ಕಾಂಗ್ರೆಸ್ ಸರ್ಕಾರ 50:50 ಒಪ್ಪಂದ ಸೀಕ್ರೆಟ್, ಅಂದರ್-ಬಾಹರ್ ಆಟದ ಸುಳಿವು ಕೊಟ್ಟ ಕೈ ಮಿನಿಸ್ಟರ್!

Aug 16, 2023, 3:15 PM IST

ಬೆಂಗಳೂರು(ಆ.16) ಎರಡೂವರೆ ವರ್ಷ ಸಿದ್ದರಾಮಯ್ಯ, ಮುಂದಿನ ಎರಡೂವರೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿ. ಈ ಸೂತ್ರದಲ್ಲಿ ಕಾಂಗ್ರೆಸ್ ಸರ್ಕಾರ ಒಪ್ಪಂದ ಮಾಡಿಕೊಂಡಿದೆ ಅನ್ನೋ ಮಾತುಗಳಿಗೆ ಪುಷ್ಠಿ ನೀಡುವಂತೆ ಸಚಿವ ಕೆ ಮುನಿಯಪ್ಪ ನೀಡಿದ ಹೇಳಿಕೆ ಬಿರುಗಾಳಿ ಎಬ್ಬಿಸಿದೆ. ಎರಡೂವರೆ ವರ್ಷಗಳ ನಂತ್ರ ಅಧಿಕಾರ ತ್ಯಾಗ ಮಾಡಬೇಕಿರೋದು ಮಂತ್ರಿಗಳಷ್ಟೇನಾ.? ಅಥವಾ ಇದ್ರಲ್ಲಿ ಸಿಎಂ-ಡಿಸಿಎಂ ಕೂಡ ಸೇರಿದ್ದಾರಾ..? ಅನ್ನೋ ಪ್ರಶ್ನೆ ಇದೀಗ ಎದ್ದಿದೆ.  ಅಧಿಕಾರ ತ್ಯಾಗದ ಮಾತೇ ನಿಜವಾದ್ರೆ, ಎರಡೂವರೆ ವರ್ಷಗಳ ನಂತರ ಸಚಿವರ ಸಂಪುಟದಿಂದ ಬಾಹರ್ ಆಗೋರು ಯಾರು..? ಅಂದರ್ ಆಗೋರು ಯಾರು..?