಿಗೆ ಇಷ್ಟವಾಗಿರಲಿಲ್ಲ.  ಹಾವಿಗೆ ವಿಷ ಇದೆ ಎಂದು ಗೊತ್ತಾದ ಮೇಲೂ ಅದನ್ನು ಮುದ್ದು ಮಾಡುವುದು ಎಷ್ಟು ಸರಿ ಎಂದೇ ಪ್ರೇಕ್ಷಕರು ಹೇಳುತ್ತಿದ್ದರು.  ತಾನು ಒಳ್ಳೆಯವನು ಎನ್ನುವ ಪೋಸ್​ ಕೊಟ್ಟು ಹೆಜ್ಜೆ ಹೆಜ್ಜೆಗೂ ಅಣ್ಣ ಮತ್ತು ಅತ್ತಿಗೆಯನ್ನು ಯಾಮಾರಿಸುತ್ತಿದ್ದಾನೆ ಜೈದೇವ. ಈಗ ಪತ್ನಿಯನ್ನು ಕೊಲ್ಲುವ ಮಟ್ಟಿಗೆ ಬಂದಿದ್ದಾನೆ. ತುಂಬು ಗರ್ಭಿಣಿ ಪತ್ನಿಯನ್ನು ತವರಿಗೆ ಬಿಟ್ಟು ಬರಲು ಹೋಗಿದ್ದ. ಅವಳನ್ನು ಬೇರೆ ಕಾರಿನಲ್ಲಿ ಕುಳ್ಳರಿಸಿ ತಾನು ಗರ್ಲ್​ಫ್ರೆಂಡ್​ ಜೊತೆ ಲಲ್ಲೆ ಹೊಡೆಯುತ್ತಿದ್ದಾಗ ಅದನ್ನು ಮಲ್ಲಿ ನೋಡಿದ್ದಾಳೆ. ಮತ್ತೊಂದು ಕಡೆಯಿಂದ ಗಾಡಿ ಬಂದು ಅವಳಿಗೆ ಗುದ್ದಿದೆ. ಮಗು ಸತ್ತು ಹೋಗಿದೆ. 

ಉಫ್​! ಎಂತೆಂಥ ಲವ್​ ಸಂಬಂಧಗಳು ಇವೆಯಪ್ಪಾ? ಇದು ಪಾಕೆಟಿಂಗ್​ ರಿಲೇಷನ್​ಷಿಪ್​ ಅಂತೆ! ಹಾಗಂದ್ರೆ ಏನ್​ ಗೊತ್ತಾ?

ಇಷ್ಟೆಲ್ಲಾ ನಡುವೆಯೇ ಮಲ್ಲಿಗೆ ಎಚ್ಚರವಾಗಿದ್ದು, ಗಂಡನ ಕಿತಾಪತಿ ಗೊತ್ತಾಗಿದೆ. ಆಕೆ ಆ ವಿಷಯವನ್ನು ಗೌತಮ್​ಗೆ ಹೇಳಲು ಹೋದಾಗ, ಅತ್ತ ಕಡೆಯಿಂದ ಮಲ್ಲಿಯ ತಾತನನ್ನು ಸಾಯಿಸುವ ಬೆದರಿಕೆ ಹಾಕಿದ್ದ ಜೈದೇವ. ಆದ್ದರಿಂದ ಮಲ್ಲಿ ಸುಮ್ಮನಾಗಿದ್ದಳು. ಇತ್ತ ಆನಂದ್​ಗೂ ತನ್ನನ್ನು ಕೊಲೆ ಮಾಡಲು ಪ್ರಯತ್ನ ಪಟ್ಟಿದ್ದು ಜೈದೇವ್​ ಎನ್ನುವುದು ಪೊಲೀಸರಿಂದ ತಿಳಿದಿದೆ. ಇನ್ನೊಂದೆಡೆ, ಪಾರ್ಥನಿಗೆ ತನ್ನ ಮದುವೆ ದಿನ ಮುಸುಕು ಹಾಕಿಕೊಂಡು ಕೊಲೆ ಮಾಡಲು ಬಂದಿರುವುದು ಕೂಡ ಜೈದೇವನೇ ಎನ್ನುವ ಸತ್ಯ ತಿಳಿದಿಲ್ಲ. ಆದ್ದರಿಂದ ಗೌತಮ್​ ಒಬ್ಬ ಬಿಟ್ಟು ಎಲ್ಲರೂ ಈ ಬಗ್ಗೆ ಚರ್ಚಿಸಿದ್ದಾರೆ. ಆದರೆ ಭೂಮಿಕಾ ಗೌತಮ್​ಗೆ ಈಗಲೇ ಎಲ್ಲಾ ಹೇಳುವುದು ಬೇಡ, ಸೂಕ್ತ ಸಾಕ್ಷ್ಯಾಧಾರ ಸಹಿತ ತೋರಿಸೋಣ ಎಂದು ಆನಂದ್​ಗೆ ಹೇಳಿದ್ದಾಳೆ.

ಆದರೆ ಇದೀಗ ರಿಲೀಸ್​  ಆಗಿರೋ ಪ್ರೊಮೋದಲ್ಲಿ ಗೌತಮ್​ಗೆ ಎಲ್ಲಾ ವಿಷಯ ಗೊತ್ತಾಗಿರುವ ಹಾಗೆ ತೋರಿಸಲಾಗಿದೆ. ಮಲ್ಲಿ ಇದ್ದರೂ ಇನ್ನೊಬ್ಬಳನ್ನು ಇಟ್ಟುಕೊಂಡಿರುವುದು, ಪಾರ್ಥನ, ಆನಂದ್​ನ ಕೊಲೆ ಪ್ರಯತ್ನ, ಮಲ್ಲಿಯನ್ನು ಆಸ್ಪತ್ರೆಯಲ್ಲಿ ಸಾಯಿಸುವ ಪ್ರಯತ್ನ... ಹೀಗೆ ಎಲ್ಲವನ್ನೂ ಹೇಳಿ ಜೈದೇವ್​ಗೆ ಕಪಾಳಮೋಕ್ಷ ಮಾಡಿದ್ದಾನೆ. ಇದನ್ನು ಕೇಳಿ ಶಕುಂತಲಾ ದೇವಿ ಕೂಡ ಆತನ ಕೆನ್ನೆಗೆ ಹೊಡೆದು ಮನೆಯಿಂದ ಹೊರಕ್ಕೆ ಹಾಕಿದ್ದಾಳೆ. ಯಾರಿಗೂ ನಾನು ಬೇಡವಲ್ಲ, ಇನ್ನು ಬದುಕಿದ್ದು ಏನು ಪ್ರಯೋಜನ ಎಂದು ಮನೆಯಿಂದ ಹೊರಗೆ ಹೋಗುವಾಗ ಬಿದ್ದಿದ್ದಾನೆ ಜೈದೇವ್​. ಆದರೆ ಇದು ಜೈದೇವನ ಕನಸೋ, ಇನ್ನಾರದ್ದು ಕನಸೋ ಅಥವಾ ನಿಜನೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಬಹುತೇಕ ನೆಟ್ಟಿಗರ ಪ್ರಕಾರ ಇದು ಕನಸು ಎನ್ನುವುದು. ಇದು ನನಸಾಗಿ ಬಿಟ್ಟರೆ ಸೀರಿಯಲ್​ ಮುಗಿದಂತೆ ಎನ್ನುವುದು ಅವರ ಅನಿಸಿಕೆ. ಆದರೆ ಟಿಆರ್​ಪಿಯಲ್ಲಿ ಉತ್ತಮ ಸ್ಥಾನ ಹೊಂದಿರೋ ಅಮೃತಧಾರೆಯಂತೂ ಇಷ್ಟು ಬೇಗ ಮುಗಿಸಲು ಸಾಧ್ಯವೇ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಹಾಗಿದ್ದರೆ ಇದೇನು? ನಿಜವೇ ಆಗಿದ್ದರೆ ಮುಂದೇನು ಎನ್ನುವುದನ್ನು ಕಾದು ನೋಡಬೇಕಿದೆ. 

ಬಿಗ್​ಬಾಸ್​​ ಸ್ಪರ್ಧಿಯಾಗಿ ಕತ್ತೆ? ಎರಡು ಕಾಲಿಂದಲ್ಲ ಸ್ವಾಮಿ, ನಿಜವಾಗ್ಲೂ ನಾಲ್ಕು ಕಾಲಿಂದೇ...ವಿಡಿಯೋ ರಿಲೀಸ್​!


PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?