ಘರ್‌ವಾಪ್ಸಿ ಮಾಡಲು ಹೋದ್ರೆ ಅರ್ಧ ಬಿಜೆಪಿ, ಜೆಡಿಎಸ್‌ ಖಾಲಿ: ಪ್ರಿಯಾಂಕ ಖರ್ಗೆ

Aug 19, 2023, 3:41 PM IST

ಬೆಂಗಳೂರು: ಘರ್‌ವಾಪ್ಸಿ ಮಾಡಲು ಹೋದ್ರೆ ಅರ್ಧ ಬಿಜೆಪಿ(BJP), ಜೆಡಿಎಸ್ (JDS) ಕೂಡ ಖಾಲಿಯಾಗುತ್ತೆ ಎಂದು ಬೆಂಗಳೂರಲ್ಲಿ ಸಚಿವ ಪ್ರಿಯಾಂಕ ಖರ್ಗೆ(Priyanka Kharge) ಹೇಳಿದ್ದಾರೆ. ಚೆಲುವರಾಯಸ್ವಾಮಿಗೆ ಕೆಲವರು ಸಂಪರ್ಕದಲ್ಲಿ ಇರಬಹುದು. ಕೆಲವರು ಹೈಕಮಾಂಡ್‌ ಭಾಗದಲ್ಲಿ ನನ್ನ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳುವ ಮೂಲಕ ಆಪರೇಷನ್ ಸುಳಿವನ್ನು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದಾರೆ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ, ಯಾವುದೇ ಕಂಡೀಷನ್‌ ಇಲ್ಲದೆ ಸೇರುವುದಾದ್ರೆ ಅವರಿಗೆ ಸ್ವಾಗತ ಎಂದು ಹೇಳಿದ್ದಾರೆ. ಇದೇ ವೇಳೆ ಪ್ರಿಯಾಂಕ್‌ ಖರ್ಗೆ ಯಡಿಯೂರಪ್ಪ ಸಭೆಗೆ ಲೇವಡಿ ಮಾಡಿದರು. ಬಿಎಸ್‌ವೈರನ್ನ ಬಿಜೆಪಿಯಲ್ಲಿ ಹೇಗೆ ನಡಿಸಿಕೊಂಡ್ರು ಗೊತ್ತಿದೆ. ಯಡಿಯೂರಪ್ಪರಿಗೆ ಕಣ್ಣೀರು ತರಿಸಿದ್ದು ಎಲ್ಲರೂ ನೋಡಿದ್ದಾರೆ. ಈಗ ಬಿಜೆಪಿಯಲ್ಲಿ ಕ್ಯಾಪ್ಟನ್ ಆಗೋಕೂ ಯಾರೂ ರೆಡಿ ಇಲ್ಲ. ಬಿಎಸ್‌ವೈ ಮಾತು ನಡೆಯುತ್ತಿದ್ರೆ ಬಿಜೆಪಿಯಿಂದ ಇಷ್ಟು ಜನ ಬರ್ತಿದ್ರಾ? ಎಂದು ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ.

ಇದನ್ನೂ ವೀಕ್ಷಿಸಿ: ಸ್ಯಾನಿಟರಿ ಪ್ಯಾಡ್‌ಗೆ ಹೇಳಿ ಗುಡ್‌ ಬೈ: ದೇಶಿಯ ಕಾಂಫಿ ಕಫ್‌ಗೆ ಹೇಳಿ ಹಾಯ್‌.. ಹಾಯ್‌ !