ನನ್ ಹಿಂದೆ ತಿರುಗಿದವರು ಮಂತ್ರಿ, ದಿಲ್ಲಿ ಕಾಂಗ್ರೆಸ್ ಸಭೆ ಬೆನ್ನಲ್ಲೇ ರಾಯರೆಡ್ಡಿ ಅಸಮಾಧಾನ!

Aug 2, 2023, 10:19 PM IST

ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಒಗ್ಗಟ್ಟಿನ ಸಭೆ ನಡೆಸಿದರೆ, ರಾಜ್ಯದಲ್ಲಿ ನಾಯಕ ಬಸವರಾಜ್ ರಾಯರೆಡ್ಡಿ ಆಡಿದ ಮಾತುಗಳು ಪಕ್ಷಕ್ಕೆ ತಲೆನೋವಾಗಿ ಪರಿಣಿಸಿದೆ. ನನ್ನ ಹಿಂದೆ ತಿರುಗುತ್ತಿದ್ದವರೆಲ್ಲಾ ಇದೀಗ ಮಂತ್ರಿಯಾಗಿದ್ದಾರೆ. ನಾನು ಅವರ ಅಪ್ಪನ ಜೊತೆ ರಾಜಕೀಯ ಮಾಡಿದ್ದೇನೆ ಎಂದು ರಾಯರೆಡ್ಡಿ ಹೇಳಿದ್ದಾರೆ. ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯರ ಜೊತೆ ನಾನು ರಾಜಕೀಯ ಮಾಡಿದ್ದೇನೆ. ಮಂತ್ರಿಯಾಗಿ ಕೆಲಸ ಮಾಡಿದ್ದೇನೆ ಎಂದು ಬಸವರಾಜ್ ರಾಯರೆಡ್ಡಿ ಅಸಮಧಾ ಹೊರಹಾಕಿದ್ದಾರೆ. ಅತ್ತ ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಸಂಪುಟ ಸದಸ್ಯರು, ಹಿರಿಯ ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ರಾಹುಲ್ ಗಾಂಧಿ, ಬಂಡಾಯ ಹೇಳಿಕೆ, ಅಸಮಧಾನ ಬಹಿರಂಗವಾಗಿ ಹೊರಹಾಕದಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಇದರ ಬೆನ್ನಲ್ಲೇ ರಾಯರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ.