ಏನಿದು ಡಿಕೆಶಿ Vs ಮುನಿರತ್ನ ಕುರುಕ್ಷೇತ್ರ ರಹಸ್ಯ..? "ಮುನಿರತ್ನ ಡ್ರಾಮಾ ಮಾಸ್ಟರ್" ಅಂದ್ರು ಡಿಕೆ ಬ್ರದರ್ಸ್..!

ಏನಿದು ಡಿಕೆಶಿ Vs ಮುನಿರತ್ನ ಕುರುಕ್ಷೇತ್ರ ರಹಸ್ಯ..? "ಮುನಿರತ್ನ ಡ್ರಾಮಾ ಮಾಸ್ಟರ್" ಅಂದ್ರು ಡಿಕೆ ಬ್ರದರ್ಸ್..!

Published : Oct 12, 2023, 02:41 PM IST

ಕನಕಪುರ ಬಂಡೆ ಕಾಲಿಗೆರಗಿದ "ರಾಜರಾಜೇಶ್ವರಿ" ಶಾಸಕ..!
ಶಾಸಕ ಮುನಿರತ್ನ ಡಿಸಿಎಂ ಡಿಕೆಶಿ ಕಾಲಿಗೆರಗಿದ್ದು ಯಾಕೆ..?
ಒಂದು ಕಾಲದ ಆಪ್ತಮಿತ್ರರು ಶರಂಪರ ಶತ್ರುಗಳಾಗಿದ್ದು ಹೇಗೆ..?

ಕೈಯಲ್ಲೊಂದು ಪೋಸ್ಟರ್.. ಆ ಪೋಸ್ಟರ್'ನ ಒಂದು ಬದಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಫೋಟೋ, ಮತ್ತೊಂದು ತುದಿಯಲ್ಲಿ ಡಿಕೆ ಬ್ರದರ್‌ ಡಿಕೆ ಸುರೇಶ್ ಫೋಟೋ.. ನಂದೇನಿದ್ರೂ ಇವ್ರಿಬ್ರು ಅಂತ ಫೋಟೋ ಮುಟ್ಟಿ ತೋರಿಸ್ತಿದ್ದಾರೆ ಬಿಜೆಪಿ ಶಾಸಕ ಮುನಿರತ್ನ(Munirathna). ಒಂದು ಕಾಲದ ಆಪ್ತಮಿತ್ರರ ಮಧ್ಯೆ ಈಗ ರಣರೋಚಕ ರಾಜಕೀಯ ಜಿದ್ದಾಜಿದ್ದಿ ಶುರುವಾಗಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ವಿರುದ್ಧ ಬಿಜೆಪಿ ಶಾಸಕ ಮುನಿರತ್ನ ಓಪನ್ ವಾರ್ ಶುರು ಮಾಡಿದ್ದಾರೆ. ಅನುದಾನದ ವಿಚಾರದಲ್ಲಿ ಡಿಕೆ ಬ್ರದರ್ಸ್ ವಿರುದ್ಧ ಮುನಿರತ್ನ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ನಡೆಸಿದ್ರು. ಸೀನ್ ಕಟ್ ಮಾಡಿದ್ರೆ, ಮುನಿರತ್ನ ಎಲ್ಲಿದ್ರು ಗೊತ್ತಾ ವೀಕ್ಷಕರೇ. ಡಿಸಿಎಂ ಡಿಕೆ ಶಿವಕುಮಾರ್ ಅವರ ಕಾಲಿಗೆ ಎರಗ್ತಾ ಇದ್ರು. ಇದ್ರ ಹಿಂದಿರೋದು ಒಂದು ಅನುದಾನದ ಕಥೆ ವೀಕ್ಷಕರೇ. ಮುನಿರತ್ನ ಅವ್ರು ಬೆಂಗಳೂರಿನ(Bengaluru) ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕ. ಎರಡು ಬಾರಿ ಕಾಂಗ್ರೆಸ್‌ನಿಂದ, ಎರಡು ಬಾರಿ ಬಿಜೆಪಿಯಿಂದ.. ಹೀಗೆ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರೋ ಸೋಲಿಲ್ಲದ ಸರದಾರ. ಕಾಂಗ್ರೆಸ್‌ನಲ್ಲಿದ್ದಾಗ(COngress) ಡಿಕೆ ಸಹೋದರರ ಅತ್ಯಂತ ಆತ್ಮೀಯರಾಗಿದ್ದ ಮುನಿರತ್ನ, ಇದೀಗ ಅದೇ ಡಿಕೆ ಅಣ್ತಮ್ಮಾಸ್ ವಿರುದ್ಧ ನಿಂತಿದ್ದಾರೆ. ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ನೀಡಲಾಗಿದ್ದ ಅನುದಾನವನ್ನು ಡಿಸಿಎಂ ಡಿಕೆ ಶಿವಕುಮಾರ್ ಬೇರೆ ಕ್ಷೇತ್ರಗಳಿಗೆ ಹಂಚಿಕೆ ಮಾಡಿದ್ದಾರೆ ಅಂತ ಮುನಿರತ್ನ ಆರೋಪಿಸಿದ್ದಾರೆ. ಇದ್ರಲ್ಲಿ ಸ್ಥಳೀಯ ಸಂಸದ ಡಿ.ಕೆ ಸುರೇಶ್ ಕೈವಾಡವೂ ಇದೆ ಅಂತ ಮುನಿರತ್ನ ನೇರ ಆರೋಪ ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ:  ಅನ್ಯ ಜಾತಿ ಯುವಕನನ್ನ ಪ್ರೀತಿಸಿದ್ದಕ್ಕೆ ಮಗಳ ಕೊಂದ ತಂದೆ..!

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more