Jan 18, 2023, 10:50 PM IST
ಸುತ್ತೂರು(ಜ.18): ಸುತ್ತೂರು ಜಾತ್ರಾಮಹೋತ್ಸವದ ರಾಜಕೀಯ ಎದುರಾಳಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಎಲ್ಲರ ಗಮನಸೆಳೆದಿದ್ದಾರೆ. ಸುತ್ತೂರು ಜಾತ್ರಾ ಮಹೋತ್ಸದ ದೋಣಿ ವಿಹಾರ ಉದ್ಘಾಟನೆಯಲ್ಲಿ ಸಂಸದ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಹಾಗೂ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಜೊತೆಯಾಗಿ ದೋಣಿ ವಿಹಾರ ನಡೆಸಿದ್ದಾರೆ. ವಿಜಯೇಂದ್ರ ನಾವಿಕನಾಗಿದ್ದರೆ, ವಿಜಯೇಂದ್ರ ಪಯಣಿಗನಾಗಿದ್ದರು. ಇಬ್ಬರು ಅಕ್ಕಪಕ್ಕ ಕುಳಿತು ದೋಣಿ ವಿಹಾರ ಮಾಡಿದ್ದಾರೆ.